i
ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿಯಾದರೆ ಮಕ್ಕಳ ಭವಿಷ್ಯ ಹಾಳು-ಮೋದಿ…
ಚಂದ್ರವಳ್ಳಿ ನ್ಯೂಸ್, ನವದೆಹಲಿ:
ಈ ಹಿಂದೆ ಜಾರಿಯಲ್ಲಿದ್ದ ಹಳೆ ಪಿಂಚಣಿ ವ್ಯವಸ್ಥೆ ಮರು ಜಾರಿಯಾದರೆ ಮುಂದಿನ ಮಕ್ಕಳ ಭವಿಷ್ಯ ಹಾಳಾಗಲಿದೆ ಎಂದು ಪ್ರಧಾನ ಮಂತ್ರಿ ನರೇಂದ್ರ ಮೋದಿ ಎಚ್ಚರಿಸಿದ್ದಾರೆ.
ದೇಶದ ಹಲವು ರಾಜ್ಯಗಳಿಗೆ ಎಚ್ಚರಿಕೆ ನೀಡಿರುವ ಮೋದಿ ಅವರು, ರಾಜ್ಯಸಭೆಯಲ್ಲಿ ಮಾತನಾಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ, ಆರ್ಥಿಕ ಅವ್ಯವಸ್ಥೆ ಅನುಭವಿಸುತ್ತಿರುವ ನಮ್ಮ ನೆರೆ ಹೊರೆ ದೇಶಗಳನ್ನು ನೋಡಿ. ಅಜಾಗರೂಕತೆಯಿಂದ ಸಾಲ ಪಡೆದು ಅದರ ಹೊರೆ ನಿಭಾಯಿಸಲಾಗದೆ ಪರದಾಡುತ್ತಿವೆ. ನಾವು ಅದೇ ಉದಾಹರಣೆ ಪಾಲನೆ ಮಾಡಿದರೆ, ನಮ್ಮ ದೇಶವೂ ಹಾಳಾಗಲಿದೆ ಎಂದು ಮೋದಿ ಎಚ್ಚರಿಸಿದ್ದಾರೆ.