i
ಕಾನೂನು ಡಿಸಿಗೂ, ಗುಮಾಸ್ತನಿಗೂ ಒಂದೇ ಅಲ್ಲವೇ, ತನಿಖೆ ಏಕೆ ಆಗುತ್ತಿಲ್ಲ-ಐಪಿಎಸ್ ಅಧಿಕಾರಿ ರೂಪಾ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು: rohini sindhuri vs roop
ಐಪಿಎಸ್ ಅಧಿಕಾರಿ ಡಿ.ರೂಪಾ ಮತ್ತು ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ನಡುವಿನ ಜಗಳ ಮುಂದುವರೆದಿದೆ. ಸಾಮಾಜಿಕ ಜಾಲತಾಣ, ಮಾಧ್ಯಮಗಳಿಗೆ ಹೇಳಿಕೆ ನೀಡುವಂತಿಲ್ಲ ಎಂದು ಇಬ್ಬರು ಉನ್ನತ ಅಧಿಕಾರಿಗಳಿಗೆ ಸಿಬ್ಬಂದಿ ಮತ್ತು ಆಡಳಿತ ಇಲಾಖೆಯಿಂದ ನೋಟಿಸ್ ನೀಡಲಾಗಿತ್ತು. ಆದರೆ, ಐಪಿಎಸ್ ಅಧಿಕಾರಿ ಡಿ. ರೂಪಾ ಫೇಸ್ ಬುಕ್ ನಲ್ಲಿ ರೋಹಿಣಿ ವಿರುದ್ಧ ಮತ್ತೆ ಫೋಸ್ಟ್ ಹಾಕಿದ್ದಾರೆ.
ಮಾನಹಾನಿಕರ ಹೇಳಿಕೆ ನೀಡದಂತೆ ಡಿ. ರೂಪಾಗೆ ಕೋರ್ಟ್ ನಿರ್ಬಂಧ ತಮ್ಮ ಫೇಸ್ ಬುಕ್ ಖಾತೆಯಲ್ಲಿ ವರದಿಯೊಂದನ್ನು ಹಂಚಿಕೊಂಡಿರುವ ಡಿ. ರೂಪಾ, ಮೈಸೂರು ಎಟಿಐನಿಂದ ರೋಹಿಣಿ ಸಿಂಧೂರಿ ತೆಗೆದುಕೊಂಡು ಹೋದ ಸರ್ಕಾರಿ ಸಾಮಾನುಗಳು ಡಿಸಿ ಮನೆಯಲ್ಲಿ ಕೂಡಾ ಇಲ್ಲ, ಎಲ್ಲಿ ಹೋದವು ಎಂಬುದಾಗಿ ಸಿಂಧೂರಿ ಅವರಿಗೆ ನೊಟೀಸ್ ಜಾರಿ ಮಾಡಿದ್ದು ವರದಿಯಾಗಿದೆ. ಇದರ ಮೇಲೆ ಕ್ರಮ ಆಯಿತೇ? ಎಂದು ರೂಪಾ ಅವರು ಪ್ರಶ್ನಿಸಿದ್ದಾರೆ.
ಸರ್ಕಾರಿ ವಸ್ತು 50 ರೂ. ಇರಲಿ,50 ಕೋಟಿ ರೂ. ಇರಲಿ, ತಪ್ಪು ತಪ್ಪೇ. 1000 ರೂ. ಲಂಚ ತೆಗೆದುಕೊಂಡವರು ಕೂಡ ಲೋಕಾಯುಕ್ತ ವಿಚಾರಣೆಗೆ ಒಳಗಾಗಿದ್ದಾರೆ. ಕಾನೂನು ಡಿಸಿಗೂ, ಗುಮಾಸ್ತನಿಗೂ ಒಂದೇ ಎಂದು ಡಿ. ರೂಪಾ ಮೌದ್ಗಿಲ್ ಪೋಸ್ಟ್ ನಲ್ಲಿ ಹೇಳಿದ್ದಾರೆ.