i
ಅಮರಶಿಲ್ಪಿ ಜಕಣಚಾರಿ ನಾಡಿನ ಅತಿಶ್ರೇಷ್ಠ ಶಿಲ್ಪಿಗಳಲ್ಲಿ ಒಬ್ಬರು:ಶಾಸಕ ರಘುಮೂರ್ತಿ…
ಚಂದ್ರವಳ್ಳಿ ನ್ಯೂಸ್, ಚಳ್ಳಕೆರೆ:
-೦೧ ಕಲೆಗಳಿಗೆ ಶಿಲ್ಪಕಲೆಯ ಮೂಲಕ ಜೀವತುಂಬಿದ ನಾಡಿನ ಹೆಸರಾಂತ ಶಿಲ್ಪಿ ಅಮರಶಿಲ್ಪಿ ಜಕಣಚಾರಿಯವರದ್ದು, ಅವರ ಜನ್ಮದಿನಾಚರಣೆಗೆ ಸರ್ಕಾರ ಅವಕಾಶ ಮಾಡಿಕೊಡುವ ಮೂಲಕ ಅವರ ಕಲೆಯ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ಮಾಡಲಾಗುತ್ತಿದೆ ಎಂದು ಶಾಸಕ ಟಿ.ರಘುಮೂರ್ತಿ ತಿಳಿಸಿದರು.
ಅವರು, ಭಾನುವಾರ ತಾಲ್ಲೂಕು ಕಚೇರಿ ಸಭಾಂಗಣದಲ್ಲಿ ತಾಲ್ಲೂಕು ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿ ಹಮ್ಮಿಕೊಂಡಿದ್ದ ಅಮರಶಿಲ್ಪಿ ಜಕಣಚಾರಿ ಜಯಂತಿ ಕಾರ್ಯಕ್ರಮದಲ್ಲಿ ಅವರ ಭಾವಚಿತ್ರಕ್ಕೆ ಪುಪ್ಪರ್ಚನೆ ಮಾಡುವ ಮೂಲಕ ಚಾಲನೆ ನೀಡಿ ಮಾತನಾಡಿದರು.ಇಂತಹ ಅಪೂರ್ವವಾದ ಕಲೆಯನ್ನು ನಾವೆಲ್ಲರೂ ಸಂತೋಷದಿಂದ ವೀಕ್ಷಿಸುತ್ತೇವಲ್ಲದೆ, ಇವರ ಶಿಲ್ಪ ಕಲೆಯ ಬಗ್ಗೆ ಅಪಾರವಾದ ಗೌರವಸೂಚಿಸುತ್ತೇವೆ. ಶಿಲ್ಪ ಕಲೆಯಲ್ಲಿ ಅಮರಶಿಲ್ಪಿ ಜಕಣಚಾರಿಯವರು ಜೀವಂತವಾಗಿದ್ದಾರೆಂದರು.
ಪ್ರಾಸ್ತಾವಿಕವಾಗಿ ಮಾತನಾಡಿದ ತಹಶೀಲ್ಧಾರ್ ಎನ್.ರಘುಮೂರ್ತಿ, ಸರ್ಕಾರ ಅನೇಕ ಮಹಾನೀಯರ ಕೊಡುಗೆಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡುವ ಸಲುವಾಗಿ ಇಂತಹ ಮಹಾನ್ ಶ್ರೇಷ್ಠರ ಜಯಂತಿಯನ್ನು ರಾಷ್ಟ್ರೀಯ ಹಬ್ಬಗಳ ಆಚರಣೆ ಮೂಲಕ ನೆನಪಿಸಿಕೊಳ್ಳುವ ಅವಕಾಶ ನೀಡಿದ್ಧಾರೆ. ಅಮರಶಿಲ್ಪಿ ಜಕಣಚಾರಿ ರಾಷ್ಟ್ರದ ಸರ್ವಶ್ರೇಷ್ಠ ಶಿಲ್ಪಿಗಳಲ್ಲಿ ಒಬ್ಬರು ಎಂದರು.
ವಿಶ್ವಕರ್ಮ ಸಮಾಜದ ತಾಲ್ಲೂಕು ಅಧ್ಯಕ್ಷ ವೆಂಕಟೇಶಚಾರಿ, ಉಪಾಧ್ಯಕ್ಷ ಬ್ರಹ್ಮಾಚಾರಿ, ಶ್ರೀನಿವಾಸ್ಚಾರ್, ನಗರಸಭೆ ಅಧ್ಯಕ್ಷೆ ಸುಮಕ್ಕ, ಸಾಹಿತ್ಯ ಪರಿಷತ್ ಮಾಜಿ ಅಧ್ಯಕ್ಷ ದೊಡ್ಡಮಲ್ಲಯ್ಯ, ಯಾದವರೆಡ್ಡಿ, ಸರಸ್ವತಮ್ಮ, ರಾಜೇಶ್ವರಿ, ಕಮಲಮ್ಮ, ಮೌನೇಶ್ಚಾರಿ, ವಸಂತಚಾರಿ, ಪಿಡಬ್ಲ್ಯೂಡಿ ಎಇಇ ವಿಜಯಭಾಸ್ಕರ್, ಜೆಇ ರಾಜಣ್ಣ, ಕಂದಾಯಾಧಿಕಾರಿ ಲಿಂಗೇಗೌಡ, ಗ್ರಾಮ ಲೆಕ್ಕಿಗ ಪ್ರಕಾಶ್, ಡಿ.ಶ್ರೀನಿವಾಸ್, ಮಂಜುನಾಥ, ಪ್ರಕಾಶ್ ಮುಂತಾದವರು ಉಪಸ್ಥಿತರಿದ್ದರು.