i
ಬೆಳೆ ವಿಮೆಯ ಹಿರಿಯೂರಿನ 511 ರೈತರ ಪ್ರಸ್ತಾವ ತಿರಸ್ಕೃತ: ಆಕ್ಷೇಪಣೆಗೆ ಏ.29 ಕೊನೆ ದಿನ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
2021-2022ನೇ ಸಾಲಿನ ಮುಂಗಾರು, ಹಿಂಗಾರು ಹಾಗೂ ಬೇಸಿಗೆ ಹಂಗಾಮಿನಲ್ಲಿ ಪ್ರಧಾನಮಂತ್ರಿ ಫಸಲ್ ಭೀಮಾ ಯೋಜನೆಯಡಿ ಬೆಳೆ ವಿಮೆ ನೊಂದಣಿ ಮಾಡಿಕೊಂಡ ರೈತರ ಪ್ರಸ್ತಾವಗಳನ್ನು ಬೆಳೆ ಸಮೀಕ್ಷೆ ದತ್ತಾಂಶದೊಂದಿಗೆ ಹೋಲಿಕೆ ಮಾಡಿದಾಗ ತಾಳೆಯಾಗದೇ ಇರುವ ಒಟ್ಟು 511 ರೈತರ ಪ್ರಸ್ತಾವಗಳು ತಿರಸ್ಕೃತಗೊಂಡಿವೆ.
ಇದರಲ್ಲಿ ಮುಂಗಾರು ಹಂಗಾಮಿನ 300 ಪ್ರಸ್ತಾವನೆಗಳು , ಹಿಂಗಾರು ಹಂಗಾಮಿನ 210 ಪ್ರಸ್ತಾವನೆಗಳು ಹಾಗೂ ಬೇಸಿಗೆ ಹಂಗಾಮಿನ 1 ಪ್ರಸ್ತಾವನೆಯು ತಿರಸ್ಕತಗೊಂಡಿರುತ್ತದೆ. ತಿರಸ್ಕೃತಗೊಂಡಿರುವ ರೈತರ ಮಾಹಿತಿಯನ್ನು ಆಯಾ ಹೋಬಳಿಯ ರೈತ ಸಂಪರ್ಕ ಕೇಂದ್ರ ಹಾಗೂ ಗ್ರಾಮ ಪಂಚಾಯತಿ ನೋಟೀಸ್ ಬೋರ್ಡ್ಗಳಲ್ಲಿ ಪ್ರಕಟಿಸಲಾಗಿದೆ. ಏಪ್ರಿಲ್ 29 ರ ಒಳಗಾಗಿ ಆಕ್ಷೇಪಣೆ ಸಲ್ಲಿಸಲು ರೈತರಿಗೆ ಅವಕಾಶ ನೀಡಲಾಗಿದೆ.
ಆಕ್ಷೇಪಣೆ ಸಲ್ಲಿಸುವ ರೈತರು ಅರ್ಜಿಯೊಂದಿಗೆ 2021-2022ನೇ ಸಾಲಿನ ಬೆಳೆವಿಮೆಗೆ ನೊಂದಾಯಿಸಿರುವ ಬೆಳೆ ನಮೂದಾಗಿರುವ ಪಹಣಿ ಅಥವಾ ಬೆಂಬಲ ಬೆಲೆ ಪ್ರಯೋಜನಾ ಪಡೆದಿದ್ದಲ್ಲಿ ಇದರ ರಶೀದಿ ಅಥವಾ ಎ.ಪಿ.ಎಂ.ಸಿ ಮಾರುಕಟ್ಟಿಯಲ್ಲಿ ಬೆಳೆ ಮಾರಾಟ ಮಾಡಿದಲ್ಲಿ ಸಂಬಂಧಪಟ್ಟ ದಾಖಲೆಗಳನ್ನು ಸಲ್ಲಿಸಬೇಕೆಂದು ತಾಲ್ಲೂಕು ಕೃಷಿ ಇಲಾಖೆಯ ಸಹಾಯಕ ಕೃಷಿ ನಿರ್ದೇಶಕರು ಪ್ರಕಟಣೆಯಲ್ಲಿ ಹೊರಡಿಸಿ ರೈತರಿಗೆ ಮನವಿ ಮಾಹಿತಿ ನೀಡಿದ್ದಾರೆ.