i
ಬುಡಕಟ್ಟುಗಳ ಅಧ್ಯಯನಕ್ಕಾಗಿ ಡಿ.ಎಂ.ಪ್ರಹ್ಲಾದಗೆ ಪಿ.ಹೆಚ್.ಡಿ ಪದವಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಸುಟ್ಟ ಕರ್ನಾರಹಟ್ಟಿ ಗ್ರಾಮದ ತಾಯಿ ಪಾಪಮ್ಮ, ತಂದೆ ದೊಡ್ಡ ಮಲ್ಲಯ್ಯ ಅವರ ಕಿರಿಯ ಮಗನಾದ ಪ್ರಹ್ಲಾದ ಡಿ.ಎಂ. ಅವರು ಮಂಡಿಸಿದ “ಬುಡಕಟ್ಟು ಸಮುದಾಯದ ಕಂಪಳದೇವರು: ಸಾಂಸ್ಕೃತಿಕ ಸಂಕಥನ” ಎಂಬ ಮಹಾಪ್ರಬಂಧಕ್ಕೆ ಹಂಪಿ ಕನ್ನಡ ವಿಶ್ವ ವಿದ್ಯಾನಿಲಯ ಪಿ.ಹೆಚ್.ಡಿ ಪದವಿ ನೀಡಿದೆ.
ಹಂಪಿ ಕನ್ನಡ ವಿಶ್ವವಿದ್ಯಾಲಯದ ಜಾನಪದ ಅಧ್ಯಯನ ವಿಭಾಗದ ಪ್ರಾಧ್ಯಾಪಕರು ಹಾಗೂ ಮುಖ್ಯಸ್ಥರಾದ ಡಾ.ಮಂಜುನಾಥ ಬೇವಿನಕಟ್ಟಿ ಅವರ ಮಾರ್ಗದರ್ಶನದಲ್ಲಿ ಈ ಪ್ರಬಂಧ ಸಿದ್ದಪಡಿಸಿದ್ದರು.