i
ನಕಲಿ ಚಿನ್ನದ ನಾಣ್ಯ ನೀಡಿ ವಂಚಿಸಿದ್ದ ಆರೋಪಿ ಬಂಧನ…
ಚಂದ್ರವಳ್ಳಿ ನ್ಯೂಸ್, ಹೊಳಲ್ಕೆರೆ:
250 ಗ್ರಾಂನ ನಕಲಿ ಚಿನ್ನದ ನಾಣ್ಯಗಳನ್ನು ಕೊಟ್ಟು ರವಿ ತಂದೆ ಸುಂದರ್ ಸ್ವಾಮಿ ಇವರಿಗೆ ಅಸಲಿ ಚಿನ್ನದ ನಾಣ್ಯಗಳು ಎಂತ ನಂಬಿಸಿ 6.50 ಲಕ್ಷ ರೂ ನಗದು ಹಣವನ್ನು ಪಡೆದುಕೊಂಡು ಮೋಸ ಮಾಡಿದ್ದ ಆರೋಪಿಗಳನ್ನು ಮಾಲ್ ಸಮೇತ ಪೊಲೀಸರು ಬಂಧಿಸಿರುವ ಘಟನೆ ಹೊಳಲ್ಕೆರೆ ತಾಲೂಕಿನ ಚಿಕ್ಕಜಾಜೂರು ಪೊಲೀಸ್ ಠಾಣೆಯಲ್ಲಿ ಜರುಗಿದೆ.
ಪ್ರಕರಣದ ಆರೋಪಿ ರಾಮಪ್ಪ ಅಲಿಯಾಸ್ ಬೆಂಕಿ ರಾಮಪ್ಪ ಅವರನ್ನು ಪೊಲೀಸರು ಬಂಧಿಸಿ ಆರೋಪಿತನಿಂದ 6.50 ಲಕ್ಷ ರೂಪಾಯಿ ನಗದು ಹಣವನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿರುತ್ತಾರೆ.
ಚಿತ್ರದುರ್ಗ ಜಿಲ್ಲಾ ಪೊಲೀಸ್ ಅಧೀಕ್ಷಕ ಪರಶುರಾಮ ಕೆ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಕುಮಾರಸ್ವಾಮಿ ಮತ್ತು ಚಿತ್ರದುರ್ಗ ಉಪವಿಭಾಗದ ಡಿವೈಎಸ್ಪಿ ಅನಿಲ್ ಕುಮಾರ್ ಇವರ ಮಾರ್ಗದರ್ಶನದಲ್ಲಿ ಹೊಳಲ್ಕೆರೆ ಸಿಪಿಐ ದೀಪಕ್ ನೇತೃತ್ವದಲ್ಲಿ ಚಿಕ್ಕಜಾಜೂರು ಪೊಲೀಸ್ ಠಾಣೆ ಪಿಎಸ್ಐ ತಿಪ್ಪೇಸ್ವಾಮಿ ಟಿ.ಎನ್ ಹಾಗೂ ಸಚಿನ್ ಪಟೇಲ್ ಮತ್ತು ಸಿಬ್ಬಂದಿಯವರಾದ ರುದ್ರೇಶ್, ರಾಘವೇಂದ್ರ, ಕಿರಣ, ಕುಮಾರಸ್ವಾಮಿ, ಕಿರಣ್ ಕುಮಾರ್, ಗಿರೀಶ್, ಮಲ್ಲೇಶ, ಅನಿಲ್ ಕುಮಾರ, ಮಂಜಯ್ಯ ರವರನ್ನೊಳಗೊಂಡ ತಂಡವನ್ನು ಪೊಲೀಸ್ ಅಧೀಕ್ಷಕರು ಶ್ಲಾಘಿಸಿದ್ದಾರೆ.