i
ಜೆಡಿಎಸ್ ಅಭ್ಯರ್ಥಿ ಮನೆ ಮೇಲೆ ರಾಜಕೀಯ ಪ್ರೇರಿತ ಐಟಿ ರೈಡ್ ಗೆ ಶಿವು ಯಾದವ್ ತೀವ್ರ ಖಂಡನೆ…
ಚಂದ್ರವಳ್ಳಿ ನ್ಯೂಸ್, ಚಿತ್ರದುರ್ಗ:
ಹಿರಿಯೂರು ವಿಧಾನ ಸಭಾ ಜೆಡಿಎಸ್ ಅಭ್ಯರ್ಥಿ ರವೀಂದ್ರಪ್ಪನವರ ಮನೆಯ ಮೇಲೆ ಮೇ-9 ರಂದು ನಡೆದ ಐಟಿ ದಾಳಿಯು ರಾಜಕೀಯ ಪ್ರೇರಿತರಾಗಿದೆ, ಕಳೆದ ಏ-22 ರಂದು ಅವರ ಮನೆಯ ಮೇಲೆ ದಾಳಿ ನಡೆಸಲಾಗಿತ್ತು ಮತ್ತೆ ಒಂದು ದಿನ ಚುನಾವಣೆ ಇರುವಾಗ ಅವರನ್ನು ಹೆದರಿಸಿ ಬೆದರಿಸುವ ತಂತ್ರವಾಗಿದೆ ಇದು ರವೀಂದ್ರಪ್ಪನವರ ಮೇಲೆ ನಡೆದ ಮಾನಸಿಕ ದೈಹಿಕವಾಗಿ ಕುಗ್ಗಿಸಲು ನಡೆಸಿದ ದಾಳಿಯಾಗಿದೆ ಎಂದು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಸಿ.ಶಿವು ಯಾದವ್ ತೀವ್ರವಾಗಿ ಖಂಡಿಸಿದ್ದಾರೆ.
ಅವರು ಪತ್ರಿಕಾ ಹೇಳಿಕೆ ನೀಡಿ, ಅಭ್ಯರ್ಥಿ ರವೀಂದ್ರಪ್ಪನರು ಚುನಾವಣೆಯಲ್ಲಿ ಸೋಲು ಕಂಡರೆ ಅಥವಾ ಗೆಲುವು ಕಂಡರೆ ಇದರ ನೈತಿಕ ಹೊಣೆಯನ್ನು ಐಟಿ ಅದಿಕಾರಿಗಳೇ ಹೊರ ಬೇಕಾಗುತ್ತದೆ ಎಂದು ಅವರು ಎಚ್ಚರಿಸಿದ್ದಾರೆ.
ಚುನಾವಣೆ ಸಂದರ್ಭದಲ್ಲಿ ಮಾನಸಿಕ ಹಿಂಸೆ ನೀಡಿ ಸಮಾಜದಲ್ಲಿ ಅವರ ಗೌರವಕ್ಕೆ ಹಾನಿ ಮಾಡಿ ತೇಜೊವಧೆ ಮಾಡುವುದು ಪ್ರಜಾಪ್ರಭುತ್ವದ ಲಕ್ಷಣವಲ್ಲ, ಇದೊಂದು ಸಂವಿಧಾನ ವಿರೋಧಿ ಕೃತ್ಯವಾಗಿದೆ. ದೇಶದಲ್ಲಿ ಪ್ರಜಾಪ್ರಭುತ್ವ ವ್ಯವಸ್ಥೆ ಬುಡಮೇಲಾಗಿದೆ ಎಂದೇ ತಿಳಿಯಬೇಕಾಗುತ್ತದೆ ಎಂದು ಐಟಿ ಅಧಿಕಾರಿಗಳನ್ನು ಅವರು ಪ್ರಶ್ನಿಸಿದ್ದಾರೆ.
ಕಳೆದ ಎರಡು ವಾರದ ಹಿಂದೆ ಯಾವ ಆದಾರ ಮತ್ತು ಮಾನ ದಂಡದ ಮೇಲೆ ಐಟಿ ಅಧಿಕಾರಿಗಳು ದಾಳಿ ಮಾಡಿದ್ದರು, ಮನೆಯಲ್ಲಿ ಏನು ಸಿಗದೆ ಇದ್ದರೂ ಮತ್ತೆ ಮತ್ತೆ ಏಕೆ ದಾಳಿ ನಡೆಸಿ ಅವರನ್ನು ಹೆದರಿಸಿ ಬೆದರಿಸಿ ಚುನಾವಣೆಯಲ್ಲಿ ಅವರನ್ನು ಸೋಲಿಲುವುದು ಡಬಲ್ ಇಂಜಿನ್ ಸರ್ಕಾರದ ಉದ್ದೇಶವಾಗಿದೆ, ಈ ಹಿಂದೆ ಐಟಿ ಅಧಿಕಾರಿಗಳು ದಾಳಿ ಮಾಡಿ ಪರಿಶೀಲನೆ ಮಾಡಿದ ಸಂದರ್ಭದಲ್ಲಿ ಏನಾದರೂ ಅಕ್ರಮ ಆಸ್ತಿ ಸಿಕ್ಕಿದ್ದರೆ ಆಗಲೇ ಕ್ರಮ ಕೈಗೊಳ್ಳಬೇಕಾಗಿತ್ತು. ಆ ಕೆಲಸ ಮಾಡಿದ ಐಟಿ ಅಧಿಕಾರಿಗಳು ಮತದಾನಕ್ಕೆ ಒಂದು ಬಾಕಿ ಇರುವ ಸಂದರ್ಭದಲ್ಲಿ ಕಾನೂನು ಬಾಹಿರವಾಗಿ ದಾಳಿ ನಡೆಸಿ ಅಭ್ಯರ್ಥಿಯ ಪತ್ನಿ ಮತ್ತು ಸೊಸೆ ವಶಕ್ಕೆ ಪಡೆದು ಬಂಧಿಸಿರುವು ಕಾನೂನು ಬಾಹಿರವಾಗಿದೆ. ಅಲ್ಲದೆ ಅಭ್ಯರ್ಥಿಯ ನೈತಿಕ ಸ್ಥೈರ್ಯ ಕುಗ್ಗಿಸಲು ಬಿಜೆಪಿ ಸರ್ಕಾರ ದುರುದ್ದೇಶ ಪೂರವಕವಾಗಿ ಮಾಡಿರುವ ಕೃತ್ಯವಾಗಿದೆ. ದಾಳಿ ಕಾರ್ಯ ಮಾಡಿರುವುದು ಅತ್ಯಂತ ಶೋಚನೀಯವಾಗಿದೆ. ಇಡೀ ದೇಶದಲ್ಲಿ ಐಟಿ ಇಡಿ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ಪ್ರದಾನಮಂತ್ರಿ ಮೋದಿ, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತನ್ನ ಅಧಿಕಾರವನ್ನು ದುರುಪಯೋಗ ಮಾಡಿಕೊಂಡು ವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯುವುದು ಬಿಜೆಪಿ ಸರ್ಕಾರದ ಉದ್ದೇಶವಾಗಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ.
ರಾಜ್ಯದ ಜನರು ಬಿಜೆಪಿ ಸರ್ಕಾರದ ದುರುದ್ದೇಶ ಪೂರಕವಾದ ಐಟಿ ದಾಳಿಯನ್ನು ಸಹಿಸುವುದಿಲ್ಲ. ಮತದಾರರು ಇದಕ್ಕೆ ತಕ್ಕ ಉತ್ತರ ನೀಡಲಿದ್ದಾರೆ. ರಾಜ್ಯದ ಸರ್ಕಾರ ಮತ್ತು ಬಿಜೆಪಿ ಪಕ್ಷವು ಪ್ರಜಾಪ್ರಭುತ್ವದ ಆಶಯವನ್ನು ಗಾಳಿಗೆ ತೂರಿ ಜನಸಾಮಾನ್ಯರನ್ನು ಭಯದ ನೆರಳಲ್ಲಿ ಬದುಕುವಂತೆ ಮಾಡಿರುವುದು ದುರಾದೃಷ್ಟಕರ ಬೆಳವಣಿಯಾಗಿದೆ ಎಂದು ಅಧ್ಯಕ್ಷರು ಬೇಸರ ವ್ಯಕ್ತ ಪಡಿಸಿದ್ದಾರೆ. ಜೆಡಿಎಸ್ ಅಭ್ಯರ್ಥಿ ಹೊರತು ಪಡಿಸಿ ಉಳಿದ ರಾಜಕೀಯ ಪಕ್ಷಗಳ ಅಭ್ಯರ್ಥಿಗಳ ಹತ್ತಿರ ಹಣವಿಲ್ಲವೇ, ಅವರು ಹಣವಿಲ್ಲದೇ ಚುನಾವಣೆ ಮಾಡುತ್ತಿದ್ದಾರೆಯೇ ಈ ದಾಳಿಯು ಬಿಜೆಪಿ ಸರ್ಕಾರದ ರಾಜಕೀಯ ಪ್ರೇರಿತ ದಾಳಿಯಾಗಿದೆ. ಇದನ್ನು ತೀವ್ರವಾಗಿ ಖಂಡಿಸುವ ಜೊತೆಗೆ ರವೀಂದ್ರಪ್ಪನವರೊಂದಿಗೆ ಮಾತನಾಡಿ ಸಂವಿಧಾನದ ಅಡಿಯಲ್ಲಿನ ಭಾರತೀಯ ಕಾನೂನಿನಡಿಯಲ್ಲಿ ಐಟಿ ಇಡಿ ಅಧಿಕಾರಿಗಳ ಅಧಿಕಾರ ದುರುಪಯೋಗದ ಬಗ್ಗೆ ಸಂಬಂಧಿಸಿದ ನ್ಯಾಯಾಲಯಕ್ಕೆ ದೂರು ನೀಡುವ ಬಗ್ಗೆ ಚರ್ಚಿಸಿ ಮುಂದಿನ ತಿರ್ಮಾನ ಕೈಗೊಳ್ಳಲಾಗುವುದು ಎಂದು ಸಿ ಶಿವು ಯಾದವ್ ಐ ಟಿ ದಾಳಿಯನ್ನು ತೀವ್ರವಾಗಿ ಖಂಡಿಸಿದ್ದಾರೆ.