i
ಹೊರಗಿನ ಅಭ್ಯರ್ಥಿಗಳನ್ನು ಮನೆಗೆ ಕಳಿಸಿ, ಮನೆ ಮಗನನ್ನು ವಿಧಾನಸೌಧಕ್ಕೆ ಕಳಿಸಿ-ರವೀಂದ್ರಪ್ಪ…
ಚಂದ್ರವಳ್ಳಿ ನ್ಯೂಸ್ ಹಿರಿಯೂರು:
ಹಿರಿಯೂರು ವಿಧಾನಸಭಾ ಕ್ಷೇತ್ರಕ್ಕೆ ಕೆಟ್ಟ ಪರಂಪರೆ ಇದೆ. ಸಾಮಾಜಿಕ ಜಾಲತಾಣ, ಟಿವಿ ಮತ್ತಿತರ ಕಡೆಗಳಲ್ಲಿ ದುಡ್ಡಿದ್ದರೆ ಹಿರಿಯೂರಿಗೆ ಹೋಗಿ ಅಲ್ಲಿನ ಜನ ಗೆಲ್ಲಿಸುತ್ತಾರೆಂದು ಹೇಳುವ ಮೂಲಕ ಕ್ಷೇತ್ರದ ಮಾನ ಅಪಮಾನಕ್ಕೆ ಗುರಿಯಾಗಿದೆ. ಈ ಕಳಂಕ ತೊಳೆಯಬೇಕಾದರೆ ಸ್ಥಳೀಯ ಅಭ್ಯರ್ಥಿ, ನಿಮ್ಮ ಮನೆ ಮಗನಿಗೆ ಮತ ನೀಡ ವಿಧಾನಸೌಧಕ್ಕೆ ಕಳುಹಿಸಬೇಕು, ಹೊರಗಿನವರನ್ನು ಕ್ಷೇತ್ರದಿಂದ ಅವರ ಮನೆಗೆ ಕಳುಹಿಸಬೇಕು ಎಂದು ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪ ಮನವಿ ಮಾಡಿದರು.
ಹಿರಿಯೂರು ತಾಲೂಕಿನ ಜವಗೊಂಡನಹಳ್ಳಿ ಹೋಬಳಿಯ ಮಾಳಗೊಂಡನಹಳ್ಳಿ, ಮುಸ್ಲಿಂ ಕಾಲೋನಿ, ಭೂತಯ್ಯನಹಟ್ಟಿ, ಮಾದೇನಹಳ್ಳಿ, ದಿಂಡಾವರ ಭೋವಿ ಕಾಲೋನಿ, ದಿಂಡಾವರ, ಪಿಲಾಲಿ ಮತ್ತಿತರ ಗ್ರಾಮಗಳಲ್ಲಿ ಬಿರುಸಿನ ಪ್ರಚಾರ ಮಾಡಿ ನಂತರ ಮಾಧ್ಯಮಗಳೊಂದಿಗೆ ಅವರು ಮಾತನಾಡಿದರು.
ಹಿರಿಯೂರು ಜೆಡಿಎಸ್ ಭದ್ರಕೋಟೆ. ಈ ಕೋಟೆ ಛಿದ್ರವಾಗಲು ಬಿಡಬೇಡಿ, ಬಿಜೆಪಿ-ಕಾಂಗ್ರೆಸ್ ಪಕ್ಷಗಳ ದುರಾಡಳಿತದಿಂದಾಗಿ ಯಾವುದೇ ಅಭಿವೃದ್ಧಿ ಕಾರ್ಯಗಳು ಆಗಿಲ್ಲ ಎಂದು ಅವರು ದೂರಿದರು.
ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಡಿ.ಯಶೋಧರ ಮಾತನಾಡಿ, ಜೆಡಿಎಸ್ ಅಭ್ಯರ್ಥಿ ರವೀಂದ್ರಪ್ಪ ಸ್ಥಳೀಯ ಅಭ್ಯರ್ಥಿಯಾಗಿದ್ದು ನಿಮ್ಮ ಮುಂದೆ ನಿಂತಿದ್ದಾರೆ. ತಾಲೂಕಿನ ಜನರ ಸೇವೆ ಮಾಡಲು ಒಂದು ಅವಕಾಶ ಮಾಡಿಕೊಡಿ. ನೀವು ಕೊಟ್ಟಂತ ಮತಕ್ಕೆ ಋಣ ತೀರಿಸುವ ಕೆಲಸ ಮಾಡಲಿದ್ದಾರೆ ಎಂದು ಮನವಿ ಮಾಡಿದರು.
ಕೀರ್ತಿ ಶ್ರೇಯರಾದ ಮಾಜಿ ಸಚಿವ ಮಂಜುನಾಥ್ ಮಾಡಿರುವ ಅಭಿವೃದ್ಧಿ ಕಾರ್ಯಗಳು ಜನಮನದಲ್ಲಿ ಇನ್ನೂ ಇವೆ. ಅವರು ಮಾಡಿ ಸೇವೆ ಶ್ಲಾಘನೀಯ ಜಿಲ್ಲಾ ಪ್ರಚಾರ ಸಮಿತಿ ಡಿ.ಯೋಶೋಧರ ಹೇಳಿದರು.
ತಾಲೂಕಿನ ಸಮಸ್ಯೆ ಬಗ್ಗೆ ಪತ್ರಿಕೆಯಲ್ಲಿ ವರದಿಯಾದರೆ ತಕ್ಷಣವೇ. ಸಂಬಂಧಪಟ್ಟ ಅಧಿಕಾರಿಗಳನ್ನು ಕರೆಸಿ ಸಮಸ್ಯೆ ಬಗೆರಿಸಿ ತಿಳಿಸಬೇಕೆಂದು ಅಧಿಕಾರಿಗಳಿಗೆ ಮಂಜುನಾಥ್ ಅವರು ಹೇಳುತ್ತಿದ್ದರು. ಅಂದು ಬರುತ್ತಿದ್ದ ಕಡಿಮೆ ಅನುದಾನದಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸವನ್ನು ಮಾಡಿದ್ದಾರೆ. ಹಿರಿಯೂರು ಕ್ಷೇತ್ರದಲ್ಲಿ ಸ್ಥಳೀಯರಿಗೆ ದಯಮಾಡಿ ಒಂದು ಅವಕಾಶ ಮಾಡಿಕೊಡಿ. ಯಾವ ರೀತಿಯ ಅಭಿವೃದ್ಧಿ ಮಾಡಿ ತೋರಿಸುತ್ತೇವೆ ಎಂದು ಹೇಳಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯಣ್ಣ ಮಾತನಾಡಿ ಕ್ಷೇತ್ರದ ಮತದಾರರು ಜೆಡಿಎಸ್ ಪಕ್ಷ ಬೆಂಬಲಿಸುವ ಮೂಲಕ ಅಭ್ಯರ್ಥಿ ರವೀಂದ್ರಪ್ಪ ಅವರನ್ನು ಗೆಲ್ಲಿಸಬೇಕು. ಅವರು ಸ್ಥಳೀಕರಾಗಿದ್ದು ತಾಲೂಕಿನ ಮತದಾರರು ಅಭ್ಯರ್ಥಿಯನ್ನು ಗೆಲ್ಲಿಸವು ಮುಖಾಂತರ ಅಭಿವೃದ್ಧಿಗೆ ಹೆಚ್ಚು ಹೊತ್ತು ನೀಡಬೇಕು ಎಂದು ಹೇಳಿದರು. ಜೆಡಿಎಸ್ ಮುಖಂಡರಾದ ವಕೀಲ ಶಿವಶಂಕರ್, ಜವನಗೊಂಡನಹಳ್ಳಿ ಮಂಜುನಾಥ್, ಹನುಮಂತರಾಯ ಸೇರಿದಂತೆ ಮತ್ತಿತರ ಕಾರ್ಯಕರ್ತರು ಭಾಗವಹಿಸಿದ್ದರು.