i
ಆಕಸ್ಮಿಕ ಮುಖ್ಯಮಂತ್ರಿ ಬೊಮ್ಮಾಯಿ ಅಧಿಕಾರ ದುರ್ಬಳಕೆಗೆ ಖಂಡನೆ-ಪ್ರತಾಪ ಜೋಗಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಯೋಜನೆಗಳ ಹೆಸರಿನಲ್ಲಿ ಸಾಮಾನ್ಯ ಜನರ ಹಣವನ್ನು ಖರ್ಚು ಮಾಡುತ್ತಿರುವ ಆಕಸ್ಮಿಕ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿರವರಿಗೆ ಖಂಡನೀಯ ಎಂದು ಜಿಲ್ಲಾ ಜೆಡಿಎಸ್ ಕಾರ್ಯಾಧ್ಯಕ್ಷ ಓ.ಪ್ರತಾಪ್ ಜೋಗಿ ವಾಗ್ದಾಳಿ ಮಾಡಿದ್ದಾರೆ.
ಚಿತ್ರದುರ್ಗ ಜಿಲ್ಲೆಯಿಂದ ಕೇಂದ್ರ ಮತ್ತು ರಾಜ್ಯ ಸರ್ಕಾರದ ಯೋಜನೆಗಳ ಫಲಾನುಭವಿಗಳ ಸಮ್ಮೇಳನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರ ಕಾರ್ಯಕ್ರಮಕ್ಕೆ ಹಾಸ್ಟೆಲ್ ಮತ್ತು ಕಾಲೇಜಿನ ವಿದ್ಯಾರ್ಥಿಗಳ ಜೊತೆಗೆ ಪೋಷಕರನ್ನು ಕರೆದುಕೊಂಡು ಬರುವಂತೆ ಕೆಲವು ಅಧಿಕಾರಿಗಳು ನಿರ್ದೇಶನ ನೀಡಿರುವುದು ಬಿಜೆಪಿ ಪಕ್ಷಕ್ಕೆ ಕಾರ್ಯಕರ್ತರಿಲ್ಲದೇ ಇರುವುದರಿಂದ ವಿದ್ಯಾರ್ಥಿಗಳು ಮತ್ತು ಪೋಷಕರನ್ನು ಕರೆದು ಕುರ್ಚಿಗಳನ್ನು ತುಂಬಿಸುವಂತಹ ಕಾರ್ಯಕ್ರಮವಾಗಿದೆ. ಎಷ್ಟೋ ಫಲಾನುಭವಿಗಳು ಸರ್ಕಾರಕ್ಕೆ ಕಟ್ಟಿರುವ ಕಂದಾಯ ಹಣದಲ್ಲಿ ಯೋಜನೆಗಳ ಜಾರಿಗೆ ತಂದು ಫಲಾನುಭವಿಗಳಿಗೆ ನೀಡಿರುತ್ತಾರೆ.
ಚುನಾವಣೆ ಹತ್ತಿರವಿರುವುದರಿಂದ ರಾಜ್ಯಕ್ಕೆ ಕೇಂದ್ರ ನಾಯಕರುಗಳು ಭೇಟಿ ನೀಡುವುದರಿಂದ ಭ್ರಷ್ಟರಹಿತ ಆಡಳಿತವನ್ನು ನೀಡುತ್ತೇವೆಂದು ಭಾಷಣದಲ್ಲಿ ಬಿಗಿದು, ಅದೇ ದಿನ ಕೋಟಿಗಟ್ಟಲೇ ಲಂಚದ ಹಣದಿಂದ ತಮ್ಮ ಪಕ್ಷದ ಶಾಸಕರುಗಳೇ ಲೋಕಾಯುಕ್ತ ಬಲೆಗೆ ಬೀಳುತ್ತಿರುವುದು ವಿಪರ್ಯಾಸ.
ರಾಷ್ಟ್ರೀಯ ಪಕ್ಷವಾದ ಬಿಜೆಪಿಯ ಕೇಂದ್ರ ಸಚಿವರುಗಳು ನಮ್ಮ ರಾಜ್ಯಕ್ಕೆ ಆಗಮಿಸಿದಾಗ ಬಿಜೆಪಿ ಶಾಸಕರುಗಳ ಹಗರಣಗಳನ್ನು ಭೇಟೆ ಹಾಡಲಿರುವ ಕರ್ನಾಟಕದ ನಿಷ್ಠಾವಂತ ಅಧಿಕಾರಿಗಳು ಉತ್ತಮ ಕರ್ತವ್ಯ ನಿರ್ವಹಿಸುವುದರಿಂದ ಕೇಂದ್ರದಿಂದ ಬರುವ ರಾಷ್ಟ್ರೀಯ ನಾಯಕರುಗಳಿಗೆ ಮತ್ತು ಸಚಿವರುಗಳಿಗೆ ಉಡುಗೊರೆಯಾಗಿ ಶಾಸಕರ ಹಗರಣಗಳನ್ನು ನೀಡುತ್ತಿರುವುದು ಬಿಜೆಪಿ ಪಕ್ಷದ ಸಾಧನೆ ಆಗಿದೆ ಎಂದು ಪ್ರತಾಪ್ ಜೋಗಿ ವಾಗ್ದಾಳಿ ಮಾಡಿದ್ದಾರೆ.