i
ಪೂರ್ಣಿಮಾ ಶ್ರೀನಿವಾಸ್ ಕಾಡುಗೊಲ್ಲರಲ್ಲ, ಕಾಡುಗೊಲ್ಲ ವಿರೋಧಿ ಪೂರ್ಣಿಮಾ ಅವರನ್ನು ಸೋಲಿಸಿ ಮನೆಗೆ ಕಳಿಸಬೇಕು…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ಕಾಡುಗೊಲ್ಲರಿಗೆ ಬಿಜೆಪಿಯಿಂದ ಯಾವುದೇ ಭವಿಷ್ಯ ಇಲ್ಲ, ಕಾಂಗ್ರೆಸ್ ಪಕ್ಷ ಅಧಿಕಾರದಲ್ಲಿದ್ದಾಗ ಕಾಡುಗೊಲ್ಲರ ಕುಲಶಾಸ್ತ್ರೀಯ ಅಧ್ಯಯನ ಮಾಡಿ ಕೇಂದ್ರ ಸರ್ಕಾರಕ್ಕೆ ಎಸ್ಟಿ ಮೀಸಲು ಸೌಲಭ್ಯ ನೀಡುವಂತೆ ಕಳುಹಿಸಲಾಗಿತ್ತು ಎಂದು ಮಾಜಿ ಸಚಿವ ಹಾಲಿ ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ ಸುಧಾಕರ್ ಹೇಳಿದರು.
ಹಿರಿಯೂರು ತಾಲೂಕಿನ ಧರ್ಮಪುರ ಹೋಬಳಿಯ ಕಾಂಗ್ರೆಸ್ ಕಾಡುಗೊಲ್ಲರ ಸಭೆ ಆಯೋಜನೆ ಅಂಗವಾಗಿ ಏರ್ಪಡಿಸಲಾಗಿದ್ದ ಬೈಕ್ ರ್ಯಾಲಿ ಉದ್ಘಾಟಿಸಿ ನಂತರ ಅವರು ಮಾತನಾಡಿದರು. ಬಿಜೆಪಿಯಿಂದ ಕಾಡುಗೊಲ್ಲರಿಗೆ ಯಾವುದೇ ಭವಿಷ್ಯ ಇಲ್ಲ, ನಾನು 10 ವರ್ಷ ಶಾಸಕರಾದ ಸಂದರ್ಭದಲ್ಲಿ ಕಾಡುಗೊಲ್ಲರಿಗೆ ರಾಜಕೀಯವಾಗಿ ಶೈಕ್ಷಣಿಕವಾಗಿ ಹಟ್ಟಿಗಳ ಅಭಿವೃದ್ಧಿಗಾಗಿ ಶ್ರಮಿಸಿದ್ದೇನೆ ಮತ್ತು ಕಾಡುಗೊಲ್ಲ ಮಹಿಳೆ ಗುರುತಿಸಿ ಹಿರಿಯೂರು ನಗರಸಭೆ ಅಧ್ಯಕ್ಷರನ್ನಾಗಿ ಮಾಡಿದ್ದೇನೆ. ಪಾಪಣ್ಣ ಅವರನ್ನು .ಜಿ. ಜೆ.ಹಳ್ಳಿ ಜಿಲ್ಲಾ ಪಂಚಾಯತ್ ಸದಸ್ಯರನ್ನಾಗಿ ಮಾಡಿದ್ದೇನೆ. ಗೀತಾ ನಂದಿನಿ ಗೌಡರನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನಾಗಿ ಮಾಡಿದ್ದೇನೆ. ಮೀಸೆ ಮಾಲಿಂಗಪ್ಪ ಅವರನ್ನು ಜಿಲ್ಲಾ ಪಂಚಾಯತ್ ಅಧ್ಯಕ್ಷರನ್ನಾಗಿ ಮಾಡಿದ್ದೇನೆ. ಪ್ರೇಮ್ ಕುಮಾರ್ ಅವರನ್ನು ನಗರಸಭೆ ಸದಸ್ಯರನ್ನಾಗಿ ಮಾಡಿದ್ದೇನೆ. ಜಯಮ್ಮ ಬಾಲರಾಜ್ ಅವರನ್ನು. M. L. C. ಮಾಡಿದ್ದೇನೆ. ಕಾಡುಗೊಲ್ಲ ಜನಾಂಗವನ್ನು ಜಾತಿ ಪಟ್ಟಿಗೆ ಸೇರಿಸಿದ್ದೇನೆ. ಕಾಡು ಗೊಲ್ಲರನ್ನು ಎಸ್.ಟಿ. ಮೀಸಲಾತಿ ಪಟ್ಟಿಗೆ ಸೇರ್ಪಡೆ ಮಾಡಿ ಕೇಂದ್ರಕ್ಕೆ ಶಿಫಾರಸ್ಸು ಮಾಡಲು ಸಹಕರಿಸಿದ್ದೇನೆ, 3000 ಸಾವಿರ ಅಲೆಮಾರಿ ಮನೆ ನೀಡಿದ್ದೇನೆ ಕಾಡುಗೊಲ್ಲರಿಗೆ ಹಿರಿಯೂರು ನಗರದಲ್ಲಿ 20 ಗುಂಟೆ ಜಾಗ ಕೊಟ್ಟು ಶ್ರೀ ಕೃಷ್ಣ ಭವನ ಕೊಟ್ಟಿದ್ದೇನೆ. ಪೂರ್ಣಿಮಾ ಶ್ರೀನಿವಾಸ್ ಅವರು ಐದು ವರ್ಷವಾದರೂ ಆ ಭವನ ಪೂರ್ಣಗೊಳಿಸಲಿಲ್ಲ ಎಂದು ಸುಧಾಕರ್ ವಾಗ್ದಾಳಿ ಮಾಡಿದರು.
ಕಾಡುಗೊಲ್ಲರ ಆರೋಗ್ಯ ದೃಷ್ಟಿಯಿಂದ ಪ್ರತಿ ಹಟ್ಟಿಗೂ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪಿಸಿದ್ದೇನೆ. ಕಾಡುಗೊಲ್ಲರ ಪ್ರತಿ ಹಟ್ಟಿಯ ದೇವಸ್ಥಾನ ಜೀರ್ಣೋದ್ಧಾರ ಮಾಡಲು ಲಕ್ಷಾಂತರ ಅನುದಾನ ನೀಡಿದ್ದೇನೆ ಎಂದು ತಿಳಿಸಿದರು.
ರಾಜ್ಯ ಒಬಿಸಿ ಉಪಾಧ್ಯಕ್ಷ ಎಸ್ ಆರ್ ತಿಪ್ಪೇಸ್ವಾಮಿ ಮಾತನಾಡಿ ಪೂರ್ಣಿಮಾ ಶ್ರೀನಿವಾಸ್ ಅವರು ನಮ್ಮ ಕಾಡುಗೊಲ್ಲ ಜಾತಿ ಅಲ್ಲ, ಹತ್ತು ವರ್ಷ ಅವರ ಕುಟುಂಬಕ್ಕೆ ನಮ್ಮ ಸಮಾಜದ ವೋಟು ಹಾಕಿದ ತಪ್ಪಿಗೆ ನಮ್ಮ ಎಸ್ ಟಿ ಮೀಸಲಾತಿಯನ್ನು ವಿರೋಧ ಮಾಡುತ್ತಿದ್ದಾರೆ, ನಮ್ಮ ಕುಲಶಾಸ್ತ್ರ ಅಧ್ಯಯನ ಅವೈಜ್ಞಾನಿಕವಾಗಿದ್ದು ಮರು ಅಧ್ಯಯನ ಮಾಡಿ ಎಂದು ಸರ್ಕಾರಕ್ಕೆ ಪೂರ್ಣಿಮಾ ಪತ್ರ ಬರೆದಿದ್ದಾರೆ, ಕಾಡುಗೊಲ್ಲ ನಿಗಮ ಮಂಡಳಿಯನ್ನು ವಿರೋಧ ಮಾಡಿದ್ದಾರೆ, ಮುಂದಿನ ನಮ್ಮ ಮಕ್ಕಳ ಭವಿಷ್ಯ ಉತ್ತಮವಾಗಿರಬೇಕಾದರೆ, ಶೈಕ್ಷಣಿಕ, ಆರ್ಥಿಕವಾಗಿ ಕಾಡುಗೊಲ್ಲರ ಹಟ್ಟಿಗಳು ಅಭಿವೃದ್ಧಿ ಆಗಬೇಕಾದರೆ ಎಸ್ಟಿ ಮೀಸಲಾತಿ ಅವಶ್ಯಕತೆ ಇದೆ. ಎಸ್ಟಿ ಮೀಸಲಾತಿ ವಿರೋಧ ಮಾಡುವ ಶಾಸಕಿ ಪೂರ್ಣಿಮಾ ನಮಗೆ ಬೇಕಾ ಮತ್ತು ನಮ್ಮ ಸಮಾಜದ ಬಡವರನ್ನು ನೋಡಿ ಕುರಿಗಾಯಿಗಳನ್ನು ನೋಡಿ ಬಡ ಮಕ್ಕಳ ವಿದ್ಯಾಭ್ಯಾಸ ವಂಚಿತರಾಗುವುದನ್ನು ನೋಡಿ ಗುಡಿಸಿಲಲ್ಲಿ ವಾಸ ಮಾಡುವುದನ್ನು ನೋಡಿ ನಿಮಗೆ ಕಣ್ಣೀರು ಬರಲಿಲ್ಲ, ಚುನಾವಣೆ ಹತ್ತಿರ ಬಂದಾಗ ನಿಮ್ಮಗೆ ಕಣ್ಣೀರು ಬರುತ್ತದೆ, ನಿಮ್ಮ ಮೊಸಳೆ ಕಣ್ಣೀರಿನ ಉದ್ದೇಶ ಕಾಡುಗೊಲ್ಲ ಸಮಾಜಕ್ಕೆ ಅರ್ಥವಾಗಿದೆ ಎಂದು ಪೂರ್ಣಿಮಾ ವಿರುದ್ಧ ಹರಿಹಾಯ್ದ ಅವರು ಕಾಡುಗೊಲ್ಲ ವಿರೋಧಿ ಪೂರ್ಣಿಮಾ ಶ್ರೀನಿವಾಸ್ ಅವರನ್ನು ಸೋಲಿಸಿ ಮನೆಗೆ ಕಳಿಸಬೇಕು ಎಂದು ಸಮಾಜಕ್ಕೆ ಕರೆ ನೀಡಿದರು. ಕಾಡುಗೊಲ್ಲ ಸಮಾಜದ ಮುಖಂಡರಾದ ಕಲ್ಲಟ್ಟಿ ತಿಪ್ಪೇಸ್ವಾಮಿ, ಮಾಜಿ ಜಿಪಂ ಅಧ್ಯಕ್ಷೆ ಹಾಗೂ ಜಿಲ್ಲಾ ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ಗೀತಾ ನಂದಿನಿ ಗೌಡ, ಎಸ್ ಆರ್ ಟಿ, ನಗರಸಭೆ ಮಾಜಿ ಅಧ್ಯಕ್ಷೆ ಶಿವನಂಜನಿ, ಗ್ರಾಮ ಪಂಚಾಯತಿ ಅಧ್ಯಕ್ಷ ಪುಟ್ಟೇಗೌಡ, ಕಾಡುಗೊಲ್ಲ ಸಂಘದ ಅಧ್ಯಕ್ಷ ಪಿ. ಆರ್.ದಾಸ್, ಅಲುಮರದಟ್ಟಿ ರಂಗಯ್ಯ, ಕೃಷ್ಣ ಪೂಜಾರ್, ಪ್ರಭು ಯಾದವ್, ಮಧು ಹರಿಯಬ್ಬೆ ಇನ್ನು ಹಲವಾರು ಕಾಡುಗೊಲ್ಲ ಮುಖಂಡರು ಸಮಾರಂಭದಲ್ಲಿ ಉಪಸ್ಥಿತರಿದ್ದರು.