i
ಲೋಕಸಭಾ ಅಭ್ಯರ್ಥಿ, ಮಹಿಳಾ ಐಎಎಸ್ ಅಧಿಕಾರಿಯ ಸ್ವಯಂ ನಿವೃತ್ತಿಗೆ ಹಿನ್ನಡೆ…
ಚಂದ್ರವಳ್ಳಿ ನ್ಯೂಸ್, ನವದೆಹಲಿ :
ಬಟಿಂಡಾ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿಗೆ ದೊಡ್ಡ ಹಿನ್ನಡೆಯಾಗಿದ್ದು, ಪಂಜಾಬ್ ಸರ್ಕಾರವು ಐಎಎಸ್ ಅಧಿಕಾರಿ ಪರಂಪಲ್ ಕೌರ್ ಸಿಧು ಅವರ ರಾಜೀನಾಮೆ ಕಾರಣಗಳು “ಸುಳ್ಳು” ಎಂದು ಹೇಳಿದೆ. ಅವರ ಸ್ವಯಂ ನಿವೃತ್ತಿ ಕೋರಿಕೆಯನ್ನು ತಿರಸ್ಕರಿಸಿದ್ದು, ತಕ್ಷಣವೇ ತನ್ನ ಕರ್ತವ್ಯವನ್ನು ಪುನರಾರಂಭಿಸುವಂತೆ ಸೂಚಿಸಿದೆ. ಕೇಂದ್ರದ ಸಿಬ್ಬಂದಿ ಮತ್ತು ತರಬೇತಿ ಇಲಾಖೆಯು ಆಕೆಯ ರಾಜೀನಾಮೆಯನ್ನು ಅಂಗೀಕರಿಸುವ ಮೂಲಕ ಔಪಚಾರಿಕವಾಗಿ ಬಿಡುಗಡೆ ಮಾಡಿದ ಕೆಲವು ದಿನಗಳ ನಂತರ ಈ ಬೆಳವಣಿಗೆ ನಡೆದಿದೆ.
ಪಂಜಾಬ್ ಕೇಡರ್ 2011ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿರುವ ಪರಂಪಲ್ ಕೌರ್ ಅವರು ಬಿಜೆಪಿ ಟಿಕೆಟ್ನಲ್ಲಿ ಬಟಿಂಡಾ ಲೋಕಸಭಾ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿದ್ದಾರೆ. ಮೂರು ತಿಂಗಳ ನೋಟಿಸ್ ಅವಧಿಯ ಷರತ್ತನ್ನು ಸಹ ಮನ್ನಾ ಮಾಡಬೇಕೆಂದು ಅವರು ಕಳೆದ ತಿಂಗಳು ತನ್ನ ರಾಜೀನಾಮೆ ಪತ್ರದಲ್ಲಿ ಮನವಿ ಮಾಡಿದ್ದರು. ಸಿಧು ಅಕಾಲಿದಳದ ನಾಯಕ ಸಿಕಂದರ್ ಸಿಂಗ್ ಮಾಲುಕಾ ಅವರ ಸೊಸೆಯಾಗಿದ್ದ, ರಾಜೀನಾಮೆ ನಂತರ ಅವರು ಬಿಜೆಪಿ ಸೇರಿದ್ದರು. ಎಪ್ರಿಲ್ 11 ರಂದು ಅವರು ಬಿಜೆಪಿಗೆ ಸೇರ್ಪಡೆಯಾದ ನಂತರ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಅವರು ಐಎಎಸ್ ಅಧಿಕಾರಿ ಸ್ಥಾನಕ್ಕೆ ರಾಜ್ಯ ಸರ್ಕಾರ ತನ್ನ ರಾಜೀನಾಮೆ ಅಂಗೀಕರಿಸಿಲ್ಲ ಎಂದು ಹೇಳಿದ್ದಾರೆ.