![](https://www.chandravallinews.com/wp-content/uploads/2024/05/WhatsApp-Image-2024-05-14-at-8.15.29-PM.jpeg)
i
ಮೇ.19 ರಂದು ಶಿಕ್ಷಕಿ ಮೇದಿನಿ ಕೆಸವಿನಮನೆ ಅವರ ಚೊಚ್ಚಲ ಕೃತಿ ಬಿಡುಗಡೆ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ಆಯನೂರಿನ ಶಿಕ್ಷಕಿ, ಬರಹಗಾರ್ತಿ ಮೇದಿನಿ ಕೆಸವಿನಮನೆ ಅವರ ಚೊಚ್ಚಲ ಕೃತಿ ಮಿಸ್ಸಿನ ಡೈರಿ ಮೇ ೧೯ರಂದು ಬೆಂಗಳೂರಿನಲ್ಲಿ ಬಿಡುಗಡೆಯಾಗಲಿದೆ. ವೀರಲೋಕ ಪ್ರಕಾಶನದಿಂದ ಪ್ರಕಟಿತವಾಗಿರುವ ಈ ಕೃತಿಯು ಅನುಭವ ಕಥನವಾಗಿದ್ದು, ಬೆಂಗಳೂರಿನ ಚಾಮರಾಜಪೇಟೆಯ ಕಸಾಪ ಭವನದದಲ್ಲಿ ಬೆಳಿಗ್ಗೆ ೧೦ ಗಂಟೆಗೆ ಲೋಕಾರ್ಪಣೆಯಾಗಲಿದೆ.
ಮುಖ್ಯ ಅತಿಥಿಗಳಾಗಿ ಕೃಷಿ ವಿಜ್ಞಾನಿ, ಕಾದಂಬರಿಕಾರ ಪ್ರೊ. ಕೆ ಎನ್ ಗಣೇಶಯ್ಯ, ಬರಹಗಾರ ಜೋಗಿ, ಉಪನ್ಯಾಸಕಿ, ಲೇಖಕಿ ಸಂಧ್ಯಾರಾಣಿ, ಉಪನ್ಯಾಸಕ, ಬರಹಗಾರ ಶಿವಕುಮಾರ ಮಾವಲಿ ಆಗಮಿಸುವರು.