i
ರೈತರೇ ಹಣ ಬಿಕ್ಕಿದ್ದರೆ ಮಿಸ್ಡ್ ಕಾಲ್ ಮಾಡಿ, ನಿಮ್ಮ ಖಾತೆಗೆ ಜಮಾ ಆಗಲಿದೆ…
ಚಂದ್ರವಳ್ಳಿ ನ್ಯೂಸ್, ನವದೆಹಲಿ:
ದೇಶದ ಕೋಟ್ಯಂತರ ರೈತರ ಆದಾಯ ದ್ವಿಗುಣ ಮಾಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಉತ್ತಮ ತೀರ್ಮಾನ ಮಾಡಿದ್ದು ಯಾವ ರೈತರಿಗೆ ಹಣದ ಅಗತ್ಯ ಇದೆಯೋ ಅವರು ಪಿಎನ್ ಬಿ ಗೆ ಮಿಸ್ಡ್ ಕಾಲ್ ಮಾಡಿದರೆ ನೇರವಾಗಿ ರೈತರ ಖಾತೆಗೆ ಹಣ ಜಮಾ ಆಗಲಿದೆ.
ದೇಶದ ಸರ್ಕಾರಿ ಬ್ಯಾಂಕ್ ಪಿಎನ್ಬಿ(PNB) ರೈತರಿಗೆ ದೊಡ್ಡ ಉಡುಗೊರೆಯನ್ನ ನೀಡುತ್ತಿದೆ. ರೈತರಿಗೆ ಹಣ ಬೇಕಾದರೆ ಮಿಸ್ಡ್ ಕಾಲ್ ಮಾಡಬೇಕಷ್ಟೆ. ಹಣವನ್ನ ನೇರವಾಗಿ ಅವರ ಖಾತೆಗಳಿಗೆ ವರ್ಗಾಯಿಸಲಾಗುತ್ತಿದೆ.
ಪಂಜಾಬ್ ನ್ಯಾಷನಲ್ ಬ್ಯಾಂಕ್ ತನ್ನ ಅಧಿಕೃತ ಟ್ವೀಟ್ನಲ್ಲಿ ಮಾಹಿತಿ ನೀಡಿದ್ದು, ರೈತರಿಗೆ ಹಣದ ಅಗತ್ಯವಿದ್ದರೆ, ಪಿಎನ್ಬಿಯಿಂದ ರೈತರಿಗೆ ಕೃಷಿ ಸಾಲ ಸೌಲಭ್ಯವನ್ನ ನೀಡಲಾಗುತ್ತಿದ್ದು, ಇದರ ಅಡಿಯಲ್ಲಿ ರೈತರ ಆದಾಯವನ್ನ ಹೆಚ್ಚಿಸುವುದರ ಜೊತೆಗೆ ಅವರ ಜೀವನವೂ ಉತ್ತಮವಾಗಿರುತ್ತದೆ. ನೀವು ಎಸ್ಎಂಎಸ್ ಮೂಲಕ, ಮಿಸ್ಡ್ ಕಾಲ್ ನೀಡುವ ಮೂಲಕ ಮತ್ತು ಆನ್ಲೈನ್ನಲ್ಲಿಯೂ ಈ ಸಾಲಕ್ಕೆ ಅರ್ಜಿ ಸಲ್ಲಿಸಬಹುದು.
ಯಾವ ಸಂಖ್ಯೆಗೆ ಎಸ್ಎಂಎಸ್ ಅಥವಾ ಮಿಸ್ಡ್ ಕಾಲ್ ಮಾಡಬೇಕು-
ಕೃಷಿ ಸಾಲಕ್ಕಾಗಿ ರೈತರು 56070 ಗೆ SMS ಮಾಡಿ ಮತ್ತು ಅದರಲ್ಲಿ LOAN ಎಂದು ಬರೆಯಬೇಕು. ಇದನ್ನು ಹೊರತುಪಡಿಸಿ 18001805555 ಗೆ ಮಿಸ್ಡ್ ಕಾಲ್ ನೀಡಬಹುದು. ಕಾಲ್ ಸೆಂಟರ್‘18001802222ಗೆ ಸಂಪರ್ಕಿಸಬಹುದು.
ಇದನ್ನು ಹೊರತುಪಡಿಸಿ, PNB One ಅಪ್ಲಿಕೇಶನ್ ಮೂಲಕವೂ ಅರ್ಜಿ ಸಲ್ಲಿಸಬಹುದು. ನೆಟ್ ಬ್ಯಾಂಕಿಂಗ್ ವೆಬ್ಸೈಟ್ netpnb.com ಮೂಲಕವೂ ಅರ್ಜಿ ಸಲ್ಲಿಸಬಹುದು.