i
ಡಿ ಕೆ ರವಿಯ ಕೊನೆ ಸಂದೇಶದ ಮೇಲೆ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಒತ್ತಾಯ, ಹಾಗಾದರೆ ಕೊನೆ ಸಂದೇಶ ಏನು?…
ಚಂದ್ರವಳ್ಳಿ ನ್ಯೂಸ್, ನೆಲಮಂಗಲ:
ದಿವಂಗತ ದಕ್ಷ ಐಎಎಸ್ ಅಧಿಕಾರಿ ಡಿ ಕೆ ರವಿಯ ಕೊನೆಯ ಸಂದೇಶದ ಆಧಾರದ ಮೇಲೆ ರೋಹಿಣಿ ಸಿಂಧೂರಿ ವಿರುದ್ಧ ತನಿಖೆಗೆ ಆಗ್ರಹಿಸಿ ನೆಲಮಂಗಲ ತಾಲೂಕಿನ ಯುವ ಕಾಂಗ್ರೆಸ್ ಅಧ್ಯಕ್ಷ ನಾರಾಯಣ ಗೌಡ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಕಾನೂನು ವಿಭಾಗದ ಅಧ್ಯಕ್ಷ ಸೋಮಶೇಖರ್ ತಹಸೀಲ್ದಾರ್ ಅವರಿಗೆ ದೂರು ಸಲ್ಲಿಸಿ ಸೂಕ್ತ ತನಿಖೆ ಮಾಡುವಂತೆ ಮನವಿ ಮಾಡಿದ್ದಾರೆ.
ದಿವಂಗತ ಡಿಕೆ ರವಿ 2015 ಮೇ ತಿಂಗಳಿನಲ್ಲಿ ಬೆಂಗಳೂರಿನ ಅಪಾರ್ಟ್ಮೆಂಟ್ನಲ್ಲಿ ಆತ್ಮಹತ್ಯೆಗೆ ಶರಣಾಗಿದ್ದರು. ಆ ವೇಳೆ ಇದನ್ನು ಮರಳು ಮಾಫಿಯಾದ ಕಾರಣದಿಂದ ಸರ್ಕಾರವೇ ಮಾಡಿಸಿದ್ದ ಕೊಲೆ ಎನ್ನುವ ಆರೋಪ ಕೇಳಿಬಂದಿತ್ತು. ಕೊನೆಗೆ ಮಹಿಳಾ ಐಎಎಸ್ಅಧಿಕಾರಿಅಧಿಕಾರಿಯ ಜೊತೆಗೆ ಅವರಿಗೆ ಪ್ರೀತಿಯಿತ್ತು ಇದನ್ನು ನಿರಾಕರಿಸಿದ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿತ್ತು. ಕೊಲೆಯ ತನಿಖೆ ಮಾಡಿದ್ದ ಸಿಬಿಐ ಕೂಡ, ಮಹಿಳಾ ಐಎಎಸ್ ಅಧಿಕಾರಿಯ ಜೊತೆಗೆ ಪ್ರೇಮಸಲ್ಲಾಪ ಇದ್ದಿದ್ದನ್ನು ಸ್ಪಷ್ಟಪಡಿಸಿತ್ತಾದರೂ, ಇದನ್ನು ಕೊಲೆ ಎಂದು ಹೇಳಿರಲಿಲ್ಲ ಹಾಗಾಗಿ ಸೂಕ್ತ ತನಿಖೆ ಮಾಡುವಂತೆ ಅವರು ಒತ್ತಾಯಿಸಿದ್ದಾರೆ.
ರವಿ ಕೊನೆಯ ಸಂದೇಶ ಏನು: ಡಿಕೆ ರವಿ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಬೆಳಗ್ಗೆ 11.05ಕ್ಕೆ ರವಿ ವಾಟ್ಸಾಪ್ನಲ್ಲಿ ಕಳಿಸಿದ ಮೆಸೇಜ್ಏನಂದರೆ, ‘ಹೇ ಬೇಬಿ, ಬಹುಶಃ ನನ್ನ ಕಡೆಯಿಂದ ನಿನಗೆ ಇದು ಕೊನೆಯ ಮೆಸೇಜ್ಎಂದುಕೊಳ್ಳುತ್ತೇನೆ. ನನ್ನ ಕೊನೆಯ ಆಸೆ ಏನೆಂದರೆ ನಿನ್ನನ್ನು ನೋಡುವುದು ಮತ್ತು ನಿನಗೆ ಮುತ್ತಿಡುವುದು. ಆದರೆ, ಅದರಿಂದ ನನಗೆ ತೃಪ್ತಿಯಾಗುವುದಿಲ್ಲ. ಹಾಗಾಗಿ ನೀನು ನನ್ನ ಸಾವಿನ ಸುದ್ದಿ ಕೇಳಿದ ತಕ್ಷಣವೇ ಬಂದು ನನ್ನನ್ನು ತಬ್ಬಿಕೊಳ್ಳಿ. ನನಗೆ ಆಗ ಮುತ್ತಿಟ್ಟು, ಶಿವ ನನಗೆ ಶಾಂತಿಯನ್ನು ನೀಡಲಿ ಎಂದು ಪ್ರಾರ್ಥಿಸಿಕೊಳ್ಳಿ…!‘ ಎಂದು ಬರೆದಿದ್ದರು. 2015ರ ಮಾರ್ಚ್15 ರಂದು ಸಂಜೆ 4.25ರ ವೇಳೆಗೆ ಕಳಿಸಿದ ಸಂದೇಶದಲ್ಲಿ, ‘ಇಂದು ನಾನು ಕೆಲವು ಅಘಾತಕಾರಿ ನಿರ್ಧಾರಗಳನ್ನು ತೆಗೆದುಕೊಂಡ ಕೆಟ್ಟ ದಿನವಾಗಿದೆ. ನೀವು ನನಗೆ ಸರಿಯಾಗಿ ಮಾರ್ಗದರ್ಶನ ನೀಡುತ್ತೀರಿ ಎಂದು ನಂಬಿದ್ದೇನೆ. ನಿಮ್ಮ ಕರೆ ಮತ್ತು ಆಹ್ವಾನಕ್ಕಾಗಿ ರಾತ್ರಿ 9 ಗಂಟೆಯವರೆಗೂ ನಾನು ಕಾಯುತ್ತೇನೆ‘ ಎಂದು ರವಿ ಅವರು ಬರೆದಿದ್ದರು. ಅದಾದ ಬಳಿಕ ಸಂಜೆ 5.20ಕ್ಕೆ ಇನ್ನೊಂದು ಸಂದೇಶವನ್ನು ರವಿ ಕಳಿಸಿದ್ದರು. ಅದರಲ್ಲಿ, ಮತ್ತೆ ಕರೆಮಾಡಬೇಡಿ ಅಥವಾ ಮಾತನಾಡಲು ಪ್ರಯತ್ನಿಸಬೇಡಿ ಅಥವಾ ನನ್ನ ಪ್ರೀತಿಯ ಬಗ್ಗೆ ಯಾರೊಬ್ಬರೊಂದಿಗೆ ಮಾತನಾಡಬೇಡಿ. ಹಾಗೇನಾದರೂ ಮುಂದಿನ ಜನ್ಮ ಅಂತದ್ದೇನಾದರೂ ಇದ್ದರೆ, ನಾವಿಬ್ಬರೂ ಜೊತೆಯಾಗೋಣ. ನಾನು ಹೊರಡುತ್ತಿದ್ದೇನೆ ಎಂದು ಬರೆಯಲಾಗಿತ್ತು. 7 ಗಂಟೆಯ ವೇಳೆಗೆ ಮಹಿಳಾ ಅಧಿಕಾರಿಯಿಂದ ಈ ಮೆಸೇಜ್ಗೆ ಪ್ರತಿಕ್ರಿಯೆ ಬಂದಿತ್ತು. ಮೂರ್ಖರ ಹಾಗೆ ವರ್ತಿಸಬೇಡಿ. ನಿಮ್ಮೊಂದಿಗೆ ನಾನು ಮಾತನಾಡಬಾರದು ಎಂದು ನೀವು ನಿರೀಕ್ಷೆ ಮಾಡ್ತಿದ್ದೀರಾ ಅನ್ನೋದನ್ನ ಸ್ಪಷ್ಟವಾಗಿ ಹೇಳಿದೆ. ನಾನು ಕರೆ ಮಾಡೋದಿಲ್ಲ. ಏನಿದೆಲ್ಲ ನಿಮ್ಮ ಮೂರ್ಖತನದ ವರ್ತನೆ ಎಂದು ಬರೆಯಲಾಗಿತ್ತು. ರವಿಯ ಸ್ವರ ಮತ್ತು ಭಾಷೆಯಲ್ಲಿನ ಬದಲಾವಣೆಯಿಂದಾಗಿ ತಾನು ಆರಂಭದಲ್ಲಿ ಇದರಿಂದ ದೂರವಿದ್ದೆ ಎಂದು ತನಿಖಾ ಸಂಸ್ಥೆಗಳಿಗೆ ಈ ಹಿಂದೆ ತಿಳಿಸಿದ್ದರು ಎನ್ನಲಾಗಿದೆ.