i
ತಲೆಮರೆಸಿಕೊಂಡ ಆರೋಪಿಗಳ ಪತ್ತೆಗೆ ಮನವಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಗಾಂಜಾ ಮಾರಾಟ ಹಾಗೂ ಸೇವನೆ ಪ್ರಕರಣದಲ್ಲಿ ಆರೋಪಿತರಾದ ಚಿತ್ರದುರ್ಗ ನೆಹರು ನಗರದ, ಗಾರೆ ಕೆಲಸ ಮಾಡುವ ಕುಮಾರ ಅಲಿಯಾಸ್ ಗಿಡ್ಡಮುತ್ತು ತಂದೆ ಲೇಟ್ ಶಂಕರಪ್ಪ(24) ಹಾಗೂ ಮುನಿಸಿಪಲ್ ಕಾಲೋನಿಯ, ವಾಟರ್ ಸರ್ವೀಸ್ ಕೆಲಸ ಮಾಡುವ ಅರುಣ ತಂದೆ ಮಂಜುನಾಥ(28) ತಲೆಮರೆಸಿಕೊಂಡಿರುತ್ತಾರೆ.
ಇವರ ವಿರುದ್ದ ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಆರೋಪಿಗಳ ಕುರಿತು ಸುಳಿವು ಲಭ್ಯವಾದಲ್ಲಿ ಕೋಟೆ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ ಅವರಿಗೆ ಮಾಹಿತಿ ನೀಡುವಂತೆ ಪ್ರಕಟಣೆಯಲ್ಲಿ ಕೋರಲಾಗಿದೆ.