Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

6 ವರ್ಷಗಳ ಸಾರ್ಥಕ ಪಯಣ ಸ್ಮರಿಸಿ ಭಾವುಕರಾದ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್

Advertisement
Advertisement

 ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
"2020ರಲ್ಲಿ ಕೋವಿಡ್ ಸಂಕಷ್ಟದ ಕಾಲದಲ್ಲಿ ನಾನು ಕೆಪಿಸಿಸಿ ಅಧ್ಯಕ್ಷನಾಗಿ ಅಧಿಕಾರ ವಹಿಸಿಕೊಂಡೆ. ಕಳೆದ ಆರು ವರ್ಷಗಳ ಈ ಸುದೀರ್ಘ ಪಯಣದಲ್ಲಿ 75 ಲಕ್ಷಕ್ಕೂ ಅಧಿಕ ಸದಸ್ಯರನ್ನು ಕಾಂಗ್ರೆಸ್‌ಕುಟುಂಬಕ್ಕೆ ಜೋಡಿಸಿದ ತೃಪ್ತಿ ನನಗಿದೆ" ಎಂದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಹೇಳಿದ್ದಾರೆ. ಬೆಂಗಳೂರಿನಲ್ಲಿ ನಡೆದ ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ನೂತನ ಅಧ್ಯಕ್ಷರಾದ ಬಿ.ಕೆ. ಹರಿಪ್ರಸಾದ್ ಅವರಿಗೆ ಜವಾಬ್ದಾರಿ ಒಪ್ಪಿಸಿ ಅವರು ಮಾತನಾಡಿದರು.

​ತಮ್ಮ ಸುದೀರ್ಘ ಆರು ವರ್ಷಗಳ ಅಧ್ಯಕ್ಷೀಯ ಅವಧಿಯ ಹೋರಾಟಗಳು, ಪಕ್ಷ ಸಂಘಟನೆ ಮತ್ತು ಮುಂದಿನ ರಾಜಕೀಯ ಸಂಕಲ್ಪಗಳ ಕುರಿತು ಮುಖ್ಯಮಂತ್ರಿಗಳು ಮುಕ್ತವಾಗಿ ಮಾತನಾಡಿದರು.

​6 ವರ್ಷಗಳ ಐತಿಹಾಸಿಕ ಹೋರಾಟದ ಹಾದಿ:
​ತಮ್ಮ ಅವಧಿಯಲ್ಲಿ ನಡೆದ ಪ್ರಮುಖ ಹೋರಾಟಗಳನ್ನು ಸ್ಮರಿಸಿದ ಸಿಎಂ, ಈ ಸಾಧನೆ ಕೇವಲ ನನ್ನೊಬ್ಬನದಲ್ಲ, ಕಾರ್ಯಕರ್ತರ ಶ್ರಮದಿಂದಾಗಿದ್ದು ಎಂದರು.

​ಪ್ರಮುಖ ಚಳವಳಿಗಳು: ಕರ್ನಾಟಕದ ಹಿತರಕ್ಷಣೆಗಾಗಿ ನಡೆದ ಐತಿಹಾಸಿಕ ʻಮೇಕೆದಾಟು ಪಾದಯಾತ್ರೆʼ, ರಾಹುಲ್ ಗಾಂಧಿ ಅವರ ನೇತೃತ್ವದ ʻಭಾರತ್ ಜೋಡೋ ಯಾತ್ರೆʼ, ʻನಮ್ಮ ಮತ - ನಮ್ಮ ಹಕ್ಕು - ನಮ್ಮ ಹೋರಾಟʼ ಮತ್ತು ಇತ್ತೀಚಿನ ʻನರೇಗಾ ಬಚಾವೋ ಸಂಗ್ರಾಮʼದವರೆಗೆ ಹತ್ತಾರು ಹೋರಾಟಗಳನ್ನು ಸಂಘಟಿಸಲಾಗಿದೆ.

​ಅಧಿಕಾರದ ಗದ್ದುಗೆ: ಈ ಎಲ್ಲಾ ನಿರಂತರ ಹೋರಾಟಗಳ ಫಲವಾಗಿಯೇ 2023ರಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಾಧ್ಯವಾಯಿತು ಎಂದು ಅವರು ನೆನೆದರು.

​ವಿದ್ಯಾರ್ಥಿ ದೆಸೆಯ ಹಳೆಯ ದಿನಗಳ ನೆನಪು:
​ನೂತನ ಅಧ್ಯಕ್ಷ ಬಿ.ಕೆ. ಹರಿಪ್ರಸಾದ್ ಹಾಗೂ ತಮ್ಮ ನಡುವಿನ ಒಡನಾಟವನ್ನು ಮೆಲುಕು ಹಾಕಿದ ಡಿ.ಕೆ. ಶಿವಕುಮಾರ್.

​"ನಾನು ಮತ್ತು ಹರಿಪ್ರಸಾದ್ ಇಬ್ಬರೂ ವಿದ್ಯಾರ್ಥಿ ನಾಯಕರಾಗಿ ಬೆಳೆದು ಬಂದವರು. ಇಬ್ಬರೂ ಒಂದೇ ಕಾಲೇಜಿನಲ್ಲಿ ಓದಿದವರು, ಅವರು ನನಗಿಂತ ಕೆಲವು ವರ್ಷ ಸೀನಿಯರ್. ಅವರು 1983ರಲ್ಲಿ ಹಾಗೂ ನಾನು 1985ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆಗೆ ಸ್ಪರ್ಧಿಸಿದ್ದೆವು. ಇಂದು ಒಬ್ಬ ಸಮರ್ಥ, ನಿಷ್ಠಾವಂತ ಕಾರ್ಯಕರ್ತ ಹಾಗೂ ಧೀಮಂತ ನಾಯಕನಿಗೆ ಕೆಪಿಸಿಸಿ ಅಧ್ಯಕ್ಷ ಸ್ಥಾನವನ್ನು ಹಸ್ತಾಂತರ ಮಾಡುತ್ತಿರುವುದು ನನಗೆ ಅಪಾರ ಸಮಾಧಾನ ತಂದಿದೆ" ಎಂದರು.

​'ನಾನು ಮುಖ್ಯಮಂತ್ರಿಯಾಗಿದ್ದರೂ ಮೂಲತಃ ಸಾಮಾನ್ಯ ಕಾರ್ಯಕರ್ತ':
​ಇಡೀ ಸರ್ಕಾರ ಮತ್ತು ಪಕ್ಷ ನೂತನ ಅಧ್ಯಕ್ಷರ ಜೊತೆಗಿರುತ್ತದೆ ಎಂದು ಭರವಸೆ ನೀಡಿದ ಸಿಎಂ, "ಇಂದು ನಾನು ಮುಖ್ಯಮಂತ್ರಿಯಾಗಿರಬಹುದು, ಆದರೆ ಮೂಲತಃ ನಾನೊಬ್ಬ ಸಾಮಾನ್ಯ ಕಾರ್ಯಕರ್ತ. ಆ ನಿಷ್ಠಾವಂತ ಕಾರ್ಯಕರ್ತನಾಗಿ ನಾನು ನಿಮ್ಮೊಂದಿಗೆ ಹೆಗಲಿಗೆ ಹೆಗಲು ಕೊಟ್ಟು ಕೈಜೋಡಿಸುತ್ತೇನೆ" ಎಂದು ಘೋಷಿಸಿದರು.

​ಮುಂದಿನ ಮಹತ್ತರ ಸಂಕಲ್ಪಗಳು:
​ಸಮಾರಂಭದಲ್ಲಿ ಸಿಎಂ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಮುಂದಿನ ಗುರಿಗಳನ್ನು ಸ್ಪಷ್ಟಪಡಿಸಿದರು.

​2028ರ ವಿಧಾನಸಭಾ ಚುನಾವಣೆ: ಒಟ್ಟಾಗಿ ಸಂಕಲ್ಪ ಮಾಡಿ, ಶ್ರಮವಹಿಸಿ ದುಡಿದು 2028ರಲ್ಲಿ ರಾಜ್ಯದಲ್ಲಿ ಮತ್ತೆ ಕಾಂಗ್ರೆಸ್ ಪಕ್ಷವನ್ನು ಅಧಿಕಾರಕ್ಕೆ ತರುವುದು.

​2029ರ ಲೋಕಸಭಾ ಚುನಾವಣೆ: 2029ರಲ್ಲಿ ರಾಹುಲ್ ಗಾಂಧಿ ಅವರನ್ನು ಈ ದೇಶದ ಪ್ರಧಾನಮಂತ್ರಿಯನ್ನಾಗಿ ಮಾಡಲು ನಾವೆಲ್ಲರೂ ಹೆಗಲಿಗೆ ಹೆಗಲು ಕೊಟ್ಟು ಶ್ರಮಿಸುವುದು.

 

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST