i
ಬಿರುಸಿನ ಪ್ರಚಾರ ಕೈಗೊಂಡ ಪಕ್ಷೇತರ ಅಭ್ಯರ್ಥಿ ಸೌಭಾಗ್ಯ ಬಸವರಾಜನ್…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಚಿತ್ರದುರ್ಗ ವಿಧಾನಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸೌಭಾಗ್ಯ ಬಸವರಾಜನ್ ಅವರು ಕ್ಷೇತ್ರದ ಹಲವು ಹಳ್ಳಿಗಳಲ್ಲಿ ಮಂಗಳವಾರ ಬಿರುಸಿನ ಪ್ರಚಾರ ಮಾಡಿದರು.
ತಾಲೂಕಿನ ಟಗರನಹಟ್ಟಿ ಗ್ರಾಮದಲ್ಲಿ ಮಹಿಳೆಯರು ಹೆಚ್ಚಿನ ಸಂಖ್ಯೆಯಲ್ಲಿದ್ದು ಸೌಭಾಗ್ಯ ಬಸವರಾಜನ್ ರವರನ್ನು ಅದ್ಧೂರಿಯಾಗಿ ಸ್ವಾಗತಿಸಿದ ಸಂದರ್ಭದಲ್ಲಿ ಅವರು “ತೆಂಗಿನ ತೋಟ”ದ ಗುರುತಿಗೆ ತಮ್ಮ ಅಮೂಲ್ಯವಾದ ಮತ ನೀಡುವಂತೆ ಮತದಾರರಲ್ಲಿ ಮನವಿ ಮಾಡಿದರು.
ನಂತರ ಸೌಭಾಗ್ಯ ಬಸವರಾಜನ್ ಜಾನುಕೊಂಡ ಗ್ರಾಮದಕ್ಕೆ ಭೇಟಿ ನೀಡಿದಾಗ ಹೂ ಮಳೆ ಸುರಿಸುವುದರ ಮೂಲಕ ಅದ್ದೂರಿ ಸ್ವಾಗತ ಕೋರಿದರು.
ಗ್ರಾಮದ ರಸ್ತೆ ಯುದ್ದಕ್ಕೂ ನಿಂತಿದ್ದ ಮತದಾರರು ಸೌಭಾಗ್ಯಮ್ಮ ಬಸವರಾಜನ್ ಗೆ ಜೈಕಾರ ಹಾಕಿ ಹರ್ಷೋದ್ಗಾರ ವ್ಯಕ್ತಪಡಿಸಿದರು.
ಜಾನುಕೊಂಡ ಗ್ರಾಮದ ಎಲ್ಲಾ ಬೀದಿಗಳಲ್ಲಿ ಸಂಚರಿಸುವುದರ ಮೂಲಕ ಮತದಾರರಿಗೆ ತೆಂಗಿನ ತೋಟದ ಗುರುತಿಗೆ ಮತ ನೀಡುವಂತೆ ಕೈ ಮುಗಿದು ಬೇಡಿಕೊಂಡರು. ಬಳಿಕ ಅವರು ನಾಯಕರ ಸೊಲ್ಲಾಪುರ ಗ್ರಾಮಕ್ಕೆ ಭೇಟಿ ನೀಡಿ ಭರ್ಜರಿ ಪ್ರಚಾರ ಮಾಡಿದರು.
ನಾಯಕರ ಸೊಲ್ಲಾಪುರ ಗ್ರಾಮಸ್ಥರು ಸೌಭಾಗ್ಯ ಬಸವರಾಜನ್ ರವರನ್ನು ಅದ್ಧೂರಿಯಾಗಿ ಸ್ವಾಗತಿಸಿ ಪಟಾಕಿ ಸಿಡಿಸಿ ಸಂಭ್ರಮಮಿಸಿದರು. ತೆಂಗಿನ ತೋಟದ ಗುರುತಿಗೆ ಮತ ನೀಡುವಂತೆ ಅವರು ಮನವಿ ಮಾಡಿದರು.