![](https://www.chandravallinews.com/wp-content/uploads/2024/05/WhatsApp-Image-2024-05-16-at-5.36.59-PM.jpeg)
i
ಮೇ.19 ರಂದು ಶಿವಧೂತ ಗುಳಿಗ ನಾಟಕ ಪ್ರದರ್ಶನ
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ :
ನಗರದ ಅನಿಕೇತನ ಸೇವಾ ಟ್ರಸ್ಟ್ ವತಿಯಿಂದ ಮೇ ೧೯ರ ಸಂಜೆ ೫:೩೦ಕ್ಕೆ ಕುವೆಂಪು ರಂಗಮoದಿರದಲ್ಲಿ ಶಿವದೂತ ಗುಳಿಗ ಎಂಬ ವಿಭಿನ್ನ ಶೈಲಿಯ ಕನ್ನಡ ನಾಟಕವನ್ನು ಏರ್ಪಡಿಸಲಾಗಿದೆ.
ಪತ್ರಿಕಾಭವನದಲ್ಲಿ ಗುರುವಾರ ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ವಿವರ ನೀಡಿದ ಟ್ರಸ್ಟ್ ಅಧ್ಯಕ್ಷ ರಮೇಶ್ಬಾಬು ಜಾಧವ್, ಈ ನಾಟಕವು ೬೩೬ ಪ್ರದರ್ಶನವನ್ನು ಕಂಡಿದೆ. ಮಂಗಳೂರಿನ ವಿಜಕುಮಾರ್ ಕೊಡಿಯಾಲಬೈಲ್ ರಚಿಸಿದ ಈ ನಾಟಕÀ ಭೂತದ ಶಿವಪ್ರೇಮ ಕುರಿತಾಗಿದೆ. ಕಲಾಸಂಗಮ ಕಲಾವಿದರು ಇದನ್ನು ಅಭಿನಯಿಸುವರು. ಇದರಲ್ಲಿ ಸುಮಾರು ೩೦ ಕಲಾವಿದರಿದ್ದಾರೆ. ಕಾಂತಾರ ಚಲನಚಿತ್ರದ ಗುರುವ ಪಾತ್ರಧಾರಿ ಸ್ವರಾಜ್ ಶೆಟ್ಟಿ ಮುಖ್ಯ ಭೂಮಿಕೆಯಲ್ಲಿದ್ದಾರೆ ಎಂದರು.
ನಾಟಕಕ್ಕೆ ಪ್ರವೇಶ ಧನವಿದೆ. ಸಂಗೀತ ಸಂಯೋಜನೆ ಅದ್ಭುತವಾಗಿದೆ. ಭೂತದ ಆಗಮನ, ಓಡಾಡುವಿಕೆಯನ್ನು ಜನಮನದಲ್ಲಿ ಅಚ್ಚಳಿಯದಂತೆ ತೋರಿಸಲಾಗುತ್ತಿದೆ. ಎ ಕೆ ವಿಜಯ್ ಎನ್ನುವವರು ಸಂಗೀತ ನೀಡಿದ್ದಾರೆ. ಅತಿ ಹೆಚ್ಚಿನ ಜನಮನ್ನಣೆ ಪಡೆದ ಈ ನಾಟಕ ವಿದೇಶÀದಲ್ಲಿಯೂ ಪ್ರಖ್ಯಾತಿ ಗಳಿಸಿದೆ ಎಂದರು.
ಟಿಕೆಟ್ಗಾಗಿ ರಮೇಶ್ಬಾಬು- ೯೭೪೨೯೦೬೦೭೩, ವಿಶ್ವೇಶ್ವ್ವರಯ್ಯ- ೯೪೮೦೦೫೮೩೩೯ ಮತ್ತು ವೆಂಕಟೇಶ್- ೯೮೮೬೯೯೨೩೮೪ ಇವರನ್ನು ಸಂಪರ್ಕಿಬಹುದು ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಶ್ವೇಶ್ವರಯ್ಯ, ಸತೀಶ್ಕುಮಾರ್ ಶೆಟ್ಟಿ ಹಾಜರಿದ್ದರು.