i
ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ ನೂರಾರು ಯುವಕರು…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ದಿನ ಬಳಕೆಯ ವಸ್ತುಗಳ ಬೆಲೆ ಗಗನಕ್ಕೆರಿದರೂ ಸಹ ಬಡವರ ಬಗ್ಗೆ ಕಾಳಜಿ ತೋರದ ಬಿಜೆಪಿ ಸರ್ಕಾರಕ್ಕೆ ಈ ಬಾರಿ ಜನತೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಕಾಂಗ್ರೆಸ್ ಅಭ್ಯರ್ಥಿ ಮಾಜಿ ಸಚಿವ ಡಿ ಸುಧಾಕರ್ ಹೇಳಿದರು.
ನಗರದ ಕಾಂಗ್ರೆಸ್ ಕಚೇರಿಯಲ್ಲಿ ಐಮಂಗಲ ಹೋಬಳಿಯ ಹಲವಾರು ಯುವಕರನ್ನು ಹಾಗೂ ಮುಖಂಡರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಅವರು ಮಾತನಾಡಿದರು. ಬಿಜೆಪಿ ನೇತೃತ್ವದ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಸ್ವತಃ ಗುತ್ತಿಗೆದಾರರೇ 40 ಪರ್ಸೆಂಟ್ ಲಂಚದ ಆಪಾದನೆ ಮಾಡಿದ್ದಾರೆ.ಸಬ್ ಇನ್ಸ್ ಪೆಕ್ಟರ್ ಹುದ್ದೆಗಳಿಗೆ 60-70 ಲಕ್ಷ ಲಂಚದ ಬೇಡಿಕೆ ಹೀಗೆ ಪ್ರತಿಯೊಂದರಲ್ಲೂ ಭ್ರಷ್ಟಾಚಾರವನ್ನು ಪೋಷಿಸುತ್ತಾ ಬಂದ ಇಂತಹ ಸರ್ಕಾರ ಈ ಹಿಂದೆಂದೂ ಇರಲಿಲ್ಲ. ತಾಲೂಕಿನಲ್ಲಿಯೂ ಸಹ ಆಡಳಿತ ವೈಫಲ್ಯದಿಂದ ಜನ ಬೇಸತ್ತು ಹೋಗಿದ್ದಾರೆ. ನಿಮಗೆಲ್ಲಾ ನೆನಪಿರಲಿ. ಕಾಂಗ್ರೆಸ್ ಪಕ್ಷ ಮಾತ್ರ ರಾಜ್ಯದ, ದೇಶದ ಏಳಿಗೆ ಬಯಸುತ್ತದೆ. ಬಡವರ, ಅಸಹಾಯಕರ, ದನಿ ಸತ್ತವರ ಪರ ಪಕ್ಷ ಸದಾ ನಿಂತಿದೆ. ನನ್ನ ಆಡಳಿತದ ಸಮಯದಲ್ಲೂ ಸರ್ವ ಜನಾಂಗದ ಅಭಿವೃದ್ಧಿಗೆ ಶ್ರಮಿಸಿದ್ದೇನೆ. ನಾನೆಂದೂ ಜಾತಿ ರಾಜಕಾರಣ ಮಾಡಿಲ್ಲ.ನನಗೆ ಜಾತಿ ಬಲವಿಲ್ಲ. ಜನಬಲವಿದೆ. ಹಾಗಾಗಿ ಎಲ್ಲರೂ ಈ ಬಾರಿ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಸಹಕರಿಸಿ ” ಎಂದರು. ಈ ಸಂದರ್ಭದಲ್ಲಿ ಐಮಂಗಲ ಭಾಗದ ಮುಖಂಡರುಗಳು, ಕಾಂಗ್ರೆಸ್ ಕಾರ್ಯಕರ್ತರು, ಮುಖಂಡರುಗಳು ಹಾಜರಿದ್ದರು.
ಕಾಂಗ್ರೆಸ್ ಸೇರ್ಪಡೆ-ನಗರ ಭಾಗದ ನೂರಾರು ಯುವಕರು ರಾಕ್ ಮಂಜುನಾಥ್ ರವರ ತೋಟದ ಮನೆಯಲ್ಲಿ ಮಾಜಿ ಸಚಿವ ಡಿ ಸುಧಾಕರ್ ರವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷ ಸೇರ್ಪಡೆಗೊಂಡರು. ಈ ಸಂದರ್ಭದಲ್ಲಿ ಬ್ಲಾಕ್ ಕಾಂಗ್ರೆಸ್ ಮಾಜಿ ಅಧ್ಯಕ್ಷ ಬಿ ಹೆಚ್ ಮಂಜುನಾಥ್, ನಗರಸಭೆ ಸದಸ್ಯ ಗುಂಡೇಶ್ ಕುಮಾರ್ ಮುಂತಾದವರು ಹಾಜರಿದ್ದರು.