i
ವಿಶ್ವ ಮಾನವ ವಸತಿ ಶಾಲೆಯ ಮೂರು ಮಂದಿ ಪಿಯುಸಿ ವಿದ್ಯಾರ್ಥಿಗಳು ನಾಪತ್ತೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ತಾಲ್ಲೂಕಿನ ಗುತ್ತಿನಾಡು ಗ್ರಾಮದ ಬಳಿ ಇರುವ ವಿಶ್ವಮಾನವ ವಸತಿ ಶಾಲೆ ನಿಲಯದಿಂದ ಪ್ರಥಮ ಪಿಯುಸಿ ವಿದ್ಯಾರ್ಥಿಗಳಾದ ಯು. ತರುಣ್ (17 ವರ್ಷ) ತಂದೆ ಆರ್.ಉಮೇಶ್ ಬ್ಯಾಂಕ್ ಕಾಲೋನಿ ಚಿತ್ರದುರ್ಗ ನಗರ, ಕೆ.ಆರ್.ಗುರು (17 ವರ್ಷ) ತಂದೆ ರೇವಣ ಸಿದ್ದಪ್ಪ ದಾವಣಗೆರೆ ತಾಲ್ಲೂಕಿನ ಕುರ್ಕಿ ಗ್ರಾಮ, ಎಸ್.ಎಸ್ ರಾಜೇಶ್(17 ವರ್ಷ) ತಂದೆ ಸಣ್ಣಕಲ್ಲಪ್ಪ ದಾವಣಗೆರೆ ತಾಲ್ಲೂಕಿನ ಕಂದಗಲ್ಲು ಗ್ರಾಮ ಅವರು ಕಾಣೆಯಾಗಿರುವ ಪ್ರಕರಣ ಏಪ್ರಿಲ್ 7 ರಂದು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ದಾಖಲಾಗಿದೆ.
ಕಾಣೆಯಾದ ತರುಣ್ ಚಹರೆ ಇಂತಿದೆ. ಯು. ತರುಣ್ (17 ವರ್ಷ) ತಂದೆ ಆರ್. ಉಮೇಶ್ 5.2 ಅಡಿ ಎತ್ತರ, ಕೋಲು ಮುಖ, ಗೋಧಿ ಮೈಬಣ್ಣ, ಸಾಧಾರಣವಾದ ಮೈಕಟ್ಟು, ತಲೆಯಲ್ಲಿ ಸುಮಾರು 2 ಇಂಚು ಉದ್ದದ ಕಪ್ಪು ಕೂದಲು, ಬಲಗೈ ಮೇಲೆ ರೋಸಿ (rosi) ಎಂದು ಟ್ಯಾಟು ಇರುತ್ತದೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ.
ಕಾಣೆಯಾದ ಕೆ.ಆರ್.ಗುರು ಚಹರೆ ಇಂತಿದೆ. ಕೆ.ಆರ್. ಗುರು (17 ವರ್ಷ) ತಂದೆ ರೇವಣ ಸಿದ್ದಪ್ಪ 5.5 ಅಡಿ ಎತ್ತರ, ಕೋಲು ಮುಖ, ಎಣ್ಣೆಗೆಂಪು ಮೈಬಣ್ಣ, ತೆಳುವಾದ ಮೈಕಟ್ಟು, ತೆಲೆಯಲ್ಲಿ ಸುಮಾರು 2 ಇಂಚು ಉದ್ದದ ಕಪ್ಪು ಕೂದಲು ಎದೆಯ ಮೇಲೆ 8.12.2005 ಎಂಬ ಟ್ಯಾಟ್ ಇರುತ್ತದೆ. ಕನ್ನಡ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ.
ಕಾಣೆಯಾದ ಎಸ್.ಎಸ್.ರಾಜೇಶ್ ಚಹರೆ ಇಂತಿದೆ. ಎಸ್.ಎಸ್.ರಾಜೇಶ್ (17 ವರ್ಷ) ತಂದೆ ಸಣ್ಣಕಲ್ಲಪ್ಪ 5.2 ಅಡಿ ಎತ್ತರ, ದುಂಡು ಮುಖ, ಗೋಧಿ ಮೈಬಣ್ಣ, ತೆಳುವಾದ ಮೈಕಟ್ಟು, ತಲೆಯಲ್ಲಿ ಸುಮಾರು 2 ಇಂಚು ಉದ್ದದ ಕಪ್ಪು ಕೂದಲು, ಕನ್ನಡ ಮತ್ತು ಇಂಗ್ಲೀಷ್ ಭಾಷೆ ಮಾತನಾಡುತ್ತಾನೆ.
ಈ ಮೇಲ್ಕಂಡ ಚಹರೆ ವಿವರವುಳ್ಳ ಬಾಲಕರ ಕುರಿತು ಮಾಹಿತಿ ದೊರೆತ ಕೂಡಲೆ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಗೆ ಸಂರ್ಪಕಿಸಬೇಕು ಎಂದು ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಠಾಣೆಯ ಸಬ್ಇನ್ಸ್ಪೆಕ್ಟರ್ ತಿಳಿಸಿದ್ದಾರೆ.