i
ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಗೋವಿಂದಪ್ಪ ಹೇಳಿಕೆಗೆ ರೈತರ ಖಂಡನೆ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ವಾಣಿ ವಿಲಾಸ ಸಾಗರ ಡ್ಯಾಂ ಕಟ್ಟಡದ ಎತ್ತರವನ್ನು 124 ಅಡಿಗೆ ಇಳಿಕೆ ಮಾಡುವಂತೆ ಹೊಸದುರ್ಗ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಮಾಜಿ ಶಾಸಕ ಬಿ.ಜಿ.ಗೋವಿಂದಪ್ಪ ನೀಡಿರುವ ಹೇಳಿಕೆ ವಿರುದ್ಧ ರೈತರು ತೀವ್ರ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಹಿರಿಯೂರು ತಾಲ್ಲೂಕಿನ ವಾಣಿ ವಿಲಾಸ ಸಾಗರದ ಅಚ್ಚುಕಟ್ಟು ಪ್ರದೇಶದ ಕೊನೆಯ ಭಾಗದಲ್ಲಿರುವ ತೊರೆ ಓಬೇನಹಳ್ಳಿ, ಬಿದರಕೆರೆ, ಅಂಬಲಗೆರೆ, ಬ್ಯಾಡರಹಳ್ಳಿ, ಐನಾಳ್ಳಿ , ಗ್ರಾಮದ ರೈತರು ತೊರೆ ಓಬೇನಹಳ್ಳಿ ವೇದಾವತಿ ನದಿ ದಂಡೆಯ ಮೇಲಿರುವ ಈ ಶ್ವರ ದೇವಸ್ಥಾನದ ಹತ್ತಿರ ಸಭೆ ಸೇರಿ ಮೊನ್ನೆ ಹೊಸದುರ್ಗದ ಮಾಜಿ ಶಾಸಕರಾದ ಬಿ ಜಿ ಗೊವಿಂದಪ್ಪನವರು ವಾಣಿ ವಿಲಾಸ ಸಾಗರ ಅಣೆಕಟ್ಟೆ ಕೋಡಿ ಇಳಿಸುವ ನೀಡಿರುವ ಹೇಳಿಕೆಯನ್ನು ಖಂಡಿಸಿದರು.
ಕರ್ನಾಟಕ ರಾಜ್ಯ ರೈತ ಸಂಘದ ತಾಲೂಕು ಅಧ್ಯಕ್ಷ ಬ್ಯಾಡರಹಳ್ಳಿ ಶಿವಕುಮಾರ್ ಮಾತನಾಡಿ ಹೊಸದುರ್ಗ ಮಾಜಿ ಶಾಸಕರು ವಾಣಿ ವಿಲಾಸ ಸಾಗರ ಅಣೆಕಟ್ಟೆಯ ಕೋಡಿಯನ್ನು 124ಅಡಿಗೆ ಇಳಿಸುವ ಬಗ್ಗೆ ಮಾತನಾಡಿದ್ದು ಖಂಡನೀಯ,ವಿ ವಿ ಸಾಗರ ನಮ್ಮ ಜೀವನಾಡಿ ಯಾವುದೇ ಕಾರಣಕ್ಕೂ ಕೋಡಿ ಇಳಿಸಲು ಬಿಡುವುದಿಲ್ಲ. ಈ ಬಗ್ಗೆ ವಿದೇಶ ಪ್ರವಾಸದಲ್ಲಿರುವ ಹಾಲಿ ಶಾಸಕರಾದ ಕೆ. ಪೂರ್ಣಿಮಾ ಶ್ರೀನಿವಾಸ್ ರವರು ಪತ್ರಿಕೆ ಹೇಳಿಕೆ ನೀಡಿ ಯಾವುದೇ ಕಾರಣಕ್ಕೂ ಕೋಡಿ ಇಳಿಸಲು ಬಿಡುವುದಿಲ್ಲ ಮತ್ತು ಅವರ ಬಿಜಿ ಗೋವಿಂದಪ್ಪ ನವರು ರಾಜಕೀಯ ಕಾರಣಕ್ಕೆ ಈ ರೀತಿ ಹೇಳಿಕೆ ನೀಡಬಾರದು ಎಂದು ಹೇಳಿರುವುದು ಸ್ವಾಗತಾರ್ಹ ಎಂದರು.
ಅಂಬಲಗೆರೆ ರಾಘು ಮಾತನಾಡಿ ಐತಿಹಾಸಿಕ ವಿ ವಿ ಸಾಗರ ಕೋಡಿ ಇಳಿಸುವ ವಿಚಾರವಾಗಿ ಹೊಸದುರ್ಗದ ಮಾಜಿ ಶಾಸಕರ ಹೇಳಿಕೆಯನ್ನು ಖಂಡಿಸುತ್ತೇವೆ. ಹಾಗೂ ಹೊಸದುರ್ಗದ ರೈತರಿಗೆ ಆಗಿರುವ ನಷ್ಟಕ್ಕೆ ಪರಿಹಾರ ಕೊಡಿಸಲಿ ಎಂದು ಹೇಳಿದರು.
ಬಿದರಿಕೆರೆ ಗ್ರಾಮದ ರೈತರಾದ ರಂಗಸ್ವಾಮಿ ಮಾತನಾಡಿ ಕೋಡಿ ಇಳಿಸುವ ವಿಚಾರವಾಗಿ ಹೊಸದುರ್ಗದ ಮಾಜಿ ಶಾಸಕರ ಹೇಳಿಕೆ ಖಂಡನೀಯ ಹಾಗೂ ಆ ಸಭೆಯಲ್ಲಿ ಹಿರಿಯೂರು ಮಾಜಿ ಶಾಸಕರಾದ ಡಿ.ಸುಧಾಕರವರು ಇದ್ದು ಅವರು ತಾಲೂಕಿನ ಹಿತಾಸಕ್ತಿಯ ದೃಷ್ಟಿಯಿಂದ ಅಲ್ಲಿಯೇ ಖಂಡಿಸಬೇಕಿತು. ಆ ಕೆಲಸವನ್ನು ಅವರು ಮಾಡಲಿಲ್ಲ. ರೈತರು ಆಕ್ರೋಶ ವ್ಯಕ್ತ ಪಡಿಸಿದ ನಂತರ ಮೊನ್ನೆ ಹೇಳಿಕೆ ನೀಡುವ ನಾಟಕ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ನವಕರ್ನಾಟಕ ರೈತ ಸಂಘದ ತಾ ಅಧ್ಯಕ್ಷ ಕೆ.ಪ್ರಕಾಶ್ ಈಶ್ವರಗೆರೆ ತೊರೆ ಓಬೇನಹಳ್ಳಿ ಗ್ರಾಮದ ಶ್ರೀನಿವಾಸ್, ರಂಗನಾಥ ,ತಿಪ್ಪೇಸ್ವಾಮಿ ,ಆರ್ ಅಶೋಕ್ , ಆರ್.ರಾಮು.ಹೆಚ್ ಟಿ ಮಲ್ಲಯ್ಯ ,ರಾಘು ಜಿ ಎನ್, ಸಣ್ಣರಂಗಪ್ಪ,ಆರ್.ತಿಮ್ಮರಾಜ್ ,ರಾಮಜ್ಜ,ಗಿರಿಯಪ್ಪ,ವಿ ಎಸ್ ಎಸ್ ಎನ್ ಸದಸ್ಯರು,ಬಿದರ ಕೆರೆ ಗ್ರಾಮದ ಬಸವರಾಜ ಹಳ್ಳಿಕಾರ್ ,ರಂಗನಾಥ್ .ಎಂ ,ಚಂದ್ರಪ್ಪ,ಅವಿನಾಶ್,ಐನಾಳ್ಳಿ ಪ್ರಕಾಶ್ ಬ್ಯಾಡರಹಳ್ಳಿ ಗ್ರಾಮದ ಈಶ್ವರ್ ಯಾದವ್,ಅಂಬೇಡ್ಕರ್ ಸೇನೆಯ ಜಿಲ್ಲಾ ಕಾರ್ಯಾಧ್ಯಕ್ಷ ಕೆ ಪಿ ಶ್ರೀನಿವಾಸ್ ಸಾಮಾಜಿಕ ಕಾರ್ಯಕರ್ತರಾದ ದೇವರಾಜ್ ನಾಗಣ್ಣ, ರಾಮಚಂದ್ರ ಕಸವನಹಳ್ಳಿ ,ಮೋಹನ್ ಗೌಡ್ರು ಮೊದಲಾದವರು ಇದ್ದರು.