LIVE TV LocalCrimeStateNationalInternationalPoliticsBusinessEducationTechnologyEntertainmentSportsHealthFeatureTravelingBeautyRecipes

ಹಿರಿಯೂರಿನಲ್ಲಿ 'ಮಳೆನೀರು ಸಂಗ್ರಹಣೆ ಅಭಿಯಾನ'ಕ್ಕೆ ಚಾಲನೆ

Advertisement
Advertisement

ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಭವಿಷ್ಯದ ನೀರಿನ ಹಾಹಾಕಾರ ತಪ್ಪಿಸುವ ಹಾಗೂ ಅಂತರ್ಜಲ ಮಟ್ಟ ವೃದ್ಧಿಸುವ ಸದುದ್ದೇಶದಿಂದ ಹಿರಿಯೂರು ನಗರಸಭೆಯು ಮಹತ್ವದ
'ಮಳೆನೀರು ಸಂಗ್ರಹಣೆ ಅಭಿಯಾನ' ಹಮ್ಮಿಕೊಂಡಿದೆ.

​ಪ್ರಧಾನಮಂತ್ರಿಗಳ 'ಮನ್ ಕೀ ಬಾತ್'ನ ೧೩೫ನೇ ಆವೃತ್ತಿಯ "ಜಲ ಸಂರಕ್ಷಣೆ ಅತ್ಯಗತ್ಯ" ಎಂಬ ಸಂದೇಶದಿಂದ ಪ್ರೇರಿತವಾಗಿರುವ ಈ ಅಭಿಯಾನದಲ್ಲಿ, ಮಳೆಯ ಪ್ರತಿಯೊಂದು ಹನಿಯನ್ನು ಉಳಿಸಲು ಸಾರ್ವಜನಿಕರು ಕೈಜೋಡಿಸಬೇಕೆಂದು ಜಿಲ್ಲಾಡಳಿತ ಹಾಗೂ ನಗರಸಭೆ ಮನವಿ ಮಾಡಿದೆ.

news_1785250134_6_714.webp

 

​ ಸಾರ್ವಜನಿಕರಿಗೆ ನಗರಸಭೆ ಮನವಿ:
​ಮಳೆನೀರು ಕೊಯ್ಲು ಅಳವಡಿಕೆ: ಪ್ರತಿಯೊಂದು ಮನೆ
, ವಸತಿ ಸಮುಚ್ಚಯ ಹಾಗೂ ಕಚೇರಿ/ಕಾರ್ಯಸ್ಥಳಗಳಲ್ಲಿ ಕಡ್ಡಾಯವಾಗಿ ಮಳೆನೀರು ಸಂಗ್ರಹಣಾ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುವುದು.

​ಇಂಗುಗುಂಡಿ ಹಾಗೂ ಮರುಪೂರಣ: ಅಂತರ್ಜಲ ಮಟ್ಟವನ್ನು ಹೆಚ್ಚಿಸಲು ಸೂಕ್ತ ಸ್ಥಳಗಳಲ್ಲಿ ಇಂಗುಗುಂಡಿಗಳನ್ನು ನಿರ್ಮಿಸುವುದು ಹಾಗೂ ಬಳಕೆಯಲ್ಲಿಲ್ಲದ/ಬತ್ತಿ ಹೋದ ಕೊಳವೆ ಬಾವಿಗಳನ್ನು ಜಲ ಮರುಪೂರಣಕ್ಕೆ ಬಳಸಿಕೊಳ್ಳುವುದು.

​ಪಾರಂಪರಿಕ ಜಲಮೂಲಗಳ ಪುನರುಜ್ಜೀವನ: ನಮ್ಮ ಸುತ್ತಮುತ್ತಲಿನ ಬಾವಿಗಳು, ಕಲ್ಯಾಣಿಗಳು ಮತ್ತು ಇತರ ಸಾಂಪ್ರದಾಯಿಕ ಜಲಮೂಲಗಳನ್ನು ಸ್ವಚ್ಛಗೊಳಿಸಿ ಮರುಬಳಕೆಗೆ ಯೋಗ್ಯವಾಗುವಂತೆ ಮಾಡುವುದು.

​ಹೂಳೆತ್ತುವ ಕಾರ್ಯ: ಕೆರೆ-ಕಲ್ಯಾಣಿಗಳು, ಹಳ್ಳ-ಕೊಳ್ಳಗಳು ಹಾಗೂ ಜಲಾಶಯಗಳ ನೀರಿನ ಸಂಗ್ರಹಣಾ ಸಾಮರ್ಥ್ಯವನ್ನು ಹೆಚ್ಚಿಸಲು ಅವುಗಳಲ್ಲಿ ತುಂಬಿರುವ ಹೂಳನ್ನು ತೆಗೆಯುವುದು.

​ಹಸಿರೀಕರಣ: ಭೂಮಿಯು ನೀರನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯವನ್ನು ಹೆಚ್ಚಿಸಲು ವ್ಯಾಪಕವಾಗಿ ಗಿಡ-ಮರಗಳನ್ನು ನೆಟ್ಟು ಹಸಿರನ್ನು ಬೆಳೆಸುವುದು.

​"ಮಳೆಯ ಪ್ರತಿಯೊಂದು ಹನಿಯನ್ನು ಉಳಿಸೋಣ, ಭವಿಷ್ಯವನ್ನು ಸುರಕ್ಷಿತಗೊಳಿಸೋಣ" ಎಂಬ ಧ್ಯೇಯದೊಂದಿಗೆ ನಡೆಯುತ್ತಿರುವ ಈ ಅಭಿಯಾನದ ಬಗ್ಗೆ ತಾಂತ್ರಿಕ ನೆರವು ಅಥವಾ ಹೆಚ್ಚಿನ ಮಾಹಿತಿಗಾಗಿ ಸಾರ್ವಜನಿಕರು ಹಿರಿಯೂರು ನಗರಸಭೆಯ ತಾಂತ್ರಿಕ ಶಾಖೆಯನ್ನು ಸಂಪರ್ಕಿಸಬಹುದು ಎಂದು ನಗರಸಭೆ ಪೌರಾಯುಕ್ತ ಎ.ವಾಸೀಂ  ಹಾಗೂ ಆಡಳಿತಾಧಿಕಾರಿ ಮತ್ತು ಚಿತ್ರದುರ್ಗ ಜಿಲ್ಲಾಧಿಕಾರಿ ಟಿ.ವೆಂಕಟೇಶ್ ಅವರು ತಮ್ಮ ಜಂಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement
Advertisement

Author
Chandravalli News
Regional Kannada Daily is a leading news paper in (Karnataka state). Which is having large number of circulation in the districts of Chitradurga, Davanagere, Bellary, Vijayanagara, Shimoga, Chikmagalur, Tumkur, Bangalore, Simultaneously published in rural districts of Bangalore
WhatsApp

Don't Miss Out! Join Our WhatsApp Group!

Get latest news updates delivered straight to your WhatsApp.

LATEST