i
ಸಾಧಕ 14 ಮಂದಿಗೆ ಜಿಲ್ಲಾ ಮಟ್ಟದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪ್ರಕಟ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಜಿಲ್ಲಾ ಮಟ್ಟದ 2022ನೇ ರಾಜ್ಯೋತ್ಸವ ಪ್ರಶಸ್ತಿಗಳ () ಪಟ್ಟಿ ಸೋಮವಾರ ಬಿಡುಗಡೆಯಾಗಿದೆ. ವಿವಿಧ ಕ್ಷೇತ್ರಗಳಲ್ಲಿ ಗಣನೀಯ ಸೇವೆ ಸಲ್ಲಿಸಿರುವ 14 ಸಾಧಕ ವ್ಯಕ್ತಿಗಳನ್ನು 67ನೇ ರಾಜ್ಯೋತ್ಸವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಚಿತ್ರದುರ್ಗ ಉಪ ವಿಭಾಗಾಧಿಕಾರಿಗಳ ಅಧ್ಯಕ್ಷತೆಯಲ್ಲಿ ನಡೆದ ಆಯ್ಕೆ ಸಮಿತಿ ಸಭೆಯಲ್ಲಿ ಚಿತ್ರಕಲಾವಿದ ಜವಳಿ ಶಾಂತಕುಮಾರ್, ರಂಗಭೂಮಿ ಕಲಾವಿದ ಕೆ.ಬಿ.ಕೃಷ್ಣಪ್ಪ, ಸಂಗೀತ ಕಲಾವಿದೆ ಕೆ.ಮೀನಾಕ್ಷಿ ಭಟ್, ಜಾನಪದ ಕಲಾವಿದ ಎಚ್.ನಿಂಗಪ್ಪ ಹುಲ್ಲೂರು, ಸಾಹಿತ್ಯ ಕ್ಷೇತ್ರದ ಡಾ.ಉಮೇಶ್ ಬಾಬು ಮಠದ್, ಸಮಾಜ ಸೇವೆಗಾಗಿ ವಕೀಲ ಬಿ.ಕೆ.ರಹಮತ್ ವುಲ್ಲಾ, ಪತ್ರಿಕೋದ್ಯಮ ನರೇನಹಳ್ಳಿ ಅರುಣ್ ಕುಮಾರ್, ಸಂಗೀತ(ಕೀ ಬೋರ್ಡ್ ಪೇಯರ್) ಕೆ.ಎ.ಆಶ್ರಿತ, ರಂಗಭೂಮಿ ಹಾಗೂ ಸಮಾಜಸೇವೆ ಆರುಂಧತಿ(ಮಂಗಳಮುಖಿ) ಕೊಳಾಳು, ಚಿತ್ರಕಲೆ ಡಿ.ಆರ್.ಸುರೇಂದ್ರನಾಥ್, ಲೇಖಕ ಎಚ್.ಆನಂದ್ ಕುಮಾರ್, ಶಿಕ್ಷಣ ಮೊಳಕಾಲ್ಮೂರಿನ ಡಾ.ತಿಮ್ಮಣ್ಣ, ಯೋಗ ಎಂ.ಬಿ.ಮುರುಳಿ ಮಲ್ಲಾಪುರ, ಸಾಹಿತ್ಯ ಜೆ.ತಿಪ್ಪೇಸ್ವಾಮಿ ಕೊರ್ಲಕುಂಟೆ ಈ 14 ಮಂದಿಗೆ ನವೆಂಬರ್-1 ರಂದು ನಡೆಯಲಿರುವ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ದಿವ್ಯಪ್ರಭು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.