i
ಮೋದಿಕೇರ್ ವ್ಯವಹಾರ 8 ಮಂದಿ ಕೋಟೆನಾಡಿನ ಶಿಕ್ಷಕರ ಅಮಾನತು…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಅನಧಿಕೃತ ಮೋದಿ ಕೇರ್ ಖಾಸಗಿ ಕಂಪನಿಯ ವ್ಯವಹಾರ ನಡೆಸಿರುವ ಕೋಟೆನಾಡಿನ 8 ಮಂದಿ ಸರ್ಕಾರಿ ಶಾಲಾ ಶಿಕ್ಷಕರು ಅಮಾನತುಗೊಂಡಿರುವ ಘಟನೆ ಜರುಗಿದೆ.
ಮೋದಿ ಕೇರ್ ನಲ್ಲಿ ವ್ಯವಹಾರ ಮಾಡುತ್ತಿದ್ದ ಸರ್ಕಾರಿ ಶಾಲಾ ಶಿಕ್ಷಕರ ಚಲನವಲನಗಳನ್ನು ಶಿಕ್ಷಣ ಇಲಾಖೆ ಉಪನಿರ್ದೇಶಕರು ಹಾಗೂ ಡಯಟ್ ಪ್ರಾಚಾರ್ಯರು ಜಂಟಿಯಾಗಿ ಪ್ರಕರಣದ ತನಿಖೆ ನಡೆಸಿ 16 ಜನ ಶಿಕ್ಷಕರ ವಿರುದ್ಧ ಈಗಾಗಲೇ ಶಿಸ್ತು ಕ್ರಮ ಕೈಗೊಂಡಿದ್ದಾರೆ. ಆ ಪೈಕಿ 8 ಜನ ಶಿಕ್ಷಕರು ನೇರವಾಗಿ ಮೋದಿ ಕೇರ್ ಕಂಪನಿಯ ಪರವಾಗಿ ವ್ಯವಹಾರ ಮಾಡಿರುವ ಸಂಗತಿ ದೃಢವಾಗಿದ್ದರಿಂದ ಆ 8 ಮಂದಿ ಶಿಕ್ಷಕರನ್ನು ಡಿಡಿಪಿಐ ರವಿಶಂಕರ್ ರೆಡ್ಡಿ ಅಮಾನತು ಮಾಡಿ ಆದೇಶಿಸಿದ್ದಾರೆ.
ಶಿಕ್ಷಕರಾದ ರವಿಕುಮಾರ್, ಶ್ರೀನಿವಾಸ್, ಸಿದ್ದಮ್ಮ, ಇಂದ್ರಾಣಿ, ಮಂಜುಳಾ ಸೇರಿ ಎಂಟು ಮಂದಿ ಅಮಾನತುಗೊಂಡವರು.
ಈ ಕುರಿತು ಕೆ.ಮಲ್ಲಿಕಾರ್ಜುನ್ ಎಂಬುವವರು ದೂರು ನೀಡಿದ್ದರು.
ಶಿಕ್ಷಣ ಇಲಾಖೆ ಆಯುಕ್ತರ ಸೂಚನೆ ಮೇರೆಗೆ 16 ಶಿಕ್ಷಕರ ವಿಚಾರಣೆ ನಡೆಸಲಾಗಿತ್ತು.