Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಯಡಿಯೂರಪ್ಪ ‘ಅಭಿಮಾನೋತ್ಸವ’ಕ್ಕೆ ‘ಹಳ್ಳಿಹಕ್ಕಿ’ ಆಕ್ಷೇಪ: ಪೋಕ್ಸೋ ಪ್ರಕರಣ ಮುಂದಿಟ್ಟು ವಿಶ್ವನಾಥ್ ವಾಗ್ದಾಳಿ

Advertisement

ಚಂದ್ರವಳ್ಳಿ ನ್ಯೂಸ್, ಮೈಸೂರು:
ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ಸಾರ್ವಜನಿಕ ಸೇವೆಯ 50 ವರ್ಷಗಳ ನೆನಪಿಗಾಗಿ ಮೇ 9ರಂದು ಚಿತ್ರದುರ್ಗದಲ್ಲಿ ಆಯೋಜಿಸಲಾಗಿರುವ ಅಭಿಮಾನೋತ್ಸವಕಾರ್ಯಕ್ರಮಕ್ಕೆ ಸ್ವಪಕ್ಷದ ನಾಯಕರಿಂದಲೇ ವಿರೋಧ ವ್ಯಕ್ತವಾಗಿದೆ. ಬಿಜೆಪಿ ವಿಧಾನಪರಿಷತ್ ಸದಸ್ಯ ಹೆಚ್. ವಿಶ್ವನಾಥ್ ಅವರು ಈ ಕಾರ್ಯಕ್ರಮದ ಔಚಿತ್ಯವನ್ನು ಪ್ರಶ್ನಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.

ಗುರುವಾರ ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ವಿಶ್ವನಾಥ್, ಯಡಿಯೂರಪ್ಪ ಅವರ ವಿರುದ್ಧದ ಕಾನೂನು ಹೋರಾಟದ ನಡುವೆ ಇಂತಹ ಸಮಾರಂಭಗಳನ್ನು ನಡೆಸುತ್ತಿರುವುದರ ವಿರುದ್ಧ ಕಿಡಿಕಾರಿದರು.

"ಇದು ರಾಜ್ಯಕ್ಕೆ ಕಪ್ಪುಚುಕ್ಕೆ":
"
ಬಿ.ಎಸ್. ಯಡಿಯೂರಪ್ಪ ಅವರು ಪ್ರಸ್ತುತ ಪೋಕ್ಸೋ (POCSO) ಪ್ರಕರಣದಂತಹ ಅತ್ಯಂತ ಗಂಭೀರ ಆರೋಪವನ್ನು ಎದುರಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ವೈಭವದ ಅಭಿಮಾನೋತ್ಸವ ಮಾಡುವುದು ಎಷ್ಟು ಸರಿ? ಇದು ರಾಜ್ಯದ ಘನತೆಗೆ ತಂದ ಕಪ್ಪುಚುಕ್ಕೆ," ಎಂದು ವಿಶ್ವನಾಥ್ ನೇರವಾಗಿಯೇ ವಾಗ್ದಾಳಿ ನಡೆಸಿದರು. 

ಅಮಿತ್ ಶಾ ಭೇಟಿ ನಡುವೆಯೇ ಆಕ್ಷೇಪ:
ಚಿತ್ರದುರ್ಗದಲ್ಲಿ ನಡೆಯಲಿರುವ ಈ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಭಾಗವಹಿಸಿ ಯಡಿಯೂರಪ್ಪ ಅವರಿಗೆ ಸನ್ಮಾನ ಮಾಡಲಿದ್ದಾರೆ. ಆದರೆ, ಪ್ರಕರಣ ನ್ಯಾಯಾಲಯದಲ್ಲಿರುವಾಗ ಇಂತಹ ಸನ್ಮಾನಗಳು ನಡೆಯಬಾರದು ಎಂಬುದು ವಿಶ್ವನಾಥ್ ಅವರ ವಾದವಾಗಿದೆ. ಇದೇ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೂ ಕಿಡಿಕಾರಿದ ಅವರು, "ವಕೀಲರಾಗಿರುವ ಸಿದ್ದರಾಮಯ್ಯ ಅವರಿಗೆ ಇವೆಲ್ಲಾ ಗೊತ್ತಿಲ್ಲವೇ?" ಎಂದು ಪ್ರಶ್ನಿಸಿದರು.

ಮೇ 9ರ ಕಾರ್ಯಕ್ರಮ: ಬಿಎಸ್ ವೈ ಅವರ 50 ವರ್ಷಗಳ ಜನಸೇವೆಯ ಅಂಗವಾಗಿ ಚಿತ್ರದುರ್ಗದಲ್ಲಿ ಸನ್ಮಾನ ಸಮಾರಂಭ.

ವಿಶ್ವನಾಥ್ ವಿರೋಧ: ಗಂಭೀರ ಪ್ರಕರಣಗಳ ಆರೋಪವಿರುವ ಹಿನ್ನೆಲೆಯಲ್ಲಿ ಕಾರ್ಯಕ್ರಮ ರದ್ದುಪಡಿಸಲು ಆಗ್ರಹ.
ರಾಜಕೀಯ ಸಂಚಲನ: ಅಮಿತ್ ಶಾ ಆಗಮನದ ಬೆನ್ನಲ್ಲೇ ವಿಶ್ವನಾಥ್ ಅವರ ಈ ಹೇಳಿಕೆ ರಾಜ್ಯ ಬಿಜೆಪಿ ಪಡಸಾಲೆಯಲ್ಲಿ ತೀವ್ರ ಚರ್ಚೆಗೆ ಕಾರಣವಾಗಿದೆ.
ಈ ಅಭಿಮಾನೋತ್ಸವವು ಪಕ್ಷದೊಳಗಿನ ಭಿನ್ನಮತವನ್ನು ಮತ್ತೊಮ್ಮೆ ಬೀದಿಗೆ ತಂದಿದ್ದು, ಹಿರಿಯ ನಾಯಕರ ನಡುವಿನ ಶೀತಲ ಸಮರಕ್ಕೆ ಸಾಕ್ಷಿಯಾಗಿದೆ.

 

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
​ಹರಿಯಬ್ಬೆಯಲ್ಲಿ ಗಾಂಧೀಜಿ ಕುರಿತ ಎರಡು ದಿನಗಳ ರಾಷ್ಟ್ರೀಯ ವಿಚಾರ ಸಂಕಿರಣಶೃಂಗೇರಿ ಮರು ಎಣಿಕೆಯಲ್ಲಿ ಅಕ್ರಮ ಆರೋಪ: ಆಯೋಗಕ್ಕೆ ರಾಜೇಗೌಡ ದೂರುಬಂಗಾಳದಲ್ಲಿ ಚುನಾವಣೋತ್ತರ ಹಿಂಸಾಚಾರಕ್ಕೆ ಬಲಿಯಾದ ಸುವೇಂದು ಅಧಿಕಾರಿ ಆಪ್ತ; ಪನಿಹಟಿಯಲ್ಲಿ ಬಾಂಬ್ ದಾಳಿ!"ನಮ್ಮಲ್ಲಿ ಡಜನ್ ಮುಖ್ಯಮಂತ್ರಿ ಅಭ್ಯರ್ಥಿಗಳಿದ್ದಾರೆ" - ಕೆ.ಎನ್ ರಾಜಣ್ಣ ಹೊಸ ಬಾಂಬ್!ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ಬಂದ ಮಹಿಳೆಯ ಆಭರಣ ಕಳವು: ಖತರ್ನಾಕ್ ಮಹಿಳಾ ಸಿಬ್ಬಂದಿ ಪೊಲೀಸ್ ವಶಕ್ಕೆಯಡಿಯೂರಪ್ಪ ‘ಅಭಿಮಾನೋತ್ಸವ’ಕ್ಕೆ ‘ಹಳ್ಳಿಹಕ್ಕಿ’ ಆಕ್ಷೇಪ: ಪೋಕ್ಸೋ ಪ್ರಕರಣ ಮುಂದಿಟ್ಟು ವಿಶ್ವನಾಥ್ ವಾಗ್ದಾಳಿಚುನಾವಣಾ ರಾಜಕೀಯಕ್ಕೆ ‘ಹೆಚ್. ವಿಶ್ವನಾಥ್’ ವಿದಾಯಜಿಲ್ಲಾ ಒಕ್ಕಲಿಗರ ಸಂಘದಿಂದ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆಹ್ವಾನಹವಾಮಾನ ವರದಿ: ಬಿಸಿಲ ಧಗೆಯ ನಡುವೆ ಮಳೆಯ ಮುನ್ಸೂಚನೆದಳಪತಿ ವಿಜಯ್ ಹಾದಿಯಲ್ಲಿ ನಿಖಿಲ್ ಕುಮಾರಸ್ವಾಮಿ: ಪುಟ್ಟರಾಜು ಸ್ಫೋಟಕ ಭವಿಷ್ಯ!