i
ಮದಕರಿ ರಾಜವಂಶಸ್ಥರು ಮುರುಘಾ ಮಠ, ಶರಣರ ಕುರಿತು ಕರೆದಿರುವ ಸುದ್ದಿಗೋಷ್ಠಿ ಕುತೂಹಲ ಮೂಡಿಸಿದೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠಕ್ಕೆ ಸಂಬಂಧಿಸಿದಂತೆ ಈಚೆಗೆ ನಡೆಯುತ್ತಿರುವ ಬೆಳವಣಿಗೆಗಳನ್ನು ಚಿತ್ರದುರ್ಗ ರಾಜವಂಶಸ್ಥರಾದ ನಾವುಗಳು ಗಮನಿಸುತ್ತಿದ್ದು, ಈ ವಿಚಾರವಾಗಿ ಚಿತ್ರದುರ್ಗ ಪತ್ರಿಕಾ ಭವನದಲ್ಲಿ 14.11.2022 ಸೋಮವಾರ ಬೆಳಗ್ಗೆ 11.00 ಗಂಟೆಗೆ ಪತ್ರಿಕಾ ಗೋಷ್ಠಿ ಕರೆಯಲಾಗಿದೆ.
ಪತ್ರಿಕಾಗೋಷ್ಠಿಯಲ್ಲಿ ಚಿಕ್ಕಮಗಳೂರು ಜಿಲ್ಲೆ, ಕಡೂರು ತಾಲ್ಲೂಕು ಶ್ರೀ ಕಾಳಿಕಾ ಮಹಾಸಂಸ್ಥಾನ ಮತ್ತು ಗುರುಪೀಠ ಪೀಠಾಧ್ಯಕ್ಷರಾದ ಶ್ರೀ ಋಷಿಕುಮಾರ ಸ್ವಾಮೀಜಿಗಳು ಭಾಗವಹಿಸುತ್ತಾರೆ. ಪತ್ರಿಕಾಗೋಷ್ಠಿಯಲ್ಲಿ ನಮ್ಮ ಮನೆತನದ ಸಂಘಟನೆ ರಾಜವೀರ ಮದಕರಿ ನಾಯಕ ಸಂಸ್ಥೆಯ ಕಾರ್ಯದರ್ಶಿ ಸಿ.ಜೆ.ಸಿದ್ದರಾಜು, ಅಧ್ಯಕ್ಷ ರಾಜ ಪರಶುರಾಮ ನಾಯಕ ಅರಸು ಭಾಗವಹಿಸಲಿದ್ದು ಚಿತ್ರದುರ್ಗದ ಶ್ರೀ ಜಗದ್ಗುರು ಮುರುಘರಾಜೇಂದ್ರ ಬೃಹನ್ಮಠದ ಸುಗಮ ಆಡಳಿತ ಮತ್ತು ಮಠದ ಎಲ್ಲಾ ಸೇವಾ ಕಾರ್ಯಗಳಿಗೆ ಅನುಕೂಲವಾಗುವ ನಿಟ್ಟಿನಲ್ಲಿ ಅಗತ್ಯ ಕ್ರಮಗಳನ್ನು ಕೈಗೊಳ್ಳುವ ಕುರಿತು ಹಲವು ವಿಷಯಗಳನ್ನು ಪ್ರಸ್ತಾಪಿಸುವ ಬಗ್ಗೆ ಪತ್ರಿಕಾಗೋಷ್ಠಿ ಕರೆಯಲಾಗಿರುತ್ತದೆ ಎಂದು ರಾಜಾ ಪರಶುರಾಮ ನಾಯಕ ಅರಸು, ಅಧ್ಯಕ್ಷರು, ಶ್ರೀ ರಾಜಾ ವೀರ ಮದಕರಿ ನಾಯಕ ಸಂಸ್ಥೆ ಇವರು ತಿಳಿಸಿದ್ದಾರೆ. ಈ ಸುದ್ದಿಗೋಷ್ಠಿ ಮುರುಘಾಮಠದ ಪರ ಅಥವಾ ವಿರೋಧವೋ ಎನ್ನುವುದು ನಾಳೆ ತಿಳಿಯಲಿದೆ.