i
12 ಸಾವಿರಕ್ಕಿಂತ ಹೆಚ್ಚು ಬಡವರಿಗೆ ಹಕ್ಕು ಪತ್ರ ನೀಡಿದ ಸಂತಸ ನನಗಿದೆ-ಶಾಸಕ ತಿಪ್ಪಾರೆಡ್ಡಿ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ನಗರದಲ್ಲಿ 12 ಸಾವಿರಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಹಕ್ಕು ಪತ್ರ ನೀಡಿದ್ದು ನನಗೆ ಬಡವರ ಕನಸನ್ನು ನನಸು ಮಾಡಿದ ಸಂತಸ ನನಗಿದೆ ಎಂದು ಶಾಸಕ ಜಿ.ಹೆಚ್.ತಿಪ್ಪಾರೆಡ್ಡಿ ಹೇಳಿದರು.
ನಗರದ ಕೆಳಗೋಟೆಯ 30 ಮತ್ತು 31 ನೇ ವಾರ್ಡ ಮತ್ತು ಸ್ವಾಮಿ ವಿವೇಕನಾಂದ ನಗರದಲ್ಲಿ ಕೊಳಚೆ ನಿರ್ಮಾಲನಾ ಮಂಡಳಿ ವತಿಯಿಂದ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ವಿತರಣೆ ಮಾಡಿ ಮಾತನಾಡಿದರು.
ನಗರದಲ್ಲಿ ಸುಮಾರು 39 ಕ್ಕಿಂತ ಹೆಚ್ಚು ಸ್ಲಂ ನಿವಾಸಿಗಳು ನಗರದಲ್ಲಿ ಘೋಷಿತ ಸ್ಲಂ ಗಳು ಇವೆ.ಇದರಲ್ಲಿ ಎಲ್ಲಾ ಕಡೆ ಸರ್ಕಾರದ ಪ್ರಣಾಳಿಕೆ ಬೇಡಿಕೆಯಂತೆ ಸ್ಲಂ ನಿವಾಸಿಗಳಿಗೆ ಹಕ್ಕು ಪತ್ರ ನೀಡಲಾಗುತ್ತಿದೆ. ಕೆಳಕೋಟೆ ವ್ಯಾಪ್ತಿಯ ನಗರಸಭೆ 31 ವಾರ್ಡ ನಲ್ಲಿ 144 ಮತ್ತು 30 ನೇ ವಾರ್ಡ್ ನಲ್ಲಿ 129 ಹಾಗೂ ಸ್ವಾಮಿ ವಿವೇಕನಾಂದ ನಗರದಲ್ಲಿ 230 ಜನ ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ಇಂದು ನೀಡಿದ್ದೇನೆ. ಕಳೆದ ಹಲವು ವರ್ಷಗಳಿಂದ ನಗರದ ಬಹುತೇಕ ಜನರು ತಮ್ಮ ಮನೆಗಳಿಗೆ ಹಕ್ಕುಪತ್ರ ಇಲ್ಲದೆ ಪರಿತಪಿಸುತ್ತಿದ್ದು, ಪ್ರತಿ ಚುನಾವಣೆಯಲ್ಲೂ ಬೇಡಿಕೆ ಈಡುತ್ತಿದ್ದರು. ಇದನ್ನು ಬಿಜೆಪಿ ಮನಗಂಡು ಚುನಾವಣೆಯಲ್ಲಿ ಹಕ್ಕುಪತ್ರ ನೀಡುವುದಾಗಿ ಭರವಸೆ ನೀಡಿತ್ತು, ಅದರಂತೆ ಇಂದು ಫಲಾನುಭವಿಗಳಿಗೆ ಹಕ್ಕುಪತ್ರ ನೀಡುತ್ತಿದೆ. ಇದರಲ್ಲಿ ಯಾರದಾದರೂ ಹೆಸರು ಬಿಟ್ಟಿದ್ದರೆ ಪುನಃ ಸೇರಿಸಬಹುದು ಎಂದರು.
ನಗರದಲ್ಲಿ ಸುಮಾರು 30 ರಿಂದ 40 ವರ್ಷ ಗಳಿಂದ ಕೊಳಚೆ ಪ್ರದೇಶಗಳಲ್ಲಿ ವಾಸಿಸುತ್ತಿರುವ ಜನರಿಗೆ ಹಕ್ಕುಪತ್ರ ಖಾತೆ ಆಗಿರಲಿಲ್ಲ.ಅಂತಹ ನಗರದ ಎಲ್ಲಾ ಕೊಳಚೆ ಪ್ರದೇಶಗಳನ್ನು ಸ್ಲಂ ಬೋರ್ಡ ನಿಂದ ಘೋಷಣೆ ಮಾಡಿದ್ದೇವೆ. ಎಸ್ಸಿ ಎಸ್ಟಿ 2 ಸಾವಿರ ಮತ್ತು ಇತರೆ ಜನಾಂಗದವರಿಗೆ 3 ಸಾವಿರ ಸ್ಲಂ ಬೋರ್ಡ್ ಗೆ ಹಣ ಕಟ್ಟಬೇಕು ಎಂದರು. ಬುದ್ದ ನಗರ, ಹಗಳು, ಜೆ.ಜೆ.ಹಟ್ಟಿ, ಹಿಮ್ಮತ್ ನಗರ, ಚೇಳಗುಡ್ಡ,ಹಳ್ಳದ ಏರುಯಾ, ಜಟ್ ಪಟ್ ನಗರ, ಜೋಗಿಮಟ್ಟಿ ರೋಡ್ ಸೇರಿ ಹಲವು ಕಡೆಗಳಲ್ಲಿ ಸೇರಿ 12 ಸಾವಿರಕ್ಕಿಂತ ಹೆಚ್ಚು ಫಲಾನುಭವಿಗಳಿಗೆ ಹಕ್ಕು ಪತ್ರವನ್ನು ಹಂತ ಹಂತವಾಗಿ ನೀಡಲಾಗುತ್ತಿದ್ದು ಇದರಿಂದ ಸುಮಾರು 45 ರಿಂದ 50 ಸಾವಿರ ಜನರಿಗೆ ಅನುಕೂಲವಾಗಲಿದೆ. ಇದು ಚುನಾವಣೆಯಲ್ಲಿ ಸಮಯ ಈಗ ಎಲ್ಲಾರೂ ಭರವಸೆ ನೀಡುತ್ತಾರೆ. ಆದರೆ ನಾನು ಭರವಸೆ ಕೊಟ್ಟು ಕೆಲಸ ಮಾಡುತ್ತೇನೆ.ನಾನು ಜನಸೇವೆ ಜೊತೆಗೆ ಕೊಟ್ಟ ಮಾತನ್ನು ನಾನು ತಪ್ಪಿಲ್ಲ , ನಿರಂತರವಾಗಿ ಅಭಿವೃದ್ಧಿ ಕಾರ್ಯವನ್ನು ಮಾಡಿದ್ದೇನೆ. ಐದು ವರ್ಷಗಳ ಕಾಲ ಪ್ರಮಾಣಿಕವಾಗಿ ಜನಸೇವೆ ಮಾಡಿ ನೂರಾರು ಕೋಟಿ ಹಣ ಮತ್ತು ವಿಶೇಷ ಅನುದಾನವನ್ನು ತಂದು ಚಿತ್ರದುರ್ಗದ ಚಿತ್ರಣವನ್ನು ಬದಲಾಯಿಸಿ ದೂರದೃಷ್ಟಿಯಿಂದ ಅಭಿವೃದ್ಧಿಗೆ ಕಾರ್ಯವನ್ನು ಮಾಡಲಾಗಿದೆ.
ನಾನು ಎಂದು ಸಹ ಅಭಿವೃದ್ಧಿ ವಿಚಾರದಲ್ಲಿ ರಾಜಕಾರಣ ಮಾಡಲ್ಲ. ನನ್ನ ಕ್ಷೇತ್ರಕ್ಕೆ 3460 ಮನೆಗಳನ್ನು ತಂದು ಎಲ್ಲರಿಗೂ ಮನೆ ನೀಡುವ ಕೆಲಸ ಮಾಡಿದ್ದೇನೆ. ಕೇಂದ್ರ ಸರ್ಕಾರದಿಂದ 400 ಮನೆ, ರಾಜ್ಯ ಸರ್ಕಾರದಿಂದ ವಿಶೇಷವಾಗಿ 3060 ತಂದು ಮನೆಗಳನ್ನು ಹಂಚಿಕೆ ಮಾಡಲಾಗುತ್ತಿದೆ. ನಗರಸಭೆ ಸದಸ್ಯ ದೀಪಕ್ ಮಾತನಾಡಿ ಬಹು ದಿನಗಳ ಕನಸು ನನಸಾಗಿದೆ. ಮಕ್ಕಳ ಶಿಕ್ಷಣಕ್ಕೆ ಮನೆಯ ಹಕ್ಕು ಪತ್ರದಿಂದ ಅನುಕೂಲವಾಗಲಿದೆ. ನಮ್ಮ ಕೆಳಗೋಟೆಯಲ್ಲಿ ನೂರಾರು ಮನೆಗಳು ಇದ್ದರು ಸಹ ಅವರ ಮನೆಗೆ ಒಂದು ಪತ್ರ ಸಹ ಇರಲಿಲ್ಲ .ಆದ್ದರಿಂದ ಶಾಸಕರಾದ ಜಿ.ಹೆಚ್.ತಿಪ್ಪಾರೆಡ್ಡಿ ಅವರು ಶ್ರಮದಿಂದ ನಮ್ಮ ವಾರ್ಡ್ ಗೆ ಹಕ್ಕು ಪತ್ರಗಳು ದೊರಕುತ್ತಿದ್ದು ಅವರಿಗೆ ನಾವು ಅಭಿನಂದನೆ ಸಲ್ಲಿಸುತ್ತೇನೆ ಎಂದರು.
ಈ ಸಂದರ್ಭದಲ್ಲಿ ನಗರಸಭೆ ಉಪಾಧ್ಯಕ್ಷೆ ಶ್ರೀದೇವಿ, ನಗರಸಭೆ ಸದಸ್ಯ ಮಂಜಣ್ಣ, ನಾಗಮ್ಮ, ಹರೀಶ್,ಶ್ರೀನಿವಾಸ್, ಮಂಜುಳ, ವೇದಾ, ಬಿಜೆಪಿ ಜಿಲ್ಲಾ ಅಧ್ಯಕ್ಷ ಮುರುಳಿ, ಬಿಜೆಪಿ ಮಂಡಲ ಅಧ್ಯಕ್ಷ ಕಲ್ಲೇಶಯ್ಯ, ಮುಖಂಡರಾದ ಪ್ರಕಾಶ್, ವಕೀಲ ಕಿನ್ನಪ್ಪ, ಸುಂಕಪ್ಪ, ಗಾದ್ರಿಪಾಲಣ್ಣ, ಮಹೇಶ್, ಗೌಡ್ರು, ನಾಗೇಂದ್ರಪ್ಪ ಇದ್ದರು.