i
ಮೇ-7 ರಿಂದ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವ ಆಯೋಜನೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಎಸ್ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಮೇ-7 ರಿಂದ 9 ರವರೆಗೆ ಮೂರು ದಿನಗಳ ಕಾಲ ಸ್ಫೂರ್ತಿ-೨೦೨೪ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವ ಆಯೋಜಿಸಲಾಗಿದೆ.
ಮೇ-7 ರಂದು ಬೆಳಿಗ್ಗೆ ೧೦.೩೦ಗಂಟೆಗೆ ಜಯದೇವ ವೇದಿಕೆಯಲ್ಲಿ ಉದ್ಘಾಟನಾ ಸಮಾರಂಭ ನಡೆಯಲಿದೆ. ವಿದ್ಯಾರ್ಥಿಗಳಿಗಾಗಿ ಸಾಂಪ್ರದಾಯಕ ಉಡುಗೆ-ತೊಡುಗೆಗಳ -ಎತ್ನಿಕ್-ಡೇ ಆಯೋಜಿಸಲಾಗಿದೆ. ಸಂಜೆ ಕಾರ್ಯಕ್ರಮದಲ್ಲಿ ಸಂಜೆ ೬ ಗಂಟೆಗೆ ಡ್ಯಾನ್ಸ್ ಜೆ.ಎಂ.ಐ.ಟಿ. ಡ್ಯಾನ್ಸ್ ನೃತ್ಯ ಸ್ಪರ್ಧೆ ನಡೆಯಲಿದೆ. ಮೇ-8 ರಂದು ಸಂಜೆ ೬.೦೦ಗಂಟೆಗೆ ಮಿಸ್ಟರ್ ಜೆಎಂಐಟಿ ಸ್ಪರ್ಧೆ ನಡೆಯಲಿದೆ. ಮೇ-9 ರಂದು ಸಂಜೆ ೬.೦೦ಗಂಟೆಗೆ ಸಮಾರೋಪ ಸಮಾರಂಭ ನಡೆಯಲಿದ್ದು, ಕಾರ್ಯಕ್ರಮಕ್ಕೆ ಗೌರವಾನ್ವಿತ ಅತಿಥಿಗಳಾಗಿ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠ ಹಾಗೂ ಎಸ್.ಜೆ.ಎಂ.ವಿದ್ಯಾಪೀಠದ ಆಡಳಿತಮಂಡಳಿ ಅಧ್ಯಕ್ಷ ಶಿವಯೋಗಿ ಸಿ ಕಳಸದ, ಆಡಳಿತಮಂಡಳಿ ಸದಸ್ಯರುಗಳಾದ ಎಸ್.ಎನ್.ಚಂದ್ರಶೇಖರ್, ಡಾ. ಪಿ.ಎಸ್.ಶಂಕರ್, ಡಾ.ಬಸವಕುಮಾರ ಸ್ವಾಮಿಗಳು ಆಗಮಿಸಲಿದ್ದು, ಮುಖ್ಯ ಅತಿಥಿಗಳಾಗಿ ಹಾವೇರಿ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಸುರೇಶ್ ಹೆಚ್.ಜಂಗಮಶೆಟ್ಟಿ, ಟೆನಿಕೋ ಪವರ್ ಟ್ರೈನ್ ಹೆಡ್ -ಇಂಡಿಯಾ ಟೆಕ್ನಿಕಲ್ ಸೆಂಟರ್ನ ಅಪ್ಲಿಕೇಶನ್ ಮತ್ತು ಇಂಜಿನಿಯರಿಂಗ್ ನಿರ್ದೇಶಕ ಹಾಗೂ ಕಾಲೇಜಿನ ಹಳೆಯ ವಿದ್ಯಾರ್ಥಿ ಶ್ರೀಧರ್ ರಾಮಕೃಷ್ಣ ಪಾಲ್ಗೊಳ್ಳಲಿದ್ದು, ಪ್ರಾಚಾರ್ಯ ಡಾ.ಭರತ್ ಪಿ ಬಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪ್ರಾಚಾರ್ಯ ಡಾ. ಭರತ್ ಪಿ ಬಿ ಹಾಗೂ ಸ್ಫೂರ್ತಿ-೨೦೨೪ರ ಮುಖ್ಯ ಸಂಚಾಲಕ ಡಾ.ಬಿ ಜಿ ಕುಮಾರಸ್ವಾಮಿ ತಿಳಿಸಿದ್ದಾರೆ.