i
ಮೇ-4 ರಂದು ಹಿರಿಯೂರಿಗೆ ಪಂಚರತ್ನ ಯಾತ್ರೆ ಆಗಮನ-ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯಣ್ಣ…
ಚಂದ್ರವಳ್ಳಿ ನ್ಯೂಸ್, ಹಿರಿಯೂರು:
ನಗರಕ್ಕೆ ಮೇ-4ರಂದು ಮಧ್ಯಾಹ್ನ 12 ಗಂಟೆಗೆ ಜೆಡಿಎಸ್ ಪಕ್ಷದ ವತಿಯಿಂದ ಪಂಚರತ್ನ ಯಾತ್ರೆ ಆಗಮಿಸಲಿದ್ದು ನಗರದ ನೆಹರೂ ಮೈದಾನದಲ್ಲಿ ಪಂಚರತ್ನ ಯಾತ್ರೆಯ ಬೃಹತ್ ಸಮಾವೇಶ ನಡೆಯಲಿದೆ. ಈ ಕಾರ್ಯಕ್ರಮಕ್ಕೆ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಆಗಮಿಸಲಿದ್ದಾರೆ ಎಂog ಜೆಡಿಎಸ್ ಜಿಲ್ಲಾಧ್ಯಕ್ಷ ಎಂ.ಜಯಣ್ಣ ಹೇಳಿದರು.
ತಾಲ್ಲೂಕಿನ ಆದಿವಾಲ, ಕೆಆರ್. ಹಳ್ಳಿ, ಇಕ್ಕನೂರು, ಯಳನಾಡು ಹಾಗೂ ರಂಗನಾಥಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಒಕ್ಕಲಿಗ ಸಂಘದ ಅಧ್ಯಕ್ಷ ರಾಮಚಂದ್ರಪ್ಪರವರ ನೇತೃತ್ವದಲ್ಲಿ ಆದಿವಾಲ ಗ್ರಾಮದಿಂದ ಹಮ್ಮಿಕೊಳ್ಳಲಾಗಿದ್ದ ಸಾವಿರಾರು ಕಾರ್ಯಕರ್ತರ ಬೈಕ್ ರ್ಯಾಲಿಗೆ ಚಾಲನೆ ನೀಡಿ ಅವರು ಮಾತನಾಡಿದರು. ಈಗಾಗಲೇ ನಾವು ಕ್ಷೇತ್ರದಲ್ಲಿ ಎಲ್ಲೇ ಹೋದರು ಜೆಡಿಎಸ್ ಪಕ್ಷಕ್ಕೆ ಅಭೂತಪೂರ್ವ ಸ್ವಾಗತ ಹಾಗೂ ಬೆಂಬಲ ವ್ಯಕ್ತವಾಗುತ್ತಿದ್ದು, ನಮ್ಮ ಪಕ್ಷದಿಂದ ಅನ್ಯ ಪಕ್ಷಕ್ಕೆ ತೆರಳಿದ್ದ ಮುಖಂಡರು ಮತ್ತು ಕಾರ್ಯಕರ್ತರು ಮತ್ತೆ ಮರಳಿ ಜೆಡಿಎಸ್ ಪಕ್ಷ ಸೇರುತ್ತಿದ್ದಾರೆ ಎಂದರಲ್ಲದೆ, ಈ ಬಾರಿ ಮತದಾರರು ಸ್ಥಳೀಯ ಅಭ್ಯರ್ಥಿಗೆ ಅವಕಾಶ ನೀಡಬೇಕೆಂದು ತೀರ್ಮಾನ ಮಾಡಿದ್ದು, ನಾವೆಲ್ಲರೂ ಒಗ್ಗಟ್ಟಾಗಿ ಜೆಡಿಎಸ್ ಅಭ್ಯರ್ಥಿ, ನಮ್ಮ ತಾಲ್ಲೂಕಿನ ಮಗ ರವೀಂದ್ರಪ್ಪನವರನ್ನು ಗೆಲ್ಲಿಸಿಕೊಳ್ಳೋಣ, ಈನಿಟ್ಟಿನಲ್ಲಿ ಪಕ್ಷದ ಕಾರ್ಯಕರ್ತರು ಬದ್ಧತೆಯಿಂದ ಕೆಲಸ ಮಾಡಬೇಕು ಎಂಬುದಾಗಿ ಹೇಳಿದರು.
ಇದೇ ತಿಂಗಳ ಮೇ 10 ರಂದು ನಡೆಯಲಿರುವ ಚುನಾವಣೆಯಲ್ಲಿ ಸ್ಥಳೀಯ ಜೆಡಿಎಸ್ ಅಭ್ಯರ್ಥಿ ಎಂ.ರವೀಂದ್ರಪ್ಪ ಅವರ ಕ್ರಮಸಂಖ್ಯೆ 3ರ ತೆನೆ ಹೊತ್ತ ಮಹಿಳೆ ಗುರುತಿಗೆ ಮತ ನೀಡಿ, ಅವರ ಗೆಲುವಿಗೆ ಸಹಕರಿಸಬೇಕು ಎಂog ಕರೆ ನೀಡಿದರು.
ಒಕ್ಕಲಿಗ ಸಂಘದ ಅಧ್ಯಕ್ಷ ರಾಮಚಂದ್ರಪ್ಪ ಮಾತನಾಡಿ, ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಿ, ಪ್ರತಿಯೊಂದು ಹಳ್ಳಿ-ಹಳ್ಳಿಗಳಲ್ಲಿ ಜೆಡಿಎಸ್ ಪಕ್ಷದ ಸಾಧನೆ ತಿಳಿಸಿ, ಪಕ್ಷವನ್ನು ಬಲಪಡಿಸಿಕೊಂಡು, ನಮ್ಮ ಜೆಡಿಎಸ್ ಅಭ್ಯರ್ಥಿ ರವೀಂದ್ರಪ್ಪನವರನ್ನು ಗೆಲ್ಲಿಸಿ ವಿಧಾನಸಭಾಸಭೆಗೆ ಕಳುಹಿಸೋಣ ಎಂದು ಹೇಳಿದರು.
ಈ ಬೈಕ್ ರ್ಯಾಲಿ ಆದಿವಾಲ ಗ್ರಾಮದಿಂದ ಆರಂಭವಾಗಿ, ನಂದಿಹಳ್ಳಿ, ರಂಗನಾಥಪುರ, ಆಲೂರು, ಕೆಆರ್ ಹಳ್ಳಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಸಂಚರಿಸಿತು.ಈ ಬೈಕ್ ರ್ಯಾಲಿಯಲ್ಲಿ ಭಾಗವಹಿಸಿದ್ದ ಎಲ್ಲರಿಗೂ ತೆಂಗಿನ ಕಾಯಿ ವ್ಯಾಪಾರಿ ಆಸಿಫ್ ಅವರು ಉಚಿತವಾಗಿ ಉಪಹಾರ ವ್ಯವಸ್ಥೆ ಮಾಡಿದ್ದರು.
ಈ ಬೈಕ್ ರ್ಯಾಲಿಯಲ್ಲಿ ಕೃಷಿಕ ಸಮಾಜದ ಅಧ್ಯಕ್ಷ ಹೆಚ್.ಆರ್.ತಿಮ್ಮಯ್ಯ, ಶಿವಪ್ರಸಾದ್ ಗೌಡ, ಸಂಧ್ಯಾ ಮೂಡಲಗಿರಿಯಪ್ಪ, ಜೆಡಿಎಸ್ ಮುಖಂಡ ಆಸೀಫ್, ನಂದಿಹಳ್ಳಿ ಗಿರಿಜಪ್ಪ, ತ್ರಿಬಲ್ ಎಂ ಮಣಿ, ಮಮತಾ ಕೃಷ್ಣಮೂರ್ತಿ, ಸುಭಾಷ್, ರಾಮಲಿಂಗೇಗೌಡ ಸೇರಿದಂತೆ ವಿವಿಧ ಸಮುದಾಯಗಳ ಮುಖಂಡರು ಭಾಗವಹಿಸಿದ್ದರು.