i
ವಿದ್ಯಾರ್ಥಿ ಜೀವನದಲ್ಲಿ ಪಠ್ಯ ಕಲಿಕೆಗಿಂತ ಹೊರಜಗತ್ತಿನಲ್ಲಿ ಕಲಿಕೆ ಬಹಳ ಮುಖ್ಯ..
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ನಗರದ ಎಸ್ಜೆಎಂ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ಫೂರ್ತಿ-2024ರ ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವಕ್ಕೆ ಕನ್ನಡದ ಖ್ಯಾತ ಚಿತ್ರನಟ ರಿಷಿ ಹಾಗೂ ರಾಮನ ಅವತಾರ ಚಲನಚಿತ್ರದ ನಿರ್ದೇಶಕ ವಿಕಾಸ್ ಪಂಪಾಪತಿ ಹಾಗೂ ಚಿತ್ರತಂಡದವರು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಕನ್ನಡದ ಖ್ಯಾತ ಚಿತ್ರ ನಟ ರಿಷಿ ಮಾತನಾಡಿ, ವಿದ್ಯಾರ್ಥಿ ಜೀವನವನ್ನು ಖುಷಿಯಿಂದ ಅನುಭವಿಸಬೇಕು. ಕಲಿಕೆ ಬಹಳಷ್ಟಿದೆ. ವಿದ್ಯಾರ್ಥಿ ಜೀವನದಲ್ಲಿ ಕಲಿಕೆಗಿಂತ ಹೆಚ್ಚಿನದಾಗಿ ಹೊರಜಗತ್ತಿನಲ್ಲಿ ಕಲಿಯುವುದು ಸಾಕಾಷ್ಟಿದೆ. ವಿದ್ಯಾಬ್ಯಾಸದ ನಂತರ ನಿಮಗೆ ಇಷ್ಟವಾದ ಕ್ಷೇತ್ರವನ್ನು ಆಯ್ದುಕೊಂಡು ಜೀವನವನ್ನು ರೂಪಿಸಿಕೊಳ್ಳಿ. ಸಾಮಾಜಿಕ ಜಾಲತಾಣಗಳ ಬಳಕೆಗೆ ಆದಷ್ಟೂ ಕಡಿಮೆ ಸಮಯ ಮೀಸಲಿಡಿ. ಚಿತ್ರದುರ್ಗದ ಜನತೆ ನನ್ನ ಚಿತ್ರಗಳನ್ನು ಉತ್ತಮವಾಗಿ ಸ್ವೀಕರಿಸಿದ್ದಾರೆ. ನನ್ನ ರಾಮನ ಅವತಾರ ಚಲನಚಿತ್ರ ಇದೇ ೧೦ನೇ ತಾರೀಖು ಬಿಡುಗಡೆಯಾಗಲಿದೆ. ಈ ಚಿತ್ರವನ್ನು ಚಿತ್ರದುರ್ಗದವರೇ ಆದ ವಿಕಾಸ್ ಪಂಪಾಪತಿ ನಿರ್ದೇಶನ ಮಾಡಿದ್ದಾರೆ. ಚಿತ್ರದುರ್ಗ ಹುಡುಗ ನಿರ್ದೇಶಿಸಿರುವ ಈ ಚಿತ್ರವನ್ನು ಪ್ರೋತ್ಸಾಹಿಸಿ ಎಂದು ನುಡಿದರು.
ವೇದಿಕೆಯಲ್ಲಿ ಪ್ರಾಂಶುಪಾಲ ಡಾ.ಭರತ್.ಪಿ.ಬಿ, ಸ್ಫೂರ್ತಿ2024ರ ಮುಖ್ಯ ಸಂಚಾಲಕ ಡಾ.ಬಿ ಜಿ ಕುಮಾರಸ್ವಾಮಿ, ರಾಮನ ಅವತಾರ ಚಲನಚಿತ್ರದ ನಿರ್ದೇಶಕ ವಿಕಾಸ್ ಪಂಪಾಪತಿ ಹಾಗೂ ಚಿತ್ರತಂಡದವರು, ರೂಪದರ್ಶಿ ಡಾ. ಸೃಜನಾ ವೀರೇಂದ್ರ ಕುಮಾರ್, ಫಿಟ್ನೆಸ್ ಕೋಚ್ ಶಿವರಾಜ್ ಪೂಜಾರಿ, ಸಂತೋಷ್ ಇ, ವಿವಿಧ ಇಲಾಖಾ ಮುಖ್ಯಸ್ಥರು ಸಿಬ್ದಂದಿ ವರ್ಗದವರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳು ಪ್ಯಾಷನ್ ಶೋ ನಡೆಸಿಕೊಟ್ಟರು.