i
ಆರೋಗ್ಯ ಸಂಪಾದನೆಗೆ ಜೀವನಶೈಲಿ, ಆಹಾರಶೈಲಿ ಬದಲಾವಣೆ ಅಗತ್ಯ-ಎನ್.ಎಸ್.ಮಂಜುನಾಥ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಆರೋಗ್ಯ ಸಂಪಾದನೆಗೆ ಜೀವನಶೈಲಿ, ಆಹಾರಶೈಲಿ ಬದಲಾವಣೆ ಅಗತ್ಯವಾಗಿದೆ ಎಂದು ಚಿತ್ರದುರ್ಗ ತಾಲ್ಲೂಕು ಆರೋಗ್ಯ ಶಿಕ್ಷಣಾಧಿಕಾರಿ ಎನ್.ಎಸ್.ಮಂಜುನಾಥ್ ಹೇಳಿದರು.
ಚಿತ್ರದುರ್ಗ ತಾಲ್ಲೂಕಿನ ಲಿಂಗಾವರಹಟ್ಟಿಯಲ್ಲಿ ಗುರುವಾರ ಜ್ಞಾನ ವಿಕಾಸ ಸಂಘ ಲಿಂಗಾವರಹಟ್ಟಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ, ಆರೋಗ್ಯ ಇಲಾಖೆ ಸಹಯೋಗದೊಂದಿಗೆ ಸಿರಿ ಧಾನ್ಯಗಳ ಮಹತ್ವ ಕುರಿತು ಮಾಹಿತಿ ಶಿಕ್ಷಣಾ ಪ್ರಾತ್ಯಕ್ಷಿಕೆ ಕಾರ್ಯಕ್ರಮ ಕುರಿತು ಅವರು ಮಾತನಾಡಿದರು.
ಬಳಸುವ ಆಹಾರದಲ್ಲಿ ಇರುವ ಪೆÇೀಷಕಾಂಶಗಳ ಅರಿವು ಇರಬೇಕು ಇತ್ತೀಚಿನ ದಿನಗಳಲ್ಲಿ ಸಾಂಕ್ರಾಮಿಕವಲ್ಲದ ರೋಗಗಳಾದ ಮಧುಮೇಹ, ರಕ್ತದೊತ್ತಡ, ಕ್ಯಾನ್ಸರ್ ( ಅರ್ಬುದ ರೋಗ) ಗಳು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತಿವೆ. ಇದಕ್ಕೆ ಕಾರಣ ಆಧುನಿಕ ಜೀವನ ಆಹಾರ. ಶೈಲಿಯೂ ಒಂದು ಕಾರಣ. ನಿಮ್ಮ ನಿತ್ಯ ಆಹಾರದ ಬಳಕೆಯಲ್ಲಿ ಸಿರಿ ಧಾನ್ಯಗಳ ಬಳಕೆಯಾಗಲಿ ಧಾನ್ಯಗಳಲ್ಲಿ ಹೆಚ್ಚು ಖನಿಜಾಂಶಗಳು, ಹೆಚ್ಚು ನಾರಿನ ಅಂಶ ಹೊಂದಿರುವ ನವಣೆ, ಸಾಮೆ ಕೊರ್ಲೆ ಸಿರಿ ಧಾನ್ಯವನ್ನು ಬಳಸಿ ಇವುಗಳಿಂದ ನಾನಾ ಬಗೆಯ ಕಾದ್ಯಗಳನ್ನು ತಯಾರಿಸಬಹುದು ಅದಲ್ಲದೇ ನಿತ್ಯ ಆಹಾರ ಸೇವನೆಯಲ್ಲಿ ಇವುಗಳ ಬಳಕೆಯಿಂದ ರಕ್ತದೊತ್ತಡ ಮಧುಮೇಹ ಕ್ಯಾನ್ಸರ್ ರೋಗಗಳನ್ನು ಬಾರದಂತೆ ನೋಡಿಕೊಳ್ಳಬಹುದು. ಅಪೌಷ್ಟಿಕತೆಯಿಂದ ಮಕ್ಕಳಿಗೆ ಬರಬಹುದಾದ ಅನೇಕ ರೋಗಗಳು ಬರದಂತೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು ಎಂದರು.
ಧರ್ಮಸ್ಥಳ ಗ್ರಾಮೀಣಾ ಅಭಿವೃದ್ಧಿ ಸಂಸ್ಥೆಯ ತಾಲ್ಲೂಕು ಯೋಜನಾಧಿಕಾರಿ ಆಶೋಕ್ ಮಾತನಾಡಿ, ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಸಂಸ್ಥೆ ಹಲವಾರು ಅಭಿವೃದ್ಧಿ ಯೋಜನೆಗಳನ್ನು ಸಮುದಾಯಕ್ಕೆ ತಲುಪಿಸುವ ಕಾರ್ಯ ನಿರ್ವಹಿಸುತ್ತಿದೆ. ಜ್ಞಾನ ವಿಕಾಸ ಸಂಘಗಳ ಮೂಲಕ ಈ ದಿನ ಸಿರಿ ಧಾನ್ಯ ಮಹತ್ವದ ಬಗ್ಗೆ ಪ್ರಾತ್ಯಕ್ಷಿಕೆ ಕಾರ್ಯಕ್ರಮದ ಸದುಪಯೋಗಪಡಿಸಿಕೊಳ್ಳಿ ಎಂದು ಹೇಳಿದ ಅವರು, ನಿಮ್ಮಗಳ ಕುಟುಂಬದ ಆರೋಗ್ಯಕ್ಕಾದರೂ ಸಿರಿಧಾನ್ಯ ಬೆಳೆಯಿರಿ ಎಂದು ಸಲಹೆ ನೀಡಿದರು.
ಆರೋಗ್ಯ ನಿರೀಕ್ಷಣಾಧಿಕಾರಿ ಶ್ರೀಧರ್, ಆರೋಗ್ಯ ಸುರಕ್ಷತಾಧಿಕಾರಿ ಮನುಜಾ ಮಾತನಾಡಿದರು.
ಕಾರ್ಯಕ್ರಮದಲ್ಲಿ ಜ್ಞಾನ ವಿಕಾಸ ಸಂಘದ ಸದಸ್ಯರಾದ ಲೋಕೇಶ್, ಸುಧಾ, ಕಮಲಮ್ಮ, ಗ್ರಾಪಂ ಸದಸ್ಯರಾದ ಗುರುಮೂರ್ತಿ, ಶಿವಮ್ಮ ಇತರರು ಭಾಗವಹಿಸಿದ್ದರು.