i
ಯಡಿಯೂರಪ್ಪ ಪುತ್ರಿ ಅರುಣಾದೇವಿ ಏಕೆ ಯಡಿಯೂರಪ್ಪನವರ ಡೈರಿ ಸುದ್ದಿ ಸ್ಫೋಟ ಮಾಡಿದ್ದು?…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪನವರ 80ನೇ ವರ್ಷದ ಹುಟ್ಟುಹಬ್ಬದ ಸಂಭ್ರಮದಲ್ಲಿ ಯಡಿಯೂರಪ್ಪ ಪುತ್ರಿ ಅರುಣಾದೇವಿ ಅವರು ಯಡಿಯೂರಪ್ಪನವರು ಬರೆದಿದ್ದರೆನ್ನಲಾದ ಡೈರಿ ಬಗ್ಗೆ ಮಾತನಾಡುವ ಮೂಲಕ ರಾಜಕೀಯದಲ್ಲಿ ಅಲ್ಲೋಲಕಲ್ಲೋಲ ಆಗುವ ಸಾಧ್ಯತೆ ಇದೆ.
ಪುತ್ರಿ ಅರುಣಾ ದೇವಿ ಮಾತನಾಡಿ, ನಮ್ಮ ತಂದೆ ಜೈಲಿಗೆ ಹೋಗಿದ್ದು ಕರಾಳ ದಿನಗಳು. ಜೈಲಿನಲ್ಲಿದ್ದಾಗ ತಂದೆಯವರು ಡೈರಿ ಬರೆದಿದ್ದರು. ಪ್ರತಿಯೊಂದು ಘಟನೆಗಳನ್ನು ಅದರಲ್ಲಿ ಬರೆದಿದ್ದು ಸಂದರ್ಭ ಬಂದಾಗ ಎಲ್ಲವೂ ಹೊರಬರುತ್ತವೆ ಎಂದು ಹೇಳುವ ಮೂಲಕ ಬಹುದೊಡ್ಡ ರಾಜಕೀಯ ದ್ರೃವೀಕರಣಕ್ಕೆ ನಾಂದಿ ಆಗಬಹುದಾ ಎನ್ನುವ ಚರ್ಚೆ ಹುಟ್ಟು ಹಾಕಿದ್ದಾರೆ.
ಮುಂದುವರೆದು ಮಾತನಾಡಿ ಅರುಣಾ ದೇವಿ, ಇಂದಿಗೂ ತಂದೆ ಯಡಿಯೂರಪ್ಪನವರಲ್ಲಿ 25 ವರ್ಷದ ಯುವಕನ ಶಿಸ್ತು ಇನ್ನೂ ಇದೆ. ರಾಜ್ಯಾದ್ಯಂತ ಪ್ರವಾಸ ಮಾಡಿ ಪಕ್ಷ ಸಂಘಟನೆ ಮಾಡುವುದಾಗಿ ಹೇಳಿದ್ದಾರೆ. ಹೊನ್ನಳ್ಳಿಯಲ್ಲಿ 1 ಎಕರೆ ಜಾಗ ತೆಗೆದುಕೊಂಡು ಗದ್ದೆ ಮಾಡಿದ್ದರು. ನೋವನ್ನು ಮರೆಯಲು ಕೃಷಿಯತ್ತ ಗಮನ ಕೊಟ್ಟರು. ಹೊಲದಲ್ಲಿ ನೇಗಿಲು ಹಿಡಿದು ಕೆಲಸ ಮಾಡಿದ್ದಾರೆ. ಪ್ರತಿ ಶಿವರಾತ್ರಿ ದಿನ ನನ್ನ ತಾಯಿ ಮೈತ್ರಾದೇವಿ ನೆನೆದು ಕಣ್ಣೀರಿಡುತ್ತಾರೆ ಎಂದು ಅರುಣಾ ದೇವಿ ಭಾವುಕರಾಗಿ ತಿಳಿಸಿದ್ದಾರೆ.