i
ಮಾಡೆಲ್ ಆಗುವ ಕನಸು ಹೊತ್ತ ಶೃತಿಯ ಕತ್ತುಹಿಸುಕಿ ಬರ್ಬರವಾಗಿ ಹತ್ಯೆ…
ಚಂದ್ರವಳ್ಳಿ ನ್ಯೂಸ್,ರಾಮನಗರ:
ಕಲ್ಯಾಣಮಂಪಟಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಾಡೆಲ್ ಆಗುವ ಕನಸು ಕಂಡಿದ್ದ ಮಹಿಳೆಯೊಬ್ಬಳ ಕತ್ತು ಹಿಸುಕಿ ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ರಾಮನಗರ ಜಿಲ್ಲೆ ಕನಕಪುರ ತಾಲೂಕಿನ ಮಾರಣ್ಣನದೊಡ್ಡಿ ಗ್ರಾಮದ ಬಳಿ ಜರುಗಿದೆ.
ಕನಕಪುರ ನಗರದ ಕುರುಪೇಟೆ ನಿವಾಸಿ ಶೃತಿ(32) ಮೃತ ದುರ್ದೈವಿ. ಕನಕಪುರ ನಗರದ ಕಲ್ಯಾಣಮಂಪಟದಲ್ಲಿ ಕೆಲಸ ಮಾಡುತ್ತಿದ್ದ ಶೃತಿ ತನ್ನ ಅಕ್ಕನಿಗೆ ಕಾಲ್ ಮಾಡಿ ಹೇಳಿ ಹೋಗಿದ್ದಾಳೆ. ಆದರೆ ಕಲ್ಯಾಣಮಂಪಟದಲ್ಲಿ ಕೆಲಸ ಇರದ ಹಿನ್ನೆಲೆಯಲ್ಲಿ ವಾಪಾಸ್ ಬಂದಿದ್ದಾಳೆ. ಆದರೆ ಮನೆಗೆ ಬರಬೇಕಾದ ಆಕೆ ಬೆಳೆಗ್ಗೆ ಮಾರಣ್ಣನದೊಡ್ಡಿ ಗ್ರಾಮದ ಬಳಿ ಶವವಾಗಿ ಪತ್ತೆಯಾಗಿದ್ದಾಳೆ. ಬೆಳಗ್ಗೆ ಮೃತ ಶೃತಿಯ ಗಂಡ ಲೋಕೇಶ್ ಗೆ ಕರೆ ಬಂದಿದೆ. ಲೋಕೇಶ್ ಕೂಡ ರಾತ್ರಿ ಬಂದಿರಬಹುದು ಎಂದು ಬೆಳಗ್ಗೆ ಎದ್ದು ಕೆಲಸಕ್ಕೆ ಹೋಗಿದ್ದಾನೆ. ಆದರೆ ಮಾರಣ್ಣನದೊಡ್ಡಿ ಗ್ರಾಮದ ಬಳಿ ಶೃತಿಯ ಶವ ಪತ್ತೆಯಾಗಿದೆ.
ರಾತ್ರಿ ವಾಪಾಸ್ ಮನೆಗೆ ಬರುವಾಗ ಪರಿಚಿತನೊಬ್ಬ ಕನಕಪುರದಿಂದ ಮಾರಣ್ಣನದೊಡ್ಡಿ ಗ್ರಾಮದವರೆಗೂ ಆಪೇ ಆಟೋದಲ್ಲಿ ಕೂರಿಸಿಕೊಂಡು ಬಂದು ಅಲ್ಲಿ ಆಪೇ ಆಟೋದ ರಬ್ಬರ್ ವೈಯರ್ ನಿಂದ ಕತ್ತುಬಿಗಿದು ಕೊಲೆಗೈದು ನಂತರ ಮೃತದೇಹವನ್ನ ನಡುರಸ್ತೆಯಲ್ಲಿಯೇ ಬಿಸಾಕಿ ಪರಾರಿಯಾಗಿದ್ದಾನೆ. ಈ ಸಂಬಂಧ ಸಾತನೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.