i
ಅಕ್ಷಯ…ತೃತೀಯ
ಚಂದ್ರವಳ್ಳಿ ನ್ಯೂಸ್, ದಾವಣಗೆರೆ:
ಸಾಲ ಮಾಡಿಯಾದರೂ
ತುಪ್ಪ ತಿನ್ನಿರಿ
ಅನ್ನೋ ಮಾತಿದೆ
ಸುಂದರ ಸಧೃಡ
ಬದುಕು ನಮ್ಮದಾಗಲಿ
ಎನ್ನುವ ಆಶಯ
ಯಾರಿಗಿಲ್ಲ ಹೇಳಿ
ಹಿಂದೆ ಪಾಂಡವರು
ವನ್ವಾಸಿತರಾದಾಗ
ಕೃಷ್ಣನಿಟ್ಟ ಅನ್ಯದಗಳಿನ ಅಕ್ಷಯ ಪಾತ್ರೆ
ಕೇಳಿದ್ದನು ಕೊಟ್ಟ
ಮಹಾಭಾರತದ
ಕಹಾನಿ ನಮಗೆಲ್ಲರಿಗೂ
ಗೊತ್ತು
ಅದು ಹಾಗೇ
ಕಂಟಿನ್ಯೂ ಆಗಿ
ಬಂಗಾರದ ಅಂಗಡಿಗೆ
ಬಂತು
ಬಂಗಾರ ತಿಕ್ಕುವ
ಅಕ್ಕಸಾಲಿಗ
ಮಾಡಿಟ್ಟ
ಬಳೆ, ಲೊಳಕು ,
ಮೂಗುತಿ ,ಉಂಗುರ
ಗಳಿಗೊಂಡು ಗತಿ
ಕಾಣಿಸಲು ಮಾಡಿದ ಕರಾಮತ್ತೆ
ಅಕ್ಷಯ ತೃತೀಯ
ಕ್ಷಯವಾಗಬಾರದು
ಎನ್ನುವ ಒಂದೇ
ಸೂತ್ರಕೆ ಬಂಗಾರವೇಕೆ
ಬೇಕು ,
ಬಾಳಿನ ಭದ್ರತೆ
ಸುಖ ಜೀವನದ
ಸಧೃಢತೆಗೆ ಒಂದು
ಗುಲಗಂಜಿ ಸಾಕು
ಹಳದಿ ವಸ್ತ್ರದಲಿ
ಕಾಪಿಟ್ಟು ಸಂಕಲ್ಪ ಮಾಡಿದರೂ
ಅಕ್ಷಯ ತೃತೀಯ
ಅಕ್ಷಯ ಕ್ಷಯ
ಆಗದಿರಲು
ದಾನ ಮಾಡಿ
ಅನ್ನ,ವಸ್ತ್ರ,ಗೋ,ನೀರು
ವಸ್ತು ಏನೇ ಇರಬಹುದು
ಬಂಗಾರ ಕೊಂಡು
ಇಟ್ಟಷ್ಟೇ ಶ್ರೇಷ್ಠ,
ಅದು ಕೂಡ
ಅಕ್ಷಯ ತೃತೀಯ
ಬಂಗಾರವೀಗ
ಅರವತ್ತು ಸಾವಿರ
ಇರೋ ಬಂಗಾರನ
ವೈಟ್ ಗೋಲ್ಡ್ ಗೆ
ಕನ್ವರ್ಟ್ ಮಾಡುವವರೂ
ಇದ್ದಾರೆ ,ಬಂಗಾರದ ಬೆಲೆ
ದಿನೇ ದಿನೇ ದುಬಾರಿ
ಇನ್ನೆಲ್ಲಿಯ ಖರೀದಿ
ಇನ್ನೆಲ್ಲಿಯ
ಅಕ್ಷಯ ತೃತೀಯ
ಏನಿದು
ಅಕ್ಷಯ ತೃತೀಯ
ನೀವು ಹೇಳಿ
ನಿಮ್ಮ ಉತ್ತರಕ್ಕಾಗಿ
ಕಾಯುತ್ತಿರುವ
ಕವಿತೆ-ಗುಜ್ಜಾರ್, ದಾವಣಗೆರೆ