i
ಪ್ರವಾಸಿಗರ ಬಸ್ ಅಪಘಾತ : ಇಬ್ಬರು ಸಾವು…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಜಿಲ್ಲೆಯ ಗಡಿಭಾಗ ಗೇರುಸೊಪ್ಪದಲ್ಲಿ ಬಸ್ವೊಂದು ಬ್ರೇಕ್ ಫೇಲ್ ಆಗಿ ಅಪಘಾತಕ್ಕೀಡಾಗಿದೆ. ಘಟನೆಯಲ್ಲಿ ಇಬ್ಬರು ಸಾವನ್ನಪ್ಪಿದ್ದು 30 ಕ್ಕೂ ಹೆಚ್ಚು ಪ್ರಯಾಣಿಕರು ಗಂಭೀರವಾಗಿ ಗಾಯಗೊಂಡಿದ್ದಾರೆ. ಗೇರುಸೊಪ್ಪ ಸಮೀಪದ ಸುಳಿಮಕ್ಕಿ ಕ್ರಾಸ್ನಲ್ಲಿ ಘಟನೆ ಸಂಭವಿಸಿದೆ. ಪ್ರವಾಸಕ್ಕೆಂದು 2 ಬಸ್ನಲ್ಲಿ ಬಂದಿದ್ದ ಗೌರಿಬಿದನೂರು ತಾಲೂಕಿನ ಗದರೆ- ಮಲಸಂದ್ರದ ಗ್ರಾಮಸ್ಥರು ಜೋಗ ಜಲಪಾತ ನೋಡಿಕೊಂಡು ಗೇರುಸೊಪ್ಪದಿಂದ ಹೊನ್ನಾವರ ಕಡೆಗೆ ಹೊರಟಿದ್ದರು. ಈ ವೇಳೆ ಗೇರುಸೊಪ್ಪ ಸಮೀಪ ಒಂದು ಬಸ್ನ ಬ್ರೇಕ್ ಫೇಲ್ ಆಗಿ ಪಲ್ಟಿಯಾಗಿದೆ.