i
ಹಿರಿಯೂರು ಸಮೀಪ 4.40 ಲಕ್ಷ ರೂ. ಅಕ್ರಮ ಸಾಗಟದ ಹಣ ವಶ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಬೆಂಗಳೂರಿನಿಂದ ಹುಳಿಯಾರಿಗೆ ಸಾಗಣಿಕೆ ಮಾಡುತ್ತಿದ್ದ ದಾಖಲೆ ಇಲ್ಲದ ರೂ.4.4ಲಕ್ಷ ಹಣವನ್ನು ಮಂಗಳವಾರ ಹಿರಿಯೂರು ಪಟ್ಟಣದಲ್ಲಿ ವಶಕ್ಕೆ ಪಡೆಯಲಾಗಿದೆ.
ಪ್ರಾಥಮಿಕ ಹಂತದಲ್ಲಿ ಪ್ರಕರದಲ್ಲಿ ಯಾವುದೇ ರಾಜಕೀಯ ಪಕ್ಷದ ಸಂಬಂದ ಕಂಡುಬಂದಿಲ್ಲ. ಹಣ ಸಾಗಣಿಕೆ ಸಂಬಂಧ ಬೆಂಗಳೂರು ಮೂಲದ ಇಬ್ಬರು ವ್ಯಕ್ತಿಗಳ ಪರಿಶೀಲನೆ ನಡೆಸಲಾಗುತ್ತಿದೆ. ವಶ ಪಡಿಸಿಕೊಂಡ ಹಣವನ್ನು ಜಿಲ್ಲಾ ಚುನಾವಣೆ ಸಮಿತಿಗೆ ನೀಡಲಾಗಿದೆ. ಪ್ರಕರಣದಲ್ಲಿ ಯಾವುದೇ ಬಂಧನವಾಗಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಪರುಶುರಾಮ ತಿಳಿಸಿದ್ದಾರೆ.