i
ಆತ್ಮ ರಕ್ಷಣೆಗಾಗಿ ಪ್ರತಿಯೊಬ್ಬರೂ ಬಂದೂಕು ತರಬೇತಿ ಪಡೆಯಬೇಕು-ಶಾಸಕಿ ಕೆ ಪೂರ್ಣಿಮಾ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಆತ್ಮ ರಕ್ಷಣೆಗಾಗಿ ಪ್ರತಿಯೊಬ್ಬರೂ ಬಂದೂಕು ತರಬೇತಿ ಪಡೆಯಬೇಕು ಎಂದು ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ್ ಹೇಳಿದರು.
ಹಿರಿಯೂರು ನಗರದ ನೌಕರರ ಭವನದಲ್ಲಿ ಚಿತ್ರದುರ್ಗ ಜಿಲ್ಲಾ ಪೊಲೀಸ್ ನಾಗರೀಕ ಬಂದೂಕು ತರಬೇತಿ ಸಂಸ್ಥೆ ಇವರುಗಳ ವತಿಯಿಂದ ನಡೆದ ನಾಗರಿಕ ಬಂದೂಕು ತರಬೇತಿ ಶಿಬಿರ ಉದ್ಘಾಟಿಸಿ ಅವರು ಮಾತನಾಡಿದರು.
ನಾಗರಿಕ ಬಂದೂಕು ತರಬೇತಿಯನ್ನು 1962 ರಲ್ಲಿ ಚೀನಾ ಭಾರತ ದೇಶದ ಮೇಲೆ ಅಕ್ರಮಣ ನಡೆಸಿದಾಗ ಚೀನಿ ಸೈನಿಕರು ನಾಗರೀಕರ ನೆಲೆಗಳ ಮೇಲು ದಾಳಿ ನಡೆಸಿರುತ್ತಾರೆ. ಈ ಹಿನ್ನೆಲೆಯಲ್ಲಿ ಕೇಂದ್ರ ಗೃಹ ಸಚಿವಾಲಯ ನಾಗರೀಕರ ಸ್ವಯಂ ರಕ್ಷಣೆಗಾಗಿ ಬಂದೂಕು ಬಳಸುವ ತರಬೇತಿಯನ್ನು ಸ್ವಯಂಸೇವಾ ಸಂಸ್ಥೆಗಳ ಮೂಲಕ ನೀಡಲು ತೀರ್ಮಾನಿಸಿರುತ್ತದೆ ಎಂದು ಹೇಳಿದರು.
ಪೊಲೀಸು ಮತ್ತು ನಾಗರೀಕರ ಮಧ್ಯ ಉತ್ತಮ ಸಂಬಂಧ ಬೆಳೆಯುವುದಕ್ಕಾಗಿ, ಆತ್ಮ ರಕ್ಷಣೆ ಹಾಗೂ ಕಾನೂನಿನ ಅರಿವು ಪಡೆಯುವುದಕ್ಕಾಗಿ, ಆಯುಧಗಳು, ಮದ್ದು ಗುಂಡುಗಳು ಹಾಗೂ ಆಶೀರ್ವಾದ ಬಗ್ಗೆ ಸಂಕ್ಷಿಪ್ತ ಮಾಹಿತಿ, ಅವುಗಳ ಸಂರಕ್ಷಣೆ ಹಾಗೂ ಸುರಕ್ಷತೆ ಮತ್ತು ಅವುಗಳ ಉಪಯೋಗದ ಬಗ್ಗೆ ಮಾಹಿತಿ ಹಾಗೂ ಪರಿಸರ ಸಂರಕ್ಷಣೆ ಆಯುಧಗಳ ಕಾಯ್ದೆ ಇವುಗಳ ಬಗ್ಗೆ ಮಾಹಿತಿ ನೀಡಲಾಗುತ್ತದೆ ಈ ನಿಟ್ಟಿನಲ್ಲಿ ನಾಗರೀಕ ಬಂದೂಕು ತರಬೇತಿ ಸಹಕಾರಿ ಆಗಿರುತ್ತದೆ ಎಂದರು.
ಈವರೆಗೂ ಒಟ್ಟು 3637 ಜನ ಪುರುಷರು ಹಾಗೂ 544 ಜನ ಮಹಿಳೆಯರು ಯಶಸ್ವಿಯಾಗಿ ಜಿಲ್ಲೆಯಲ್ಲಿ ತರಬೇತಿ ಪಡೆದಿರುತ್ತಾರೆಂದು ತಿಳಿಸಿದರು
ಈ ಸಂದರ್ಭದಲ್ಲಿ ನಿವೃತ್ತ ಪೊಲೀಸ್ ಅಧಿಕಾರಿ ಹಾಗೂ ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟದ ಅಧ್ಯಕ್ಷ ಡಿ ಟಿ ಶ್ರೀನಿವಾಸ, ಎಎಸ್ ಪಿ ಕುಮಾರಸ್ವಾಮಿ, ವೃತ್ತ ನಿರೀಕ್ಷಕ ರಾಘವೇಂದ್ರ, ಶಿವಕುಮಾರ್, ಆನಂದ್, ತರಬೇತಿ ಸಂಸ್ಥೆ ಮುಖ್ಯಸ್ಥ ಅನಂತ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.