i
ಚಿನ್ನದ ಅಂಗಡಿಯಲ್ಲಿ ಮೂಗುತಿ ಖರೀದಿಸಿ ಸರ ಕದ್ದ ಜೋಡಿ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ನಗರದ ಗಾಂಧಿ ಬಜಾರ್ನಲ್ಲಿ ಮೂಗುತಿ ಖರೀದಿಸಿದ ಮಹಿಳೆಯರು ಒಂದುವರೆ ಲಕ್ಷ ಮೌಲ್ಯದ ಸರ ಕದ್ದೊಯ್ದ ಘಟನೆ ಜರುಗಿದೆ. ಇಲ್ಲಿನ ಚಿನ್ನದಂಗಡಿಯೊಂದರಲ್ಲಿ ಈ ಘಟನೆ ನಡೆದಿದ್ದು ಕೋಟೆ ಪೊಲೀಸ್ಠಾಣೆಯಲ್ಲಿ ಕೇಸ್ದಾಖಲಾಗಿದೆ. ಪ್ರಕರಣ ನಡೆದಿದ್ದೇಗೆ?: ಗಾಂಧಿ ಬಜಾರ್ನಲ್ಲಿರುವ ಚಿನ್ನಾಭರಣ ಅಂಗಡಿಯಲ್ಲಿ ಇಬ್ಬರು ಮಹಿಳೆಯರು ಆಗಮಿಸಿದ್ದರು. ಅಂಗಡಿ ಮಾಲೀಕರಿಗೆ ಚಿನ್ನದ ಸರದ ಡಿಸೈನ್ತೋರಿಸುವಂತೆ ತಿಳಿಸಿದಾಗ ಮಾಲೀಕರು ಚಿನ್ನದ ಸರವಿದ್ದ ಟ್ರೇ ತೆಗೆದು ತೋರಿಸಿದ್ದಾರೆ. ಅದೇ ವೇಳೆ ಇನ್ನೊಬ್ಬ ಗ್ರಾಹಕರು ಅಲ್ಲಿಗೆ ಬಂದಿದ್ದಾರೆ. ಮಾಲೀಕರು ಅವರತ್ತ ಗಮನ ಹರಿಸಿದ ಬೆನ್ನಲ್ಲೆ ಮಹಿಳೆಯರು ಟ್ರೇನಲ್ಲಿದ್ದ ಚಿನ್ನದ ಸರವನ್ನು ಕದ್ದಿದ್ದಾರೆ. ಚಿನ್ನದ ಮೂಗುತಿಯೊಂದನ್ನು ಖರೀದಿಸಿ ಅಲ್ಲಿಂದ ವಾಪಸ್ಹೋಗಿದ್ದಾರೆ. ಅಂಗಡಿ ಮಾಲೀಕನಿಗೆ ಆ ಸಂದರ್ಭದಲ್ಲಿ ಅನುಮಾನ ಬಂದಿರಲಿಲ್ಲ. ಆನಂತರ ಅಂಗಡಿಯಲ್ಲಿ ಸ್ಟಾಕ್ ಪರಿಶೀಲಿಸುತ್ತಿದ್ದಾಗ ಚಿನ್ನದ ಸರ ಕಳುವಾಗಿರುವ ಅಂಶ ಬೆಳಕಿಗೆ ಬಂದಿದೆ. ಸದ್ಯ ಪ್ರಕರಣವನ್ನು ದಾಖಲಿಸಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.