i
ಉಪ್ಪಾರ ಸಮಾಜದ ಪುಟ್ಟರಂಗಶೆಟ್ಟಿಗೆ ಸಚಿವ ಸ್ಥಾನ ಕೊಡಿ-ಮುರಳಿ ಹೆಚ್ ಸಣ್ಣಕ್ಕಿ…
ಚಂದ್ರವಳ್ಳಿ ನ್ಯೂಸ್, ಶಿವಮೊಗ್ಗ:
ಕರ್ನಾಟಕ ರಾಜ್ಯದಲ್ಲಿ ಸುಮಾರು 45 ಲಕ್ಷ ಜನಸಂಖ್ಯೆ ಹೊಂದಿರುವ ಉಪ್ಪಾರ ಸಮಾಜವು ಮೂರು ಪಕ್ಷದಿಂದ ಸೇರಿ ಕೇವಲ ಒಂದು ಸೀಟಿಗೆ ತೃಪ್ತಿ ಪಟ್ಟಿದ್ದೇವೆ. ಉಪ್ಪಾರ ಸಮಾಜದ ಏಕೈಕ ಶಾಸಕ ಪುಟ್ಟರಂಗಶೆಟ್ಟಿ ಚಾಮರಾಜನಗರದಿಂದ ಸತತ ನಾಲ್ಕು ಬಾರಿ ಆಯ್ಕೆಯಾಗಿದ್ದು ಅವರಿಗೆ ಸಚಿವ ಸ್ಥಾನ ನೀಡಬೇಕೆಂದು ಶಿವಮೊಗ್ಗ ಜಿಲ್ಲಾ ಉಪ್ಪಾರ ಸಂಘದ ನಿರ್ದೇಶಕ ಮುರಳಿ ಹೆಚ್ ಸಣ್ಣಕ್ಕಿ ಮನವಿ ಮಾಡಿದ್ದಾರೆ.
ಅವರು ಪತ್ರಿಕಾ ಹೇಳಿಕೆ ನೀಡಿ ಮಾತನಾಡಿ, ಒಂದೆಡೆ ಹಿರಿತನ ಆಧಾರದಡಿ, ಹಿಂದುಳಿದ ವರ್ಗದ ಕೋಟಾದಡಿ, ನಾಲ್ಕು ಬಾರಿ ಆಯ್ಕೆ, ಇನ್ನೊಂದೆಡೆ ಸಿದ್ದರಾಮಯ್ಯನವರ ಆಪ್ತರು ಎಂದೆ ಗುರುತಿಸಿಕೊಂಡಿದ್ದಾರೆ. ಪುಟ್ಟರಂಗಶೆಟ್ಟಿ ಅವರು ಕಾಂಗ್ರೆಸ್ ಸರ್ಕಾರ ಇಲ್ಲದಿದ್ದಾಗಲೂ ನಮ್ಮ ನಾಯಕ ನಮ್ಮ ಸಿಎಂ ಸಿದ್ದರಾಮಯ್ಯ ನವರೇ ಎಂದು ಹೇಳುತ್ತಾ ಬಂದಿದ್ದಾರೆ. ಉಪ್ಪಾರ ಸಮಾಜವು ಸಣ್ಣ ಸಮಾಜ ಶಿಕ್ಷಣದಿಂದ, ರಾಜಕೀಯದಿಂದ ತುಂಬಾ ಹಿಂದುಳಿದಿದ್ದೇವೆ. ಸಿಎಂ ಹುದ್ದೆ ಅಲಂಕರಿಸುತ್ತಿರುವ ಸಿದ್ದರಾಮಯ್ಯನವರು ವರಣಾ ಕ್ಷೇತ್ರದಿಂದ ಈ ಬಾರಿ ಗೆಲ್ಲಲು ದೊಡ್ಡ ಮಟ್ಟದಲ್ಲಿ ಉಪ್ಪಾರ ಸಮಾಜ ಸಹಕಾರ ನೀಡಿದೆ ಎಂದು ಅವರು ತಿಳಿಸಿದ್ದಾರೆ.
ಉಪ್ಪಾರ ಸಮಾಜವು ರಾಜ್ಯದಲ್ಲಿ 35 ರಿಂದ 40 ಕ್ಷೇತ್ರಗಳಲ್ಲಿ ನಿರ್ಣಾಯಕ ಮತದಾರಗಳಿದ್ದೇವೆ. ಈ ಬಾರಿ ಕಾಂಗ್ರೆಸ್ ಸರ್ಕಾರ ಬರಲು ಸಮಾಜವು ದೊಡ್ಡ ಹಂತದಲ್ಲಿ ಪಾತ್ರವಹಿಸಿದೆ. ಚಾಮರಾಜನಗರ ಕ್ಷೇತ್ರದಲ್ಲಿ ನಿರಂತರವಾಗಿ ಚಟುವಟಿಕೆಯಲ್ಲಿ ತೊಡಗಿಕೊಂಡಿದ್ದು ಈ ಬಾರಿ ಜನರ ಆಶೀರ್ವಾದ, ಕುಲ ಗುರುಗಳ ಬೆಂಬಲ, ಸಿದ್ದರಾಮಯ್ಯನವರ ಕೃಪಾಕಟಾಕ್ಷದಿಂದ ಈ ಬಾರಿ ಆಯ್ಕೆಯಾಗಿದ್ದಾರೆ. ಆದ್ದರಿಂದ ಅವರಿಗೆ ಸಚಿವ ಸ್ಥಾನ ನೀಡುವಂತೆ ಶಿವಮೊಗ್ಗ ಜಿಲ್ಲಾ ಯುವಕರುಗಳ ವತಿಯಿಂದ ಭಗೀರಥ ಉಪ್ಪಾರ ಯುವ ಸೇನೆ ಅಧ್ಯಕ್ಷ, ಕರ್ನಾಟಕ ರಾಜ್ಯ ಉಪ್ಪಾರ ಯುವ ಘಟಕದ ಉಪಾಧ್ಯಕ್ಷ, ಶಿವಮೊಗ್ಗ ಜಿಲ್ಲಾ ಉಪ್ಪಾರ ಸಂಘದ ನಿರ್ದೇಶಕ ಮುರಳಿ ಹೆಚ್ ಸಣ್ಣಕ್ಕಿ ಮನವಿ ಮಾಡಿದ್ದಾರೆ.