i
ಸಿಡಿಲಿಗೆ ತೋಟದಲ್ಲಿದ್ದ ಎರಡು ತೆಂಗಿನ ಮರಗಳು ಭಸ್ಮ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
ತಾಲ್ಲೂಕಿನ ಗಡಿಭಾಗದ ಗ್ರಾಮಗಳಲ್ಲಿ ಸೋಮವಾರದಿಂದ ಆರಂಭವಾದ ಮಳೆ ಮಂಗಳವಾರವೂ ಸಹ ಮುಂದುವರೆದಿದೆ. ಮಂಗಳವಾರ ಸಂಜೆ ಗಾಳಿಯಿಂದ ಕೂಡಿದ ಮಳೆ ಆಗಮಿಸಿದ್ದು, ಇದೇ ಸಂದರ್ಭದಲ್ಲಿ ಸಿಡಿಲು ಹೊಡೆದು ಬೂದಿಹಳ್ಳಿ ಗ್ರಾಮದ ಬುಡ್ಡೆಪ್ಪರಈರಣ್ಣನವರ ತೋಟದಲ್ಲಿದ್ದ ಎರಡು ತೆಂಗಿನ ಮರಗಳು ಹೊತ್ತಿಉರಿದಿವೆ.
ಸಿಡಿಲು ನೇರವಾಗಿ ಮರದ ಮಧ್ಯಭಾಗಕ್ಕೆ ಹೊಡೆದಿದ್ದು, ಸಿಡಿಲಿನ ಬೆಂಕಿ ಉರಿಯುತ್ತಲೇ ಇತ್ತು. ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಬುಡ್ಡೆಪ್ಪರಈರಣ್ಣ ಪುತ್ರ ಬೂದಿಹಳ್ಳಿರಾಜು ಸೇರಿದಂತೆ ಕೂಲಿಕಾರ್ಮಿಕರು ದಿಢೀರ್ ಹೊಡೆದ ಸಿಡಿಲಿಗೆ ಭಯಭೀತರಾದರು.