i
ಅದ್ಧೂರಿಯಾಗಿ ನಡೆದ ಭೀಮ ಕೊರೆಂಗಾವ್ ವಿಜಯೋತ್ಸವ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕೆಚ್ಚೆದೆಯ ಕನ್ನಡಿಗರ ಯುವಕ ಸಂಘದ ವತಿಯಿಂದ ಹಿರಿಯೂರಿನ ವೇದಾವತಿ ನಗರದಲ್ಲಿ ನಡೆದ ಭೀಮ ಕೊರೆಂಗಾವ್ ವಿಜಯೋತ್ಸವ ಮತ್ತು ಕನ್ನಡದ ಹಬ್ಬದ ಕಾರ್ಯಕ್ರಮದ ಉದ್ಘಾಟನೆ ಸಮಾರಂಭವನ್ನು ಸಸಿಗೆ ನೀರು ಹಾಕುವ ಮೂಲಕ ಮಾಜಿ ಸಚಿವ ಎಚ್ ಆಂಜನೇಯ ಮತ್ತು ಮಾಜಿ ಸಂಸದ ಬಿ ಎನ್ ಚಂದ್ರಪ್ಪ ಈ ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಕೆಚ್ಚೆದೆಯ ಕನ್ನಡಿಗರ ಯುವಕ ಸಂಘದ ಅಧ್ಯಕ್ಷ ಪ್ರದೀಪ್ ಎಚ್ ಮತ್ತು ಸಂಸ್ಥಾಪಕ ಪ್ರಸನ್ನ ಕುಮಾರ್, ಕೆ ಪಿ ರಾಘವೇಂದ್ರ ಮತ್ತು ನಗರಸಭೆ ಸದಸ್ಯ ತಿಪ್ಪೇಸ್ವಾಮಿ, ಕಾಂಗ್ರೆಸ್ ಮುಖಂಡರುಗಳಾದ ಜಿಎಲ್ ಮೂರ್ತಿ ಎಂಡಿ ಪ್ರಕಾಶ್ ಪ್ರಭು ಯಾದವ್ ರಾಜೇಶ್ ಲಿಂಗರಾಜ್ ಡಾ. ಸುಜಾತ ಹಲವು ಕನ್ನಡ ಸಂಘಟನೆಯ ಮುಖಂಡರುಗಳಾದ ಕೃಷ್ಣ ಪೂಜಾರ್ ಮತ್ತು ದಲಿತ ಸಂಘಟನೆಯ ಮುಖಂಡರುಗಳು ಹಾಗೂ ಸಂಘಟನೆಯ ಪದಾಧಿಕಾರಿಗಳಾದ ನಿತಿನ್, ಭರತ್, ಮುನಿ, ಧನುಷ್, ಮುರಳಿ ಯಾದವ್, ಕೃಷ್ಣ, S ಸಂದೀಪ್, ತಿಪ್ಪೇಶ್, ಕೋಟಿ ರಮೇಶ್ ಕುಮಾರ್, ಸಂತೋಷ್, ಪ್ರತಾಪ್, ಸುಹೇಬ್ ಇನ್ನು ಹಲವು ಮುಖಂಡರುಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.