Web Stories
Chandravalli News
ePaper
| LIVE |Local|Crime|State|National|International|Politics|Business|Education|Technology|Entertainment|Sports|Health|Feature|Traveling|Beauty|Recipes
| LIVE |Local|Crime|State|National|International
PoliticsBusinessEducationTechnologyEntertainmentSportsHealthFeatureTravelingBeautyRecipes

ಗಮಕ ಕಲೆಯು ಸಂಗೀತಕ್ಕೆ ವಿಶೇಷ ಮೆರಗು ನೀಡಬಲ್ಲದು: ಡಾ. ಎಂ. ದ್ವಾರಕೀಶ್

Advertisement
Advertisement

ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ: 
"ಭಾರತೀಯ ಪರಂಪರೆಯ ಕಲಾ ಪ್ರಕಾರಗಳಲ್ಲಿ ಗಮಕ ಕಲೆಗೆ ಅತ್ಯುನ್ನತ ಸ್ಥಾನವಿದೆ. ಕಾವ್ಯದ ರಸಭಾವಗಳನ್ನು ಉದ್ದೀಪಿಸಿ
, ಕವಿಯ ಆಶಯವನ್ನು ರಸಿಕರಿಗೆ ಪರಿಣಾಮಕಾರಿಯಾಗಿ ತಲುಪಿಸುವುದೇ ಗಮಕದ ಮುಖ್ಯ ಉದ್ದೇಶ. ಈ ಕಲೆಯು ಸಂಗೀತದೊಂದಿಗೆ ಹಿತಮಿತವಾಗಿ ಬೆರೆತರೆ ಶ್ರೋತೃಗಳ ರಸಾನುಭೂತಿ ಉತ್ತುಂಗಕ್ಕೇರುತ್ತದೆ," ಎಂದು ಸಂಸ್ಕೃತ ಹಾಗೂ ಕನ್ನಡ ವಿದ್ವಾಂಸರು, ವೀಣಾವಾದನ ಪರಿಣತರಾದ ಡಾ. ಎಂ. ದ್ವಾರಕೀಶ್ ಅಭಿಪ್ರಾಯಪಟ್ಟರು.

ನಗರದ ಜೆ.ಸಿ.ಆರ್ ಗಣಪತಿ ದೇವಾಲಯದಲ್ಲಿ ಚಿತ್ರದುರ್ಗದ ಗಮಕ ಕಲಾಭಿಮಾನಿಗಳ ಸಂಘದ 40ನೇ ವಾರ್ಷಿಕೋತ್ಸವದ ಅಂಗವಾಗಿ ಆಯೋಜಿಸಲಾಗಿದ್ದ 35ನೇ ಮಾಸಿಕ ಗಮಕ ಸರಣಿ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.

"ಸಂಗೀತಾಭ್ಯಾಸಿಗಳು ಸಂಗೀತದ ಜೊತೆಜೊತೆಗೆ ಗಮಕ ಕಲೆಯನ್ನೂ ಮೈಗೂಡಿಸಿಕೊಂಡರೆ ಅವರ ಕಲಾ ಸಾಧನೆ ಮತ್ತಷ್ಟು ಪರಿಣಾಮಕಾರಿಯಾಗಬಲ್ಲದು."
ಡಾ. ಎಂ. ದ್ವಾರಕೀಶ್

ಭಕ್ತಿಭಾವ ಮೂಡಿಸಿದ ಭಕ್ತಿ ಸಂಗೀತ ಸುಧೆ
'ಭಜನೆಗಳಲ್ಲಿ ಗಮಕ' ಎಂಬ ವಿಷಯದ ಹಿನ್ನೆಲೆಯಲ್ಲಿ ನಡೆದ ಈ ಸಮಾವೇಶದಲ್ಲಿ, ಚಿತ್ರದುರ್ಗದ ಹೆಸರಾಂತ ಸಂಗೀತ ಕಲಾವಿದೆ ವಿದುಷಿ ಶೈಲಾ ಸುದರ್ಶನ್ ಹಾಗೂ ಅವರ 'ಸೌಂದರ್ಯ ಲಹರಿ ಬಳಗ'ದ ಶಿಷ್ಯರು ಕರ್ನಾಟಕ ಶಾಸ್ತ್ರೀಯ ಸಂಗೀತದ ವಿವಿಧ ರಾಗಗಳಲ್ಲಿ ಭಕ್ತಿ ಸಂಗೀತ ಪ್ರಸ್ತುತಪಡಿಸಿದರು. ಶೃಂಗೇರಿ ಶಾರದಾ ದೇವಿಯ ಸ್ತುತಿಯೊಂದಿಗೆ ಆರಂಭವಾದ ಕಾರ್ಯಕ್ರಮದಲ್ಲಿ ಸಾಹಿತ್ಯ, ಸಂಗೀತ, ರಾಗ, ತಾಳ ಹಾಗೂ ಭಾವಗಳ ಹಿತಕರ ಸಮ್ಮಿಲನವಿದ್ದ 15 ವೈವಿಧ್ಯಮಯ ಗೀತೆಗಳು ಶ್ರೋತೃಗಳನ್ನು ಭಕ್ತಿ ಸಾಗರದಲ್ಲಿ ತೇಲಿಸಿದವು.

ಇದೇ ಸಂದರ್ಭದಲ್ಲಿ ಡಾ. ಎಂ. ದ್ವಾರಕೀಶ್ ಅವರ ಉನ್ನತ ಸಾಧನೆ ಗೌರವಿಸಿ ಸನ್ಮಾನಿಸಲಾಯಿತು ಹಾಗೂ ಭಾಗವಹಿಸಿದ್ದ ಸಂಗೀತ ಕಲಾವಿದರನ್ನು ಸತ್ಕರಿಸಲಾಯಿತು.

ಕೆ. ಆರ್. ರಮಾದೇವಿ ವೆಂಕಣ್ಣಾಚಾರ್ ಅಧ್ಯಕ್ಷತೆ ವಹಿಸಿದ್ದರು. ಗಮಕಿ ಅನಂತ ಕೃಷ್ಣ ಸ್ವಾಗತಿಸಿದರು. ಶಶಿಧರ್ ಶ್ಯಾನುಭೋಗ್ ಪ್ರಾರ್ಥಿಸಿದರು. ಬಿ.ಎಲ್ ಉಮಾ ನಿರೂಪಿಸಿದರು.
ಗಣ್ಯರಾದ ಪ್ರೊ. ಹರೀಶ್
, ಚಿದಾನಂದಪ್ಪ, ರಾಜಶೇಖರಪ್ಪ, ಕೃಷ್ಣಮೂರ್ತಿ ಸೇರಿದಂತೆ ಹಲವು ಕಲಾಭಿಮಾನಿಗಳು ಉಪಸ್ಥಿತರಿದ್ದರು.

ಮುಂದಿನ ತಿಂಗಳ ಕಾರ್ಯಕ್ರಮದ ವಿವರ-
ಸಂಘದ 36ನೇ ಮಾಸಿಕ ಗಮಕ ಕಾರ್ಯಕ್ರಮವು 2026ರ ಜುಲೈ 26ರ ಭಾನುವಾರ ಸಂಜೆ 6 ಗಂಟೆಗೆ ಜೆ.ಸಿ.ಆರ್ ಗಣಪತಿ ದೇವಾಲಯದ ಸಭಾಂಗಣದಲ್ಲಿ ನಡೆಯಲಿದೆ.

ವಿಷಯ: ಮಹಾಭಾರತದಲ್ಲಿ ಭೀಷ್ಮರ ವೈಶಿಷ್ಟ್ಯ (ಉಪನ್ಯಾಸ)
ಉಪನ್ಯಾಸಕರು: ತಾರಿಣಿ ಶುಭದಾಯಿನಿ (ಕನ್ನಡ ವಿದ್ವಾಂಸರು
, ಕವಯತ್ರಿ ಹಾಗೂ ವಿಮರ್ಶಕರು)
ಕಾವ್ಯ ವಾಚನ: ವಿದುಷಿ ಮೀನಾಕ್ಷಿ ಭಟ್ (ಭೀಷ್ಮ ಪರ್ವದ ಸುರಸ ಪದ್ಯಗಳ ವಾಚನ) ಎಂದು ಗಮಕ ಕಲಾಭಿಮಾನಿಗಳ ಸಂಘದ ಪ್ರಕಟಣೆ ತಿಳಿಸಿದೆ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST
ಬೆಂಗಳೂರು ನಿಧಿ ಹಂಚಿಕೆಯಲ್ಲಿ ತಾರತಮ್ಯ: ಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಆರ್‌ಅಶೋಕ್ ತೀವ್ರ ವಾಗ್ದಾಳಿ!ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಅಪಾರದರ್ಶಕತೆ: ಚುನಾವಣಾ ಆಯೋಗಕ್ಕೆ ಕರ್ನಾಟಕ ಸಚಿವ ಸಂಪುಟದ ಬಿಗಿ ಷರತ್ತುಗಳು!ಖ್ಯಾತ ಹಿರಿಯ ಚಿತ್ರ ಕಲಾವಿದ ಕೆ.ಟಿ ಶಿವಪ್ರಸಾದ್ ನಿಧನ!ಧರ್ಮಸ್ಥಳ ಮಂಜುನಾಥನ ಸನ್ನಿಧಿಯಲ್ಲಿ ಬೇಲೂರು ಶಾಸಕ ಆಣೆ ಪ್ರಮಾಣ!ಜಿಲ್ಲಾಸ್ಪತ್ರೆಯಲ್ಲಿ ಭೀಕರ ಸಿಲಿಂಡರ್ ಸ್ಫೋಟ: ಕೋಟ್ಯಂತರ ಮೌಲ್ಯದ ಸಲಕರಣೆ ಭಸ್ಮ, ಕೂದಲೆಳೆ ಅಂತರದಲ್ಲಿ ತಪ್ಪಿದ ಪ್ರಾಣಾಪಾಯ!ವಿಚಾರಣೆ ನೆಪದಲ್ಲಿ ಅಪ್ರಾಪ್ತರಿಗೆ ಲೈಂಗಿಕ ಕಿರುಕುಳ: ಪಿಎಸ್‌ಐ ಪೋಕ್ಸೋ ಕಾಯ್ದೆಯಡಿ ಬಂಧನ!ಬಿಡದಿ ಬೃಹತ್ ಉಪನಗರ ಯೋಜನೆಗೆ ಹೈಕೋರ್ಟ್ ಬ್ರೇಕ್? ಸರ್ಕಾರದ ವಿರುದ್ಧ ಸಲ್ಲಿಕೆಯಾಯ್ತು ಸಾರ್ವಜನಿಕ ಹಿತಾಸಕ್ತಿ ಅರ್ಜಿ!ಶತಮಾನದ ಸಾಮಾಜಿಕ ಅಂತರಕ್ಕೆ ಬ್ರೇಕ್: ಸೌಹಾರ್ದಯುತವಾಗಿ ದೇವಸ್ಥಾನ ಪ್ರವೇಶಿಸಿದ ದಲಿತರು!ಹದಿಹರೆಯ ವಯಸ್ಸಿನ ಆವೇಗಕ್ಕೆ ವಿವೇಕದ ಅಂಕುಶ ಅಗತ್ಯಅಂತರರಾಷ್ಟ್ರೀಯ ಚಿತ್ರಕಲಾವಿದ ಕೆ.ಟಿ ಶಿವಪ್ರಸಾದ್ ನಿಧನ