i
ಕೊಲೆಗೆ ಸುಫಾರಿ, ಜೆಡಿಎಸ್ ಎಂಎಲ್ಎ ಗೌರಿಶಂಕರ್, ಬೊಮ್ಮೇನಹಳ್ಳಿ ಬಾಬು ವಿರುದ್ಧ ಎಫ್ಐಆರ್ ದಾಖಲು…
ಚಂದ್ರವಳ್ಳಿ ನ್ಯೂಸ್, ತುಮಕೂರು:
ಮಾಜಿ ಶಾಸಕ ಸುರೇಶ್ ಗೌಡ ಅವರನ್ನು ಕೊಲೆ ಮಾಡುವಂತೆ ಸುಫಾರಿ ನೀಡಿರುವ ಆರೋಪದಡಿ ಜೆಡಿಎಸ್ ಎಂಎಲ್ಎ ಡಿ.ಸಿ.ಗೌರಿಶಂಕರ್, ಜೆಡಿಎಸ್ ಮುಖಂಡ ಬೊಮ್ಮೇನಹಳ್ಳಿ ಬಾಬು ಹಾಗೂ ವಕೀಲ ಮಹೇಶ್ ವಿರುದ್ಧ ತುಮಕೂರು ಹೊರ ವಲಯದ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ತುಮಕೂರು ಗ್ರಾಮಾಂತರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಬಿಜೆಪಿ ಮುಖಂಡ ಸುರೇಶ್ ಗೌಡ ಅವರು ನೀಡಿರುವ ದೂರು ಆಧರಿಸಿ ನ್ಯಾಯಾಲಯದ ಅನುಮತಿ ಪಡೆದು ಪೊಲೀಸರು ಶಾಸಕ ಗೌರಿಶಂಕರ್ ಮತ್ತು ಇತರೆ ಮೂರು ಮಂದಿ ವಿರುದ್ಧ ದೂರು ದಾಖಲು ಮಾಡಿಕೊಂಡಿದ್ದಾರೆ.
ನನ್ನನ್ನು ಕೊಲೆ ಮಾಡಲು ರೌಡಿ ಶೀಟರ್ ಒಬ್ಬನಿಗೆ ಎಂಎಲ್ಎ ಡಿ.ಸಿ.ಗೌರಿಶಂಕರ್ ಅವರ ಆಪ್ತ ಹಿರೇಹಳ್ಳಿ ಮಹೇಶ್ ಮೂಲಕ ರೌಡಿ ಶೀಟರ್ ಗೆ 5 ಕೋಟಿ ರೂ.ಗಳನ್ನು ಶಾಸಕ ಗೌರಿಶಂಕರ್ ಮತ್ತು ಅಟ್ಟಿಕಾ ಗೋಲ್ಡ್ ಕಂಪನಿ ಮಾಲೀಕ ಬೊಮ್ಮೇನಹಳ್ಳಿ ಬಾಬು ಅವರು ನೀಡಲಿದ್ದಾರೆಂದು ಆರೋಪಿಸಿ ಮಾಜಿ ಶಾಸಕ ಸುರೇಶ್ ಗೌಡ ಅವರು ನ.23 ರಂದು ದೂರು ನೀಡಿದ್ದು ದೂರಿ ಆಧರಿಸಿ ಪೊಲೀಸರು ನಾಲ್ವರ ವಿರುದ್ಧ ಪ್ರಕರಣ ದಾಖಲು ಮಾಡಿಕೊಂಡಿದ್ದಾರೆ.
ಹಾಲಿ ಶಾಸಕ ಗೌರಿಶಂಕರ್ ಅವರು ರಾಜಕೀಯ ದ್ವೇಷದ ಕಾರಣದಿಂದಾಗಿ ಮಹೇಶ್ ಮೂಲಕ ಈಗಾಗಲೇ ಮಾಜಿ ಮೇಯರ್ ಕೊಲೆ ಮತ್ತು ವಿವಿಧ ಪ್ರಕರಣಗಳಲ್ಲಿ ಆಪರಾಧಿಯಾಗಿ ಜೈಲಿನಲ್ಲಿರುವ ಓರ್ವನಿಗೆ ನನ್ನನ್ನು ಕೊಲೆ ಮಾಡಲು 5 ಕೋಟಿ ರೂ.ಗಳ ಸುಫಾರಿ ನೀಡಲಾಗಿದ್ದು ಈ ಹಣವನ್ನು ಶಾಸಕ ಗೌರಿ ಶಂಕರ್, ಬೊಮ್ಮೇನಹಳ್ಳಿ ಬಾಬು ಅವರು ನೀಡುತ್ತಾರೆಂದು ಸುಫಾರಿ ನೀಡಿದಾತನಿಗೆ ತಿಳಿಸಲಾಗಿದೆ ಎಂದು ಸುರೇಶ್ ಗೌಡ ಅವರು ನೀಡಿರುವ ದೂರಿನಲ್ಲಿ ದಾಖಲಿಸಲಾಗಿದೆ.