i
ರೈತ ಕುಟುಂಬದ ಮಕ್ಕಳಿಗೆ ಮೀಸಲಾತಿ ಹೆಚ್ಚಳ- ಸಚಿವ ಬಿ.ಸಿ.ಪಾಟೀಲ್…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ಕೃಷಿ ಇಲಾಖೆಯಿಂದ ನಿವೃತ್ತರಾದ ಅಧಿಕಾರಿಗಳು ರೈತರಿಗೆ ಆಧುನಿಕ ವೈಜ್ಞಾನಿಕ ಕೃಷಿ ಪದ್ಧತಿ ಕುರಿತು ತಿಳಿಸಿಕೊಡಬೇಕು. ರೈತರ ಆದಾಯ ದ್ವಿಗುಣವಾಗುವಂತೆ ಹಾಗೂ ರೈತರು ಹೆಚ್ಚು ಶಕ್ತಿಶಾಲಿಗಳನ್ನಾಗಿಸುವ ಪ್ರಯತ್ನವನ್ನು ಕೃಷಿ ಇಲಾಖೆ ಮಾಡುತ್ತಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ತಿಳಿಸಿದರು.
ಇಂದು ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾದ ಅಭಿನಂದನಾ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು. ವಿಶ್ವವಿದ್ಯಾಲಯದ ಪ್ರೊಫೆಸರ್ ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ಸ್ ಉತ್ತಮ ತಳಿಯೆಂದು ವಿದ್ಯಾರ್ಥಿಗಳಿಗೆ ತೋರಿಸುತ್ತಾರೆ. ಅದರಿಂದ ಉಂಟಾಗುವ ಲಾಭದ ಬಗ್ಗೆ ತಿಳಿಸುವುದರಲ್ಲಿ ವಿಫಲರಾಗಿದ್ದಾರೆ. ವಿಶ್ವವಿದ್ಯಾನಿಲಯದ ವಿದ್ಯೆಯು ಕಾಂಪೌಡಿಗೆ ಸೀಮಿತವಾಗಬಾರದು. ನಿವೃತ್ತರಾದ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಅಲ್ಲಿನ ಆಗು- ಹೋಗುಗಳನ್ನು ಪರಿಶೀಲಿಸಿ ರೈತರಿಗೆ ಅಗತ್ಯ ಮಾಹಿತಿಯನ್ನು ಕೊಡುವಂತಹ ಕೆಲಸವಾಗಬೇಕು. ರೈತರು ಉಪಕಸುಬು ಮಾಡುವ ಕೆಲಸ ಮಾಡಬೇಕು. ಆಧುನಿಕ ಕೃಷಿ ತಂತ್ರಜ್ಞಾನವನ್ನು ರೈತರಿಗೆ ತಲುಪುವ ನಿಟ್ಟಿನಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕೃಷಿಕ ದುಡಿಯುವುದರಿಂದ ನಮಗೆಲ್ಲ ಅನ್ನ ಸಿಗುತ್ತಿದೆ. ಅನ್ನದಾತನ ವೃತ್ತಿಯನ್ನು ಗೌರವಯುತವಾದ ವೃತ್ತಿಯನ್ನಾಗಿ ನಾವು ಕಾಣುತ್ತಿಲ್ಲ. ರೈತ ಮಕ್ಕಳ ವಿದ್ಯಾರ್ಥಿಗಳಿಗೆ 10% ಮೀಸಲಾತಿ ಹೆಚ್ಚು ಮಾಡಿದ್ದೀವಿ 4300 ಸೀಟುಗಳಲ್ಲಿ 430 ಸೀಟುಗಳು ರೈತರ ಮಕ್ಕಳಿಗೆ ಸಿಗುತ್ತದೆ. ರೈತರನ್ನು ಮೇಲೆ ತರಬೇಕು ಎಂದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಎಲ್ಲಿಯವರೆಗೆ ಕೃಷಿ ಪದವೀಧರರು ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳುವುದಿಲ್ಲವೊ ಅಲ್ಲಿಯವರೆಗೆ ಕೃಷಿಕರು ಉದ್ದಾರವಾಗಲು ಸಾಧ್ಯವಿಲ್ಲ. ಎಂದು ತಿಳಿಸಿದರು.
4000 ವಿದ್ಯಾರ್ಥಿಗಳಿಗೆ ಪ್ರವೇಶ ಕೊಟ್ಟರೆ ಅವರು ಕೆಲಸಕ್ಕೆ ಹೋಗಬೇಕು ಎಂದು ಹೇಳುತ್ತಾರೆ ಹೊರತು ಕೆಲಸ ಕೊಡಲು ಮುಂದೆ ಬರುತ್ತಿಲ್ಲ. ಕೃಷಿ ಇಲಾಖೆಯ ವತಿಯಿಂದ ಅಂತರಾಷ್ಟ್ರೀಯ ಸಿರಿ ಧಾನ್ಯಗಳ ಮೇಳವನ್ನು 20ನೇ ಜನವರಿ 2023ರಿಂದ 22ನೇ ಜನವರಿ 2023ರವರೆಗೆ ಆಚರಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಗತಿಶೀಲ ತೋಟಗಾರಿಕಾ ಬೆಳೆಗಾರರು ಹಾಗೂ ಮಾಜಿ ಸಚಿವರಾದ ಡಾ.ಹೆಚ್. ಏಕಾಂತಯ್ಯ, ಬೆಂಗಳೂರು ಉತ್ತರ ತಾಲ್ಲೂಕು, ನಾಗದಾಸನಹಳ್ಳಿಯ ಪ್ರಗತಿಶೀಲ ತೋಟಗಾರಿಕಾ ಬೆಳೆಗಾರರಾದ ಡಾ.ಎನ್.ಸಿ. ಪಟೇಲ್, ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳಾದ ಎಂ.ಎಸ್. ದಿವಾಕರ್ ಐ.ಎ.ಎಸ್. ಅವರಿಗೆ ಸಚಿವರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಕಾರ್ಯದರ್ಶಿಗಳಾದ ಶಿವಯೋಗಿ ಸಿ. ಕಳಸದ ಐ.ಎ.ಎಸ್, ಕೃಷಿ ಇಲಾಖೆಯ ಆಯುಕ್ತರಾದ ಬಿ.ಶರತ್ ಐ.ಎ.ಎಸ್., ಬೆಂಗಳೂರಿನ ಐ.ಸಿ.ಎ.ಆರ್. ಅಟಾರಿಯ ನಿರ್ದೇಶಕರಾದ ವೆಂಕಟಸುಬ್ರಮಣಿಯನ್, ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರು ಹಾಗೂ ಕೃಷಿ ಇಲಾಖೆಯ ನಿರ್ದೇಶಕರಾದ ನಂದಿನಿ ಕುಮಾರಿ ಸಿ.ಎನ್. ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.
ಕೃಷಿ ಇಲಾಖೆಯಿಂದ ನಿವೃತ್ತರಾದ ಅಧಿಕಾರಿಗಳು ರೈತರಿಗೆ ಆಧುನಿಕ ವೈಜ್ಞಾನಿಕ ಕೃಷಿ ಪದ್ಧತಿ ಕುರಿತು ತಿಳಿಸಿಕೊಡಬೇಕು. ರೈತರ ಆದಾಯ ದ್ವಿಗುಣವಾಗುವಂತೆ ಹಾಗೂ ರೈತರು ಹೆಚ್ಚು ಶಕ್ತಿಶಾಲಿಗಳನ್ನಾಗಿಸುವ ಪ್ರಯತ್ನವನ್ನು ಕೃಷಿ ಇಲಾಖೆ ಮಾಡುತ್ತಿದೆ ಎಂದು ಕೃಷಿ ಸಚಿವ ಬಿ.ಸಿ. ಪಾಟೀಲ್ ಅವರು ತಿಳಿಸಿದರು.
ಇಂದು ಕೃಷಿ ತಂತ್ರಜ್ಞರ ಸಂಸ್ಥೆಯಲ್ಲಿ ಹಮ್ಮಿಕೊಳ್ಳಲಾದ ಅಭಿನಂದನಾ ಕಾರ್ಯಕ್ರಮ ಹಾಗೂ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಸಚಿವರು. ವಿಶ್ವವಿದ್ಯಾಲಯದ ಪ್ರೊಫೆಸರ್ ಹಾಗೂ ಅಸಿಸ್ಟೆಂಟ್ ಪ್ರೊಫೆಸರ್ಸ್ ಉತ್ತಮ ತಳಿಯೆಂದು ವಿದ್ಯಾರ್ಥಿಗಳಿಗೆ ತೋರಿಸುತ್ತಾರೆ. ಅದರಿಂದ ಉಂಟಾಗುವ ಲಾಭದ ಬಗ್ಗೆ ತಿಳಿಸುವುದರಲ್ಲಿ ವಿಫಲರಾಗಿದ್ದಾರೆ. ವಿಶ್ವವಿದ್ಯಾನಿಲಯದ ವಿದ್ಯೆಯು ಕಾಂಪೌಡಿಗೆ ಸೀಮಿತವಾಗಬಾರದು. ನಿವೃತ್ತರಾದ ಅಧಿಕಾರಿಗಳು ರೈತರ ಹೊಲಗಳಿಗೆ ಭೇಟಿ ನೀಡಿ ಅಲ್ಲಿನ ಆಗು- ಹೋಗುಗಳನ್ನು ಪರಿಶೀಲಿಸಿ ರೈತರಿಗೆ ಅಗತ್ಯ ಮಾಹಿತಿಯನ್ನು ಕೊಡುವಂತಹ ಕೆಲಸವಾಗಬೇಕು. ರೈತರು ಉಪಕಸುಬು ಮಾಡುವ ಕೆಲಸ ಮಾಡಬೇಕು. ಆಧುನಿಕ ಕೃಷಿ ತಂತ್ರಜ್ಞಾನವನ್ನು ರೈತರಿಗೆ ತಲುಪುವ ನಿಟ್ಟಿನಲ್ಲಿ ಕೃಷಿ ತಂತ್ರಜ್ಞರ ಸಂಸ್ಥೆ ಕೆಲಸ ಮಾಡಬೇಕು ಎಂದು ತಿಳಿಸಿದರು.
ಕೃಷಿಕ ದುಡಿಯುವುದರಿಂದ ನಮಗೆಲ್ಲ ಅನ್ನ ಸಿಗುತ್ತಿದೆ. ಅನ್ನದಾತನ ವೃತ್ತಿಯನ್ನು ಗೌರವಯುತವಾದ ವೃತ್ತಿಯನ್ನಾಗಿ ನಾವು ಕಾಣುತ್ತಿಲ್ಲ. ರೈತ ಮಕ್ಕಳ ವಿದ್ಯಾರ್ಥಿಗಳಿಗೆ 10% ಮೀಸಲಾತಿ ಹೆಚ್ಚು ಮಾಡಿದ್ದೀವಿ 4300 ಸೀಟುಗಳಲ್ಲಿ 430 ಸೀಟುಗಳು ರೈತರ ಮಕ್ಕಳಿಗೆ ಸಿಗುತ್ತದೆ. ರೈತರನ್ನು ಮೇಲೆ ತರಬೇಕು ಎಂದು ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರ ಶ್ರಮಿಸುತ್ತಿದೆ. ಎಲ್ಲಿಯವರೆಗೆ ಕೃಷಿ ಪದವೀಧರರು ಕೃಷಿಯನ್ನು ಲಾಭದಾಯಕವನ್ನಾಗಿ ಮಾಡಿಕೊಳ್ಳುವುದಿಲ್ಲವೊ ಅಲ್ಲಿಯವರೆಗೆ ಕೃಷಿಕರು ಉದ್ದಾರವಾಗಲು ಸಾಧ್ಯವಿಲ್ಲ. ಎಂದು ತಿಳಿಸಿದರು.
4000 ವಿದ್ಯಾರ್ಥಿಗಳಿಗೆ ಪ್ರವೇಶ ಕೊಟ್ಟರೆ ಅವರು ಕೆಲಸಕ್ಕೆ ಹೋಗಬೇಕು ಎಂದು ಹೇಳುತ್ತಾರೆ ಹೊರತು ಕೆಲಸ ಕೊಡಲು ಮುಂದೆ ಬರುತ್ತಿಲ್ಲ. ಕೃಷಿ ಇಲಾಖೆಯ ವತಿಯಿಂದ ಅಂತರಾಷ್ಟ್ರೀಯ ಸಿರಿ ಧಾನ್ಯಗಳ ಮೇಳವನ್ನು 20ನೇ ಜನವರಿ 2023ರಿಂದ 22ನೇ ಜನವರಿ 2023ರವರೆಗೆ ಆಚರಿಸಲಾಗುತ್ತದೆ ಎಂದು ಸಚಿವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಪ್ರಗತಿಶೀಲ ತೋಟಗಾರಿಕಾ ಬೆಳೆಗಾರರು ಹಾಗೂ ಮಾಜಿ ಸಚಿವರಾದ ಡಾ.ಹೆಚ್. ಏಕಾಂತಯ್ಯ, ಬೆಂಗಳೂರು ಉತ್ತರ ತಾಲ್ಲೂಕು, ನಾಗದಾಸನಹಳ್ಳಿಯ ಪ್ರಗತಿಶೀಲ ತೋಟಗಾರಿಕಾ ಬೆಳೆಗಾರರಾದ ಡಾ.ಎನ್.ಸಿ. ಪಟೇಲ್, ಚಿತ್ರದುರ್ಗ ಜಿಲ್ಲೆಯ ಜಿಲ್ಲಾ ಪಂಚಾಯತ್ನ ಮುಖ್ಯ ಕಾರ್ಯನಿರ್ವಹಣ ಅಧಿಕಾರಿಗಳಾದ ಎಂ.ಎಸ್. ದಿವಾಕರ್ ಐ.ಎ.ಎಸ್. ಅವರಿಗೆ ಸಚಿವರು ಸನ್ಮಾನಿಸಿದರು.
ಕಾರ್ಯಕ್ರಮದಲ್ಲಿ ಕೃಷಿ ಇಲಾಖೆಯ ಕಾರ್ಯದರ್ಶಿಗಳಾದ ಶಿವಯೋಗಿ ಸಿ. ಕಳಸದ ಐ.ಎ.ಎಸ್, ಕೃಷಿ ಇಲಾಖೆಯ ಆಯುಕ್ತರಾದ ಬಿ.ಶರತ್ ಐ.ಎ.ಎಸ್., ಬೆಂಗಳೂರಿನ ಐ.ಸಿ.ಎ.ಆರ್. ಅಟಾರಿಯ ನಿರ್ದೇಶಕರಾದ ವೆಂಕಟಸುಬ್ರಮಣಿಯನ್, ಕೃಷಿ ತಂತ್ರಜ್ಞರ ಸಂಸ್ಥೆಯ ಅಧ್ಯಕ್ಷರು ಹಾಗೂ ಕೃಷಿ ಇಲಾಖೆಯ ನಿರ್ದೇಶಕರಾದ ನಂದಿನಿ ಕುಮಾರಿ ಸಿ.ಎನ್. ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.