i
ಪರಿಸರ ಮಾಲಿನ್ಯ ಬೆಳೆ ಹಾನಿ ಕಿರ್ಲೋಸ್ಕರ್ ಕಂಪನಿ ವಿರುದ್ಧ ಬೀದಿಗಿಳಿದ ರೈತರು…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಿರ್ಲೋಸ್ಕರ್ ಕಂಪನಿ ಹೊರ ಹಾಕುವ ಘನ್ಯ ತ್ಯಾಜ್ಯ, ಹೊಗೆ, ಧೂಳು ಮತ್ತಿತರ ಕಾರಣಗಳಿಂದಾಗಿ ರೈತರ ಬೆಳೆ ಹಾನಿಯಾಗಿದ್ದು ಸಾಕಷ್ಟು ನಷ್ಟ ಆಗಿದೆ. ಇದರ ಜೊತೆಯಲ್ಲಿ ಜನ ವಸತಿಗಳಲ್ಲಿನ ನಿವಾಸಿಗಳ ಆರೋಗ್ಯ ಮೇಲೆ ಗಂಭೀರ ಪರಿಣಾಮದ ರೋಗ ಸಮಸ್ಯೆಗಳು ಕಾಡುತ್ತಿದೆ ಎಂದು ಆರೋಪಿಸಿ ರೈತರು ಕಿರ್ಲೋಸ್ಕರ್ ಕಂಪನಿ ವಿರುದ್ಧ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತ ಪಡಿಸಿದರು.
ಹಿರಿಯೂರು ತಾಲೂಕಿನ ಪರಮೇನಹಳ್ಳಿಯಲ್ಲಿರುವ ಕಿರ್ಲೋಸ್ಕರ್ ಕಂಪನಿ ಮುಂಭಾಗ ರೈತರು ಶುಕ್ರವಾರ ಪ್ರತಿಭಟನೆ ಮಾಡಿ ಆಕ್ರೋಶ ವ್ಯಕ್ತ ಪಡಿಸಿದ್ದಾರೆ.
ಕಂಪನಿ ಎಬ್ಬಿಸುತ್ತಿರುವ ಧೂಳಿನಿಂದಾಗಿ ರೈತರ ಫಸಲುಗಳಿಗೆ ಸಾಕಷ್ಟು ಹಾನಿಯಾಗಿದೆ. ಬೆಳೆ ಹಾನಿ ಪರಿಹಾರ ನೀಡಬೇಕು. ಭಾರೀ ಪ್ರಮಾಣದಲ್ಲಿ ಧೂಳು ಮತ್ತು ಸಿಲಿಕಾನ್ ಧೂಳು ಬೀಳುತ್ತಿರುವುದು ಹಾಗು ಕೆಟ್ಟ ವಾಸನೆ ಶಬ್ದಮಾಲಿನ್ಯದಿಂದಾಗಿ ಅನೇಕ ಸಮಸ್ಯೆಗಳನ್ನು ಸಾರ್ವಜನಿಕರು ಎದುರಿಸುವಂತಾಗಿದೆ. ಕೂಡಲೇ ಇದಕ್ಕೆಲ್ಲ ಪರಿಹಾರ ನೀಡಬೇಕು ಎಂದು ರೈತರು ಆಗ್ರಹ ಮಾಡಿದರು.
ಭಾರತೀಯ ದಲಿತ ಸಂಘರ್ಷ ಸಮಿತಿ ಸಂಘಟನೆ, DSS ರಾಜ್ಯಾಧ್ಯಕ್ಷ ಡಾ. ಪ್ರಕಾಶ್ ಬಿರಾದಾರ್, ಪರಮೇನಹಳ್ಳಿ ರೈತರಾದ ಬೈರೇಶ್ ಪಟೇಲ್, ಪಾಂಡಪ್ಪ ತಿಪ್ಪೇಶ್ (ನಿವೃತ್ತ ಸೈನಿಕ) ನವೀನ್ ಮೈಲಾರಪ್ಪ ಆನಂದ್ ಮಡಿವಾಳ ಭರತ್ ಪಾಟೀಲ್ ಇನ್ನು 30ಕ್ಕು ಹೆಚ್ಚು ರೈತರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.