i
ಅಕ್ರಮ ಮದ್ಯ ಮಾರಾಟ / ಸಾಗಾಣಿಕೆ ಕಂಡುಬಂದಲ್ಲಿ ದೂರು ನೀಡಲು ಸೂಚನೆ…
ಚಂದ್ರವಳ್ಳಿ ನ್ಯೂಸ್, ಬೆಂಗಳೂರು:
ವಿಧಾನಸಭೆ ಸಾರ್ವತ್ರಿಕ ಚುನಾವಣೆ – 2023 ಏಪ್ರಿಲ್- ಮೇ ಮಾಹೆಯಲ್ಲಿ ನಡೆಯಲಿರುವ ಹಿನ್ನೆಲೆಯಲ್ಲಿ ಬೆಂಗಳೂರು ನಗರ ಜಿಲ್ಲೆ –4ರ ವ್ಯಾಪ್ತಿಗೆ ಒಳಪÀಡುವ ಶ್ರೀರಾಮಪುರ, ರಾಜಾಜಿನಗರ, ಸಂಪಂಗಿರಾಮನಗರ, ಜಯನಗರ, ಅಶೋಕನಗರ ಮತ್ತು ಶಾಂತಿನಗರ ಅಬಕಾರಿ ವಲಯ ಪ್ರದೇಶಗಳಲ್ಲಿ, ಎನ್.ಡಿ.ಪಿ.ಎಸ್. ಪದಾರ್ಥಗಳು/ ಅನಧಿಕೃತ/ ನಕಲಿ ಡಿಫೆನ್ಸ್ ಇತ್ಯಾದಿ ಮಧ್ಯ ತಯಾರಿಕೆ, ದಾಸ್ತಾನು ಮಾರಾಟ ಮತ್ತು ಸಾಗಾಣಿಕೆ ಅಥವಾ ಅಬಕಾರಿ ಸಂಬಂಧಿತ ಯಾವುದೇ ಪದಾರ್ಥಗಳು ಕಂಡುಬಂದಲ್ಲಿ ಸಾರ್ವಜನಿಕರು ಟೋಲ್ ಫ್ರೀ ಸಂಖ್ಯೆ (ಶುಲ್ಕ ರಹಿತ) 1800-425-1245 ಗೆ ದೂರು ಸಲ್ಲಿಸಬಹುದಾಗಿದೆ. ಮಾಹಿತಿದಾರರ ಗೌಪ್ಯತೆ ಕಾಪಾಡಲಾಗುವುದು ಎಂದು ಬೆಂಗಳೂರು ನಗರ ಜಿಲ್ಲೆ ಅಬಕಾರಿ ಉಪ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇ-ಮೇಲ್ – dcebud4@gmail.com, ಹಾಗೂ ಕಛೇರಿ ವಿಳಾಸ ಅಬಕಾರಿ ಉಪ ಆಯುಕ್ತರ ಕಛೇರಿ, ಬೆಂಗಳೂರು ನಗರ ಜಿಲ್ಲೆ-4, ನಂ.334/6 ಮೊದಲನೇ ಮಹಡಿ, ಅಬಕಾರಿ ಭವನ, ಕೆ.ಎಸ್.ಬಿ.ಸಿ.ಎಲ್ ಕಾಂಪ್ಲೆÉ್ರಕ್ಸ್, ಬಾಟರಾಯನಪುರ ಪೆÇಲೀಸ್ ಠಾಣೆ ಎದುರು, ಮೈಸೂರು ರಸ್ತೆ, ಬೆಂಗಳೂರು-560026, ದೂರವಾಣಿ ಸಂಖ್ಯೆ: 080-29915540 ನ್ನು ಸಂಪರ್ಕಿಸಬಹುದಾಗಿದೆ ಎಂದು ಅಧಿಕೃತ ಪ್ರಕಟಣೆ ತಿಳಿಸಿದೆ.