i
ಮಾಜಿ ಪ್ರಧಾನ ಮಂತ್ರಿ ದೇವೆಗೌಡ್ರ ಸಾಧನೆ ಮೆಚ್ಚಿ ಅಭಿನಂದಿಸಿದ ಅತೀ ಹಿಂದುಳಿದ ಮಠಾಧೀಶರ ಮಹಾಸಭಾ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಮಾಜಿ ಪ್ರಧಾನ ಮಂತ್ರಿ ಹೆಚ್.ಡಿ.ದೇವೆಗೌಡರವರನ್ನು ಅತೀ ಹಿಂದುಳಿದ ಮಠಾಧೀಶರ ಮಹಾಸಭಾದ ಸ್ವಾಮೀಜಿಗಳು ಬೆಂಗಳೂರಿನ ಅವರ ನಿವಾಸದಲ್ಲಿ ಭೇಟಿ ಮಾಡಿ ಆರೋಗ್ಯ ವಿಚಾರಿಸಿದರಲ್ಲದೆ ಗೌಡರ ಸಾಧನೆಗೆ ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಇದೇ ಸಂದರ್ಭದಲ್ಲಿ ಈಶ್ವರ ಪ್ರಣಿಧಾನ ಬೋಧಿಸಿ ಈಶ್ವರ ಅನುಗ್ರಹ ಮಾಡಿರುತ್ತಾರೆ ಹಾಗೂ ಬಸವ ಜಯಂತಿಯ ಶುಭಾಶಯಗಳನ್ನು ಸ್ವಾಮೀಜಿಗಳು ಕೋರಿ ಮಹಾ ವಿಭೂತಿ ನೀಡಿದ್ದಾರೆ.
ಮಾಜಿ ಪ್ರಧಾನಮಂತ್ರಿಗಳಾದ ತಾವುಗಳು ಜಾತ್ಯತೀತ ನಾಯಕರು. ದೇಶ ಮತ್ತು ಕರ್ನಾಟಕ ರಾಜ್ಯಕ್ಕೆ ಅಪಾರ ಕೊಡುಗೆ ನೀಡಿದ್ದೀರಿ ಎಂದು ಅತಿ ಹಿಂದುಳಿದ ಮಠಾಧೀಶರ ಮಹಾಸಭಾ ರಾಷ್ಟ್ರೀಯ ಅಧ್ಯಕ್ಷರಾದ ಶ್ರೀ ಬಸವ ನಾಗಿದೇವ ಶರಣರು, ಸಭಾದ ರಾಜ್ಯ ಪ್ರಧಾನ ಕಾರ್ಯದರ್ಶಿ ಶ್ರೀ ಸರ್ದಾರ್ ಸೇವಾಲಾಲ್ ಸ್ವಾಮೀಜಿ ಹಾಗೂ ಶ್ರೀ ನಾಗಸಾಧುಗಳು ಹಿಮಾಲಯದ ಪರಮ ಪೂಜ್ಯರುಗಳು ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೆ ಶಾಂತಿ, ಸಮಾಧಾನ, ಆಯಸ್ಸು, ಆರೋಗ್ಯ ನೀಡಲೆಂದು ಆರ್ಶೀವದಿಸಿದರು.