i
ಹರಿಯಬ್ಬೆ ಅಬ್ಬಿನಹೊಳೆ ಗ್ರಾಪಂಗಳ ಹೆಚ್ಚುವರಿ ಮನೆಗಳ ಆಯ್ಕೆ-ಶಾಸಕಿ ಪೂರ್ಣಿಮಾ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ತಾಲ್ಲೂಕಿನ ಹರಿಯಬ್ಬೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಎಸ್ ಸಿ, ಎಸ್ ಟಿ, ಅಲ್ಪಸಂಖ್ಯಾತರ, ಸಾಮಾನ್ಯ ವಸತಿ ಯೋಜನೆಯಡಿ ಶಾಸಕರ ಕೋಟಾದಲ್ಲಿ ಹೆಚ್ಚುವರಿ ಮನೆಗಳ ಆಯ್ಕೆಗಾಗಿ ನಡೆದ ಗ್ರಾಮ ಸಭೆಯನ್ನು ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಜಿಪಂ ಮಾಜಿ ಅಧ್ಯಕ್ಷ ಬಿ ಎಸ್ ರಘುನಾಥ್, ಗ್ರಾಮ ಪಂಚಾಯಿತಿ ಅಧ್ಯಕ್ಷೆ ರತ್ನಮ್ಮ, ಉಪಾಧ್ಯಕ್ಷ ಓಂಕಾರಪ್ಪ, ಸದಸ್ಯರಾದ ನಾಗರಾಜ್, ತಿಪ್ಪೇಸ್ವಾಮಿ, ನಟರಾಜ್, ಶಶಿಕುಮಾರ್, ಪೂರ್ಣಿಮಾ, ಕೃಷ್ಣಮೂರ್ತಿ, ರೂಪ, ಮುಖಂಡರಾದ ಶಿವಣ್ಣ, ಚಿಕ್ಕಣ್ಣ, ಲೋಕೇಶ್, ಗೋಪಾಲಪ್ಪ, ಬಂಗಾರಪ್ಪ, ರಂಗನಾಥ್, ವೆಂಕಟೇಶ್, ಮಾರುತಿ, ಹನುಮಂತಪ್ಪ, ರಾಜು, ರವಿ, ಅನಿಲ್ ಮುಂತಾದವರು ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಹರಿಯಬ್ಬೆ ಗ್ರಾಮದಲ್ಲಿ 56 ಲಕ್ಷ ರೂ.ವೆಚ್ಚದ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿ ಪೂಜೆ ನೆರವೇರಿಸಿದರು.
ಅಬ್ಬಿನಹೊಳೆ ಗ್ರಾಪಂ-
ಹಿರಿಯೂರು ತಾಲ್ಲೂಕು ಅಬ್ಬಿನಹೊಳೆ ಗ್ರಾಮದಲ್ಲಿ ರೂ.30 ಲಕ್ಷ ವೆಚ್ಚದ ಸಿ ಸಿ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ ರವರು ಭೂಮಿ ಪೂಜೆ ನೆರವೇರಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಷಾ, ಉಪಾಧ್ಯಕ್ಷೆ ತನುಜಾ, ಸದಸ್ಯರಾದ ರಂಗಸ್ವಾಮಿ, ಪ್ರಕಾಶ್, ಸುಂದರೇಶ್, ರಜಿಯಾ ಬೇಗಂ, ಶಕುಂತಲಾ ಮುಖಂಡರಾದ ನರಸಿಂಹ ಮೂರ್ತಿ, ಗೋಪಿ, ದೇವರಾಜ್, ಬಾಬು, ರವಿ ಮುಂತಾದವರು ಉಪಸ್ಥಿತರಿದ್ದರು.
ಹಿರಿಯೂರು ತಾಲ್ಲೂಕು ಅಬ್ಬಿನಹೊಳೆ ಗ್ರಾಮ ಪಂಚಾಯಿತಿ ಆವರಣದಲ್ಲಿ ಎಸ್ ಸಿ, ಎಸ್ ಟಿ, ಅಲ್ಪಸಂಖ್ಯಾತರ, ಸಾಮಾನ್ಯ ವಸತಿ ಯೋಜನೆಯಡಿ ಶಾಸಕರ ಕೋಟಾದಲ್ಲಿ ಹೆಚ್ಚುವರಿ ಮನೆಗಳ ಆಯ್ಕೆಗಾಗಿ ನಡೆದ ಗ್ರಾಮ ಸಭೆಯನ್ನು ಶಾಸಕಿ ಕೆ ಪೂರ್ಣಿಮಾ ಶ್ರೀನಿವಾಸ ರವರು ಉದ್ಘಾಟಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನುಷಾ, ಉಪಾಧ್ಯಕ್ಷೆ ತನುಜಾ, ಸದಸ್ಯರಾದ ರಂಗಸ್ವಾಮಿ, ಪ್ರಕಾಶ್, ಸುಂದರೇಶ್, ರಜಿಯಾ ಬೇಗಂ, ಶಕುಂತಲಾ ಮುಖಂಡರಾದ ನರಸಿಂಹ ಮೂರ್ತಿ, ಗೋಪಿ, ದೇವರಾಜ್, ಬಾಬು, ರವಿ ಮುಂತಾದವರು ಉಪಸ್ಥಿತರಿದ್ದರು.