Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

​ಹರಿಯಬ್ಬೆಯಲ್ಲಿ ಗಾಂಧೀಜಿ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ

Advertisement

ಚಂದ್ರವಳ್ಳಿ ನ್ಯೂಸ್, ​ಹಿರಿಯೂರು: ದಾವಣಗೆರೆ ವಿಶ್ವವಿದ್ಯಾನಿಲಯ ಹಾಗೂ ಬೆಂಗಳೂರಿನ ಕರ್ನಾಟಕ ಗಾಂಧಿ ಸ್ಮಾರಕ ನಿಧಿ ಸಹಯೋಗದಲ್ಲಿ, ಹರಿಯಬ್ಬೆಯ ದಾವಣಗೆರೆ ವಿವಿ ಘಟಕ ಕಾಲೇಜಿನಲ್ಲಿ 'ಗಾಂಧೀಜಿ ಅವರ ಬಹುಶಿಸ್ತೀಯ ನೋಟಗಳು' ಎಂಬ ವಿಷಯದ ಕುರಿತು ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣ ಹಾಗೂ 'ಸತ್ಯಶೋಧನೆ-೧೦೦' ಪುಸ್ತಕ ಬಿಡುಗಡೆ ಸಮಾರಂಭವನ್ನು ಹಮ್ಮಿಕೊಳ್ಳಲಾಗಿದೆ.

ಕಾರ್ಯಕ್ರಮದ ವಿವರ:
ಈ ವಿಶೇಷ ವಿಚಾರ ಸಂಕಿರಣವು ದಿನಾಂಕ ಮೇ ೦೯ ಮತ್ತು ೧೦, ೨೦೨೬ ರಂದು (ಶನಿವಾರ ಮತ್ತು ಭಾನುವಾರ) ನಡೆಯಲಿದೆ.
​ಉದ್ಘಾಟನಾ ಸಮಾರಂಭ (ಮೇ ೦೯):
​ಶನಿವಾರ ಬೆಳಿಗ್ಗೆ ೧೦:೦೦ ಗಂಟೆಗೆ ನಡೆಯುವ ಕಾರ್ಯಕ್ರಮದ ಅಧ್ಯಕ್ಷತೆಯನ್ನು ದಾವಣಗೆರೆ ವಿವಿ ಕುಲಪತಿಗಳಾದ ಪ್ರೊ. ಬಿ. ಡಿ. ಕುಂಬಾರ ಅವರು ವಹಿಸಲಿದ್ದಾರೆ.

ಬೆಂಗಳೂರು ವಿವಿ ಪ್ರಾಧ್ಯಾಪಕ ಹಾಗೂ ಗಾಂಧಿ ಸ್ಮಾರಕ ನಿಧಿಯ ಸದಸ್ಯರಾದ ಪ್ರೊ. ಡಿ. ಕೆ. ಚಿತ್ರಯ್ಯ ಪೂಜಾರ್ ಅವರು ಕಾರ್ಯಕ್ರಮ ಉದ್ಘಾಟಿಸಲಿದ್ದಾರೆ.

ಮುಖ್ಯ ಅತಿಥಿಗಳು:
ಯೋಜನೆ ಹಾಗೂ ಸಾಂಖ್ಯಿಕ ಸಚಿವರು ಮತ್ತು ಚಿತ್ರದುರ್ಗ ಜಿಲ್ಲಾ ಉಸ್ತುವಾರಿ ಸಚಿವರಾದ ಡಿ. ಸುಧಾಕರ್, ವಿಧಾನ ಪರಿಷತ್ ಸದಸ್ಯರಾದ ಡಿ.ಟಿ. ಶ್ರೀನಿವಾಸ್, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ದಾವಣಗೆರೆ ವಿವಿ ಕುಲಸಚಿವ ಎಸ್.ಬಿ. ಗಂಟಿ, ಮತ್ತು ಸಿಂಡಿಕೇಟ್ ಸದಸ್ಯರಾದ ಶಾರದ ಪಾಟೀಲ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ವಿಚಾರ ಗೋಷ್ಠಿಗಳು:
​ಎರಡು ದಿನಗಳ ಕಾಲ ನಡೆಯುವ ಈ ಸಂಕಿರಣದಲ್ಲಿ ಗಾಂಧೀಜಿಯವರ ಜೀವನ ಮತ್ತು ಸಂದೇಶಗಳ ಕುರಿತು ಒಟ್ಟು ನಾಲ್ಕು ಪ್ರಮುಖ ಗೋಷ್ಠಿಗಳು ನಡೆಯಲಿವೆ:
​ಗೋಷ್ಠಿ-೧: 'ಮಹಾತ್ಮ ಗಾಂಧಿಯವರ ಆತ್ಮಚರಿತ್ರೆ ನನ್ನ ಸತ್ಯಾನ್ವೇಷಣೆ ಒಂದು ಅವಲೋಕನ' ಮತ್ತು 'ಗಾಂಧಿ ಚಿಂತನೆಗಳ ಪ್ರಸ್ತುತತೆ'.
​ಗೋಷ್ಠಿ-೨: 'ಗಾಂಧಿ ಪ್ರೇರಿತ ವಿಶ್ವಮಾನ್ಯರು' ಮತ್ತು 'ಕನ್ನಡ ಕವಯಿತ್ರಿಯರು ಕಂಡಂತೆ ಗಾಂಧಿ'.
​ಗೋಷ್ಠಿ-೩: 'ಗಾಂಧಿ ತತ್ವಗಳು' ಮತ್ತು 'ನವೋದಯ ಮತ್ತು ಪ್ರಗತಿಶೀಲ ಸಾಹಿತ್ಯದ ಮೇಲೆ ಗಾಂಧೀಜಿಯವರ ಪ್ರಭಾವ'.
​ಗೋಷ್ಠಿ-೪: 'ಕನ್ನಡ ಕಾವ್ಯಗಳಲ್ಲಿ ಗಾಂಧಿ ದರ್ಶನ' ಮತ್ತು 'ಕನ್ನಡ ಕಾವ್ಯ ಕಂಡ ಗಾಂಧಿ'.

ಈ ಗೋಷ್ಠಿಗಳಲ್ಲಿ ನಾಡಿನ ಖ್ಯಾತ ಸಾಹಿತಿಗಳು ಹಾಗೂ ವಿವಿಧ ವಿಶ್ವವಿದ್ಯಾನಿಲಯಗಳ ಪ್ರಾಧ್ಯಾಪಕರುಗಳು ಸಂಪನ್ಮೂಲ ವ್ಯಕ್ತಿಗಳಾಗಿ ಪಾಲ್ಗೊಳ್ಳಲಿದ್ದಾರೆ.

ಸಮಾರೋಪ ಸಮಾರಂಭ (ಮೇ ೧೦):
​ಭಾನುವಾರ ಮಧ್ಯಾಹ್ನ ನಡೆಯುವ ಸಮಾರೋಪ ಸಮಾರಂಭದಲ್ಲಿ ಬೆಂಗಳೂರಿನ ರಾಜ್ಯ ಒಕ್ಕಲಿಗರ ಸಂಘದ ನಿರ್ದೇಶಕರಾದ ಡಾ. ಜೆ. ರಾಜು ಬೇತೂರು ಪಾಳ್ಯ ಅವರು ಸಮಾರೋಪ ಭಾಷಣ ಮಾಡಲಿದ್ದಾರೆ. ಘಟಕ ಕಾಲೇಜಿನ ಸಂಯೋಜನಾಧಿಕಾರಿಗಳಾದ ಡಾ. ಶಾಂತರಾಜು ಹೆಚ್. ವಿ. ಅವರು ಅಧ್ಯಕ್ಷತೆ ವಹಿಸಲಿದ್ದಾರೆ.

ಈ ಕಾರ್ಯಕ್ರಮಕ್ಕೆ ಹರಿಯಬ್ಬೆ ಗ್ರಾಮಸ್ಥರು, ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಗಾಂಧಿ ಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕೋರಲಾಗಿದೆ.
​ಸ್ಥಳ: ದಾವಣಗೆರೆ ವಿಶ್ವವಿದ್ಯಾನಿಲಯ ಘಟಕ ಕಾಲೇಜು ಆವರಣ, ಹರಿಯಬ್ಬೆ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
​ಹರಿಯಬ್ಬೆಯಲ್ಲಿ ಗಾಂಧೀಜಿ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಶೃಂಗೇರಿ ಮರು ಎಣಿಕೆಯಲ್ಲಿ ಅಕ್ರಮ ಆರೋಪ: ಆಯೋಗಕ್ಕೆ ರಾಜೇಗೌಡ ದೂರುಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರಕ್ಕೆ ಬಲಿಯಾದ ಸುವೇಂದು ಅಧಿಕಾರಿ ಆಪ್ತ; ಪನಿಹಟಿಯಲ್ಲಿ ಬಾಂಬ್ ದಾಳಿ!"ನಮ್ಮಲ್ಲಿ ಡಜನ್ ಮುಖ್ಯಮಂತ್ರಿ ಅಭ್ಯರ್ಥಿಗಳಿದ್ದಾರೆ" - ಕೆ.ಎನ್ ರಾಜಣ್ಣ ಹೊಸ ಬಾಂಬ್!ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದ ಮಹಿಳೆಯ ಆಭರಣ ಕಳವು: ಖತರ್ನಾಕ್ ಮಹಿಳಾ ಸಿಬ್ಬಂದಿ ಪೊಲೀಸ್ ವಶಕ್ಕೆಯಡಿಯೂರಪ್ಪ ‘ಅಭಿಮಾನೋತ್ಸವ’ಕ್ಕೆ ‘ಹಳ್ಳಿಹಕ್ಕಿ’ ಆಕ್ಷೇಪ: ಪೋಕ್ಸೋ ಪ್ರಕರಣ ಮುಂದಿಟ್ಟು ವಿಶ್ವನಾಥ್ ವಾಗ್ದಾಳಿಚುನಾವಣಾ ರಾಜಕೀಯಕ್ಕೆ ‘ಹೆಚ್. ವಿಶ್ವನಾಥ್’ ವಿದಾಯಜಿಲ್ಲಾ ಒಕ್ಕಲಿಗರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಹವಾಮಾನ ವರದಿ: ಬಿಸಿಲ ಧಗೆಯ ನಡುವೆ ಮಳೆಯ ಮುನ್ಸೂಚನೆದಳಪತಿ ವಿಜಯ್ ಹಾದಿಯಲ್ಲಿ ನಿಖಿಲ್ ಕುಮಾರಸ್ವಾಮಿ: ಪುಟ್ಟರಾಜು ಸ್ಫೋಟಕ ಭವಿಷ್ಯ!