i
ತರಳಬಾಳು ಹುಣ್ಣಿಮೆಯಲ್ಲಿ ಬಡಿದಾಟ…
ಚಂದ್ರವಳ್ಳಿ ನ್ಯೂಸ್, ಕೊಟ್ಟೂರು:
ಸಿರಿಗೆರಿ ತರಳಬಾಳು ಮಠದ ನೇತೃತ್ವದಲ್ಲಿ ಆಯೋಜಿಸಿರುವ ತರಳಬಾಳು ಹುಣ್ಣಿಮೆ ಮಹೋತ್ಸವದಲ್ಲಿ ಬೈಕ್ ರ್ಯಾಲಿ ವೇಳೆ ಎರಡು ಗ್ರಾಮಗಳ ನಡುವೆ ದಾಂಧಲೆ ನಡೆದಿದ್ದು, ಪೊಲೀಸರು ಸೇರಿ 16 ಮಂದಿ ಗಾಯಗೊಂಡಿರುವ ಘಟನೆ ನಡೆದಿದೆ.
ಕೊಟ್ಟೂರು ಸಮೀಪದ ಕಾಳಾಪುರ ಮತ್ತು ಸುತ್ತಮುತ್ತಲಿನ ಗ್ರಾಮಗಳಲ್ಲಿ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಉಜ್ಜಿಯಿನಿ ಮತ್ತು ತರಳಬಾಳು ಮಠಗಳ ನಡುವೆ ಬಹು ವರ್ಷಗಳಿಂದ ವೈಮನಸ್ಸು ಇದೆ. ಹೀಗಾಗಿ ಬೇರೆ ಮಾರ್ಗದಲ್ಲಿ ತೆರಳಲು ಪೊಲೀಸರು ಸೂಚಿಸಿದ್ದರು. ಆದರೂ ಕಿಡಿಗೇಡಿಗಳು ಮಾರ್ಗ ಬಿಟ್ಟು ತೆರಳಿದ್ದಾರೆ ಎನ್ನಲಾಗಿದೆ.
ತರಳಬಾಳು ಹುಣ್ಣಿಮೆ ಮಹೋತ್ಸವಕ್ಕೆ ಸಿರಿಗೆರೆಯಿಂದ ಜಗದ್ಗುರು ಡಾ. ಶಿವಮೂರ್ತಿ ಶಿವಾಚಾರ್ಯ ಮಹಾಸ್ವಾಮಿಗಳನ್ನು ಬೈಕ್ ರ್ಯಾಲಿಯಲ್ಲಿ ಕರೆದುಕೊಂಡು ಬರುವ ವೇಳೆ ಗಲಾಟೆ ನಡೆದಿದೆ. ರ್ಯಾಲಿಯಲ್ಲಿದ್ದ ಕೆಲ ಕಿಡಿಗೇಡಿಗಳು ನಿಗದಿತ ಮಾರ್ಗ ಬಿಟ್ಟು ಕಾಳಾಪುರ ಮಾರ್ಗವಾಗಿ ತೆರಳಿ, ಹಲವು ಮನೆಗಳಿಗೆ ನುಗ್ಗಿ ಗಲಾಟೆ ಮಾಡಿದ್ದಲ್ಲದೆ ಕೆಲ ಬೈಕ್ ಮತ್ತು ಇತರೆ ವಾಹನಗಳಿಗೆ ಅಗ್ನಿಸ್ಪರ್ಶ ಮಾಡಿದ್ದರಿಂದಾಗಿ 7 ಬೈಕ್ ಸುಟ್ಟಿವೆ. ಸ್ಥಳಕ್ಕೆ ವಿಜಯನಗರ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಭೇಟಿ ನೀಡಿದರು. ವಿವಿಧ 5 ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ.